ಲೋಕಸಭಾ(Loka Saba) ಚುನಾವಣಾ(Election) ಹೊಸ್ತಿಲಲ್ಲಿ ಮಾಜಿ ಪ್ರಧಾನಿ(Former Prime Minister) ಎಚ್.ಡಿ. ದೇವೇಗೌಡ(HD Deve Gowda) ಹಾಗೂ ಕುಟುಂಬ(Family) ಸದಸ್ಯರು ಮನೆ ದೇವರ ಮೊರೆ ಹೋಗಿದ್ದಾರೆ. ಚುನಾವಣೆಗೆ ತಯಾರಿ ಆರಂಭಗೊಂಡಿರುವ ಬೆನ್ನಲ್ಲೇ ಎಚ್.ಡಿ. ದೇವೇಗೌಡರ ಕುಟುಂಬ ಸದಸ್ಯರು, ಮನೆದೇವರು ಮಾವಿನಕೆರೆ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಎಚ್ಡಿಡಿ ಅವರ ಆರೋಗ್ಯ ಚೇತರಿಕೆ ನಂತರ ಪೂಜೆ ಸಲ್ಲಿಸೋದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು, ಈ ಹಿನ್ನೆಲೆಯಲ್ಲಿ ರಂಗನಾಥಸ್ವಾಮಿ ದೇಗುಲದಲ್ಲಿ 1001 ಕುಂಭಾಭಿಷೇಕ ಕಾರ್ಯಕ್ರಮ ನಡೆಸಿದರು. ದೇವೇಗೌಡರು ಮೂರು ದಿನಗಳಿಂದ ದೇವರ ಕಾರ್ಯದಲ್ಲಿ ಭಾಗಿಯಾಗಿದ್ದು, 80 ವರ್ಷಗಳ ನಂತರ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
![](https://pratidhvani.com/wp-content/uploads/2024/03/HDD-1024x482.png)
ಕುಂಭಾಭಿಷೇಕದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರ, ಅಷ್ಟ ನದಿಗಳಿಂದ ನೀರು ತರಿಸಿ ಕುಂಭಗಳ ತುಂಬಿಸಿ ಅಭಿಷೇಕ ಮಾಡಲಾಯಿತು. ಈ ನಡುವೆ ಅರ್ಚಕರು ವಿವಿಧ ಹೋಮ ಹವನಗಳನ್ನು ನಡೆಸಿದರು. ಇಂದು ಪೂಜಿಸಿದ್ದ 1001 ಕುಂಭಗಳಿಂದ ಅಭಿಷೇಕ ಮಾಡಿ, ರಂಗಸ್ವಾಮಿ ದೇಗುಲದ ಗೋಪುರ ಕಳಶಕ್ಕೆ ಕುಂಭಾಭಿಷೇಕ ಮಾಡಿದ ಬಳಿಕ ಅಂತಿಮವಾಗಿ ರಂಗನಾಥಸ್ವಾಮಿಗೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.
ಮನೆ ದೇವರ ಸನ್ನಿಧಿಯಲ್ಲಿ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ದೇವೇಗೌಡರು, ಪತ್ನಿ ಚೆನ್ನಮ್ಮ, ಪುತ್ರ ರೇವಣ್ಣ, ಸೊಸೆ ಭಬಾನಿ, ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್ಸಿ ಸೂರಜ್ ಭಾಗವಹಿಸಿದ್ದರು.
#HDD #HDDevegowda #Lokasaba #Election #HDRevanna #SurajRevanna #PrajwalRevanna