• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಭಾರತಕ್ಕೆ ಕಾಂಗ್ರೆಸ್​ ಅನಿವಾರ್ಯವೋ..? ಅಲ್ಲವೋ..? ಮೋದಿ ಹೇಳಿದ ಮಾತು..

ಪ್ರತಿಧ್ವನಿ by ಪ್ರತಿಧ್ವನಿ
April 10, 2024
in ರಾಜಕೀಯ
0
ಭಾರತಕ್ಕೆ ಕಾಂಗ್ರೆಸ್​ ಅನಿವಾರ್ಯವೋ..? ಅಲ್ಲವೋ..? ಮೋದಿ ಹೇಳಿದ ಮಾತು..
Share on WhatsAppShare on FacebookShare on Telegram

ADVERTISEMENT

‘ಕೃಷ್ಣಮಣಿ’

ಭಾರತ ದೇಶದಲ್ಲಿ ಲೋಕಸಭಾ ಚುನಾವಣೆ ರಂಗು ಪಡೆದುಕೊಂಡಿದೆ. ದೇಶದಲ್ಲಿ ಯಾರ ನಾಯಕತ್ವದಲ್ಲಿ ಮುನ್ನಡೆಯಬೇಕು ಎನ್ನುವುದನ್ನು ನಿರ್ಧರಿಸಲು ಈ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನ ಮಂತ್ರಿ ಆಗುವ ಹಂಬಲದಲ್ಲಿದ್ದಾರೆ. ಅತ್ತ ಕಾಂಗ್ರೆಸ್​ ನೇತೃತ್ವದ I.N.D.I.A ಒಕ್ಕೂಟ ಗೆಲುವು ಸಾಧಿಸಿದರೆ ರಾಹುಲ್​ ಗಾಂಧಿ ಪ್ರಧಾನ ಮಂತ್ರಿ ಆಗಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್​ ನಾಯಕರ ಮನಸ್ಸಲ್ಲಿದೆ. ಆದರೆ ಮತ್ತೆ ಮೋದಿ, ಮಗದೊಮ್ಮೆ ಮೋದಿ ಅನ್ನೋ ಘೋಷಣೆ ಜೊತೆಗೆ ಮೋದಿ ಮಾಡಿದ ಮಹಾನ್​ ಕಾರ್ಯಗಳು ಏನು..? ಕಳೆದ 10 ವರ್ಷದಲ್ಲಿ ಮೋದಿ ಸಾಧಿಸಿರುವ ಅಭಿವೃದ್ಧಿ ತೋರಿಸಿ ಮತ ಕೇಳುವಂತೆ ಜನರೇ ಕೇಳುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ಗುಣದ ಬಗ್ಗೆ ಹೇಳಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಸೋಮವಾರ ಚುನಾವಣಾ ಱಲಿ ಉದ್ದೇಶಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ಪಕ್ಷವನ್ನು ಹೀಗಳೆದಿದ್ದಾರೆ. ಕಾಂಗ್ರೆಸ್​ ಪಕ್ಷವನ್ನು ಟೀಕಿಸುವಾಗಲೂ ತಮಗೆ ಅರಿವು ಇಲ್ಲದಂತೆ ಕಾಂಗ್ರೆಸ್​ನ ಗುಣ ಎಂತಹದ್ದು ಎಂದು ದೇಶದ ಜನರ ಎದುರು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್​ ಪಕ್ಷವನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತುಪ್ಪದ ಜೊತೆಗೆ ಉರಿದರೂ ಅಥವಾ ಸಕ್ಕರೆ ಜೊತೆಗೆ ಬೆರೆಸಿದರೂ ಹಾಗಲಕಾಯಿ ರುಚಿ ಬದಲಾಗುವುದಿಲ್ಲ ಎಂದಿದ್ದಾರೆ. ಎಷ್ಟೊಂದು ಸುಂದರ ಮಾತುಗಳಲ್ಲಿ ಕಾಂಗ್ರೆಸ್​ ಪಕ್ಷವನ್ನು ವರ್ಣಿಸಿದ್ದಾರೆ ನರೇಂದ್ರ ಮೋದಿ..!?

ಕಾಂಗ್ರೆಸ್​ ಪಕ್ಷ ತನ್ನ ಸಿದ್ಧಾಂತವನ್ನು ಮತಗಳಿಗಾಗಿ ಬದಲಾಯಿಸಿಕೊಂಡಿಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ಬಡವರ, ಕಾರ್ಮಿಕರ, ರೈತರ ಪರವಾಗಿ ಎಂದೆಂದಿಗೂ ಇರುವ ರಾಜಕೀಯ ಪಕ್ಷ ಎನ್ನುವುದನ್ನು ಸ್ವತಃ ಪ್ರಧಾನ ಮಂತ್ರಿಯೇ ದೇಶದ ಜನರ ಮುಂದಿಟ್ಟಿದ್ದಾರೆ. ಇನ್ನು ಹಾಗಲಕಾಯಿ ಕಹಿಯೇ ಇರಬಹುದು. ಆದರೆ ಅದರ ಸತ್ವ ದೇಹಕ್ಕೆ ಹಾನಿಕರ ಅಲ್ಲ ಎನ್ನುವುದನ್ನು ದೇಶದ ಜನರು ಅಷ್ಟೇ ಅಲ್ಲ, ಇಡೀ ವಿಶ್ವದ ಜನರೇ ಒಪ್ಪಿಕೊಳ್ಳಬೇಕು. ಯಾಕಂದರೆ ಹಾಗಲಕಾಯಿಯಲ್ಲಿ ಇರುವ ಅತ್ಯುತ್ತಮ ಗುಣಗಳು ದೇಹಕ್ಕೆ ಅತ್ಯವಶ್ಯಕ. ಅದೇ ರೀತಿ ಮೋದಿಯವರ ಮಾತನ್ನು ಕೇಳಿದರೆ ದೇಹಕ್ಕೆ ಹಾಗಲಕಾಯಿ.. ಈ ದೇಶಕ್ಕೆ ಕಾಂಗ್ರೆಸ್​ ಪಕ್ಷ ಎನ್ನಬಹುದು.

ಪ್ರಧಾನಿ ಮೋದಿ ಹಾಗಲಕಾಯಿ ಕಹಿ ಎನ್ನುವುದನ್ನು ಮಾತ್ರ ಹೇಳಲು ಹೋಗಿದ್ದಾರೆ. ಆದರೆ ಹಾಗಲಕಾಯಿ ಕಹಿ ಗುಣವನ್ನು ಹೊಂದಿದ್ದರೂ ದೇಹಕ್ಕೆ ಒಳ್ಳೆಯದು ಎನ್ನುವುದನ್ನು ಮರೆತುಬಿಟ್ಟಿದ್ದಾರೆ. ಜೊತೆಗೆ ತಾನು ಅಂದರೆ ಬಿಜೆಪಿಯನ್ನು ತುಪ್ಪ ಅಥವಾ ಸಕ್ಕರೆಗೆ ಹೋಲಿಸಿದ್ದಾರೆ. ತುಪ್ಪವನ್ನು ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಬಹುದು. ಆದರೆ ಸಕ್ಕರೆ ಸಿಹಿಗೆ ಬಿಜೆಪಿ ಹೋಲಿಕೆ ಆದರೆ ಅದು ಆರೋಗ್ಯಕ್ಕೆ ಮಾರಕ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಒಪ್ಪಿಕೊಂಡಂತೆ ಆಗಲಿದೆ. ಇನ್ನು ಸಕ್ಕರೆ ಮಾಡುವುದರಿಂದ ಕೆಲವು ರೈತರಿಗೆ ಅನುಕೂಲಕರ, ಉಳಿದವರಿಗೆ ಅನಾನುಕೂಲ. ಅದೇ ರೀತಿ ಬಿಜೆಪಿ ಕೂಡ ಕೆಲವರಿಗೆ ಮಾತ್ರ ಅನುಕೂಲಕಾರಿ. ಉಳಿದವರಿಗೆ..?

==============

Tags: Congress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ವಿಶ್ವ ಸಂತೋಷ ವರದಿಯಲ್ಲಿ ಭಾರತ ಹಿಂದುಳಿದಿರಲು ಕಾರಣವೇನು ಗೊತ್ತಾ..?

Next Post

ಝೈದ್ ಖಾನ್ ಅಭಿನಯದ ಮುಂದಿನ ಚಿತ್ರ “ಕಲ್ಟ್” .

Related Posts

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು
ರಾಜಕೀಯ

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

by ಪ್ರತಿಧ್ವನಿ
April 24, 2026
0

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭೇಟಿಗಳ ಕುರಿತು ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ. “ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ, ಆದರೆ ಯಾರು ಎಂಬುದನ್ನು...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
Next Post
ಝೈದ್ ಖಾನ್ ಅಭಿನಯದ ಮುಂದಿನ ಚಿತ್ರ “ಕಲ್ಟ್” .

ಝೈದ್ ಖಾನ್ ಅಭಿನಯದ ಮುಂದಿನ ಚಿತ್ರ "ಕಲ್ಟ್" .

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada