Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅದೃಷ್ಟಕ್ಕೆ ಖಾದರ್‌‌ಗೆ ಸ್ಪೀಕರ್‌.. ಸ್ಪೀಕರ್‌ ಬಿಟ್ಟು ಕೆಟ್ಟಿದ್ದು ಯಾರು..?

ಕೃಷ್ಣ ಮಣಿ

ಕೃಷ್ಣ ಮಣಿ

May 27, 2023
Share on FacebookShare on Twitter

ಕಾಂಗ್ರೆಸ್‌ನಲ್ಲಿ ಸ್ಪೀಕರ್‌ ಹುದ್ದೆಯನ್ನು ಕೊಡುವುದಕ್ಕೆ ಸಾಕಷ್ಟು ಹರಸಾಹಸ ಮಾಡಲಾಯ್ತು. ಪ್ರಮುಖ ಹಿರಿಯ ನಾಯಕರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಪರಿ ಪರಿಯಾಗಿ ಬೇಡಿಕೊಳ್ಳುವ ಸ್ಥಿತಿಗೆ ಬಂದಿತ್ತು. ಯಾರನ್ನೇ ಕೇಳದರೂ ಮಂತ್ರಿ ಸ್ಥಾನವೇ ಬೇಕು. ನಾನು ಸ್ಪೀಕರ್‌ ಆಗಲಾರೆ ಎಂದು ಪಟ್ಟು ಹಿಡಿದಿದ್ದರು. ಅದೃಷ್ಟವಶಾತ್‌ ಯುಟಿ ಖಾದರ್‌ ಸ್ಪೀಕರ್‌ ಸ್ಥಾನವನ್ನು ಒಪ್ಪಿಕೊಳ್ಳುವ ಮೂಲಕ ಶಾಸಕಾಂಗ ಅತ್ಯುನ್ನತ ಸ್ಥಾನವಾದ ವಿಧಾನಸಭಾಧ್ಯಕ್ಷರ ಅಲಂಕರಿಸಿದ್ದಾರೆ. ವಿಶೇಷ ಅಂದರೆ ಯಾರೆಲ್ಲಾ ಸ್ಪೀಕರ್‌ ಸ್ಥಾನ ಒಲಿದು ಬಂದಿದ್ದಾಗ ಬೇಡ ಎಂದಿದ್ದರು, ಅದರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಮೈಸೂರಿನಲ್ಲಿ ಧ್ವನಿಸಿದ ಮಂಗಳ ಹಕ್ಕಿಯ ಇಂಚರ

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಜಾರ್ಖಂಡ್‌ನ ಬುಡಕಟ್ಟುಗಳ ಪ್ರತಿಭಟನೆ

ಗಾಂಧಿ –ಅಹಿಂಸೆಯ ಪ್ರವಾದಿಯೋ ಸ್ವಚ್ಛತಾ ರಾಯಭಾರಿಯೋ ?

ಶಿರಾ ಶಾಸಕ ಟಿ.ಬಿ ಜಯಚಂದ್ರಗೆ ಸಚಿವ ಸ್ಥಾನ ಮಿಸ್‌

ತುಮಕೂರು ಜಿಲ್ಲೆ ಶಿರಾ ಶಾಸಕ ಟಿ.ಬಿ ಜಯಚಂದ್ರ ವಿಧಾನಸಭೆಯಲ್ಲಿಯೇ ಅತ್ಯಂತ ಹಿರಿಯ (ಆಯ್ಕೆ ಆಧಾರದಲ್ಲಿ) ಶಾಸಕ. ಜಯಚಂದ್ರ ಅವರನ್ನು ಸ್ಪೀಕರ್ ಮಾಡಲು ಕಾಂಗ್ರೆಸ್‌ ಹೈಕಮಾಂಡ್ ಮುಂದಾಗಿತ್ತು. ಟಿ.ಬಿ ಜಯಚಂದ್ರ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನೂ ಮಾಡಿತ್ತು. ಕೆ.ಸಿ ವೇಣುಗೋಪಾಲ್, ಸುರ್ಜೇವಾಲ, ಖರ್ಗೆ, ಸಿಎಂ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದರು. ಯಾರ ಮನವಿಗೂ ಒಪ್ಪದ ಟಿ.ಬಿ ಜಯಚಂದ್ರ, ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡು ಶಿರಾಗೆ ತೆರಳಿದ್ದರು. ಟಿ.ಬಿ ಜಯಚಂದ್ರ ಅವರ ಅಂತಿಮ ನಿರ್ಧಾರದ ಬಗ್ಗೆ ತಿಳಿದುಕೊಳ್ಳಲು ಎಲ್ಲಾ ಹಿರಿಯ ನಾಯಕರೂ ಸೇರಿದಂತೆ ಎಲ್ಲರೂ ಕರೆ ಮಾಡಿದರೂ ಮೊಬೈಲ್‌ ಸ್ವಿಚ್‌ ಆಗಿತ್ತು. ಅಂತಿಮವಾಗಿ ಸ್ಪೀಕರ್‌ ಸ್ಥಾನವೂ ಇಲ್ಲ, ಸಚಿವ ಸ್ಥಾನವೂ ಇಲ್ಲದಂತಾಯ್ತು.

ಆರ್‌.ವಿ ದೇಶಪಾಂಡೆ ಸಚಿವ ಸ್ಥಾನದ ಕನಸು ಕನಸು

ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಾಗಿರುವ ಆರ್‌.ವಿ ದೇಶಪಾಂಡೆ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಕೊನೆ ಚುನಾವಣೆಯಲ್ಲಿ ಗೆದ್ದು ಮಂತ್ರಿ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಟಿ.ಬಿ ಜಯಚಂದ್ರ ವಿಧಾನಸಭಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳದಿದ್ದಾಗ ಹೈಕಮಾಂಡ್‌ ಕಣ್ಣು ಆರ್‌.ವಿ ದೇಶಪಾಂಡೆ ಕಡೆಗೆ ಹೊರಳಿತ್ತು. ಹೈಕಮಾಂಡ್ ಹಿರಿತನದ ಆಧಾರದಲ್ಲಿ ಸ್ಪೀಕರ್ ಹುದ್ದೆ ನೀಡಲು ಬಯಸಿತ್ತು. ಆದರೆ ನಾನು ಮಂತ್ರಿಯೇ ಆಗಬೇಕೆಂದು ಎಂದು ಹಠ ಹಿಡಿದು ಸ್ಪೀಕರ್ ಹುದ್ದೆಯನ್ನು ಆರ್‌.ವಿ ದೇಶಪಾಂಡೆ ನಿರಾಕರಿದ್ರು. ಕೊನೆ ಘಳಿಗೆಯಲ್ಲಿ ಬ್ರಾಹ್ಮಣ ಕೋಟಾದಲ್ಲಿ ಪೈಪೋಟಿ ನಡೆಸಿದ ದಿನೇಶ್ ಗುಂಡೂರಾವ್ ಮಂತ್ರಿ ಆಗಿ ಆಯ್ಕೆ ಆದರು. ಆರ್‌.ವಿ ದೇಶಪಾಂಡೆ ಅವರಿಗೂ ಸ್ಪೀಕರ್‌ ಸ್ಥಾನವೂ ಇಲ್ಲ, ಸಚಿವ ಸ್ಥಾನವೂ ಇಲ್ಲ ಎನ್ನುವಂತಾಯ್ತು.

ಸಚಿವ ಸ್ಥಾನದ ಬದಲು ಒಲಿದ ಡೆಪ್ಯೂಟಿ ಸ್ಪೀಕರ್‌ ಪೋಸ್ಟ್‌

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸಚಿವ ಸ್ಥಾನ ಪಡೆಯಲು ಸಾಕಷ್ಟು ಲಾಬಿ ಮಾಡಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಪುಟ್ಟರಂಗಶೆಟ್ಟಿ, ಉಪ್ಪಾರ ಸಮುದಾಯಕ್ಕೆ ಸೇರಿದ್ದು, ಬಿಜೆಪಿಯ ಬಲಾಢ್ಯ ನಾಯಕ ವಿ ಸೋಮಣ್ಣ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಆದರೆ ಸಚಿವ ಸ್ಥಾನ ಕೈತಪ್ಪಿದ್ದು, ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದೆ. ಮಂತ್ರಿ ಸ್ಥಾನ ಸಿಗದೆ ಹೋದರೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಡೆಪ್ಯೂಟಿ ಸ್ಪೀಕರ್‌ ಸ್ಥಾನ ಸಿಕ್ಕ ನೆಮ್ಮದಿ ಸಿಕ್ಕಂತಾಗಿದೆ. ನಾನು ಮಂತ್ರಿಯೇ ಆಗಬೇಕು ಎಂದು ಹಠ ಹಿಡಿದು ಕುಳಿತಿದ್ದ ಘಟಾನುಘಟಿ ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಚಳ್ಳೆಹಣ್ಣು ತಿನ್ನಿಸಿದೆ.

ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ಸಿಎಂ ಸೀಟಿನಲ್ಲಿ ಕೂತರೂ ಸಿದ್ದ ಸುಳ್ಳುಗಳಿಗೆ ಕಮ್ಮಿಯೇನು ಇಲ್ಲ: ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ  ವಾಗ್ದಾಳಿ
Top Story

ಸಿಎಂ ಸೀಟಿನಲ್ಲಿ ಕೂತರೂ ಸಿದ್ದ ಸುಳ್ಳುಗಳಿಗೆ ಕಮ್ಮಿಯೇನು ಇಲ್ಲ: ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

by ಪ್ರತಿಧ್ವನಿ
September 30, 2023
ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ
Top Story

ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ

by Prathidhvani
October 1, 2023
ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಿದ್ದರಾಮಯ್ಯ ಪ್ರಚಾರ: ಇಂದು ಮೊದಲ ಸಮಾವೇಶ
Top Story

ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಿದ್ದರಾಮಯ್ಯ ಪ್ರಚಾರ: ಇಂದು ಮೊದಲ ಸಮಾವೇಶ

by ಕೃಷ್ಣ ಮಣಿ
October 2, 2023
ಆತಂಕ ಹುಟ್ಟಿಸಿದ ನಟ ಜಗ್ಗೇಶ್ ಪೋಟೋಸ್:  ದಿಢೀರ್ ಆಸ್ಪತ್ರೆಗೆ ದಾಖಲು..!
Top Story

ಆತಂಕ ಹುಟ್ಟಿಸಿದ ನಟ ಜಗ್ಗೇಶ್ ಪೋಟೋಸ್:  ದಿಢೀರ್ ಆಸ್ಪತ್ರೆಗೆ ದಾಖಲು..!

by ಪ್ರತಿಧ್ವನಿ
September 29, 2023
ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಚಲಿಸುತ್ತಿದ್ದ ಕ್ರೇನ್​ಗೆ ಬೆಂಕಿ!
Top Story

ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಚಲಿಸುತ್ತಿದ್ದ ಕ್ರೇನ್​ಗೆ ಬೆಂಕಿ!

by ಪ್ರತಿಧ್ವನಿ
October 3, 2023
Next Post
ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಶಾಂತಿ, ಸಾಮರಸ್ಯ ಕದಡುವ ಕೆಲಸ ಮಾಡುವ ಸಂಘಟನೆಗಳ ಮೇಲೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಶಾಂತಿ, ಸಾಮರಸ್ಯ ಕದಡುವ ಕೆಲಸ ಮಾಡುವ ಸಂಘಟನೆಗಳ ಮೇಲೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?

ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist