ಬೆಂಗಳೂರು : ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಓಡಾಡಿದರೆ ನಷ್ಟದಲ್ಲಿರುವ ಸಾರಿಗೆ ಇಲಾಖೆ ಲಾಭದತ್ತ ಸಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು , ಸದ್ಯ ಸಾರಿಗೆ ಇಲಾಖೆ ನಷ್ಟದಲ್ಲಿದೆ, ಇನ್ನು ಮಹಿಳೆಯರ ಬಸ್ ಚಾರ್ಜ್ ನಾವು ನೀಡುತ್ತೇವೆ . ಹೀಗಾಗಿ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಹೆಚ್ಚೆಚ್ಚು ಓಡಾಡಿದಷ್ಟು ಸಾರಿಗೆ ಇಲಾಖೆಗೆ ಸರ್ಕಾರದಿಂದ ಹಣ ಹೋಗಲಿದೆ ಎಂದು ಹೇಳಿದರು.
![](https://pratidhvani.com/wp-content/uploads/2023/06/WhatsApp-Image-2023-06-11-at-1.36.38-PM-2.jpeg)
ಇದೇ ವೇಳೆ ರಾಜ್ಯದ ಮಹಿಳೆಯರಿಗೂ ಕಿವಿಮಾತು ಹೇಳಿದ ಸತೀಶ್ ಜಾರಕಿಹೊಳಿ, ಫ್ರೀ ಬಸ್ ಸಿಗುತ್ತೆ ಅಂತಾ ಸುಮ್ಮನೇ ಪ್ರಯಾಣ ಮಾಡೋದು ಅಲ್ಲ. ಮಹಿಳೆಯರ ಸಬಲೀಕರಣ ಕೂಡ ಆಗಬೇಕು. ಆಗ ಮಾತ್ರ ಈ ಯೋಜನೆಯ ನಿಜವಾದ ಉದ್ದೇಶ ಈಡೇರಲು ಸಾಧ್ಯ ಎಂದಿದ್ದಾರೆ.
![](https://pratidhvani.com/wp-content/uploads/2023/06/WhatsApp-Image-2023-06-11-at-1.36.38-PM.jpeg)
ನಾವು ನುಡಿದಂತೆ ನಡೆದಿದ್ದೇವೆ ಕೇವಲ ಮೂರನೇ ತಿಂಗಳಲ್ಲಿ ನಮ್ಮ ಭರವಸೆ ಈಡೇರಿಸಿದ್ದೇವೆ. ಇದೊಂದೇ ಅಲ್ಲ , ಉಳಿದ ಸುಮಾರು ಕೊಡುಗೆಗಳನ್ನು ಕೊಡುವ ಯೋಜನೆ ಹೊಂದಿದ್ದೇವೆ. ಎಲ್ಲವನ್ನೂ ಶೀಘ್ರದಲ್ಲಿಯೇ ಈಡೇರಿಸುತ್ತೇವೆ ಎಂಧು ಹೇಳಿದ್ರು.