ಮೈಸೂರು: ಪಿಂಪ್ ಸ್ಯಾಂಟ್ರೊ ರವಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ಗುಜರಾತ್ ನಲ್ಲಿ ಸ್ಯಾಂಟ್ರೊ ರವಿಯನ್ನು ಬಂಧಿಸಲಾಗಿದೆ.
ಮೈಸೂರು ಪೋಲಿಸ್ ಆಯುಕ್ತರ ಕಛೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ವಿಚಾರ ತಿಳಿಸಿದರು.
ಸ್ಯಾಂಟ್ರೊ ರವಿ ವಿರುದ್ಧ ಜನವರಿ 2 ರಂದು ಮೈಸೂರಿನ ವಿಜಯನಗರ ಪೋಲಿಸ್ ಸ್ಟೇಷನ್ ನಲ್ಲಿ ಅವನ ಪತ್ನಿ ರೇಪ್ ಮತ್ತು ಕಿರುಕುಳದ ದೂರು ದಾಖಲಿಸಿದ್ದಳು.
ತರುವಾಯ ಮೈಸೂರು ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ ಸ್ಯಾಂಟ್ರೊ ರವಿ ಕಳೆದ 11 ದಿನದಿಂದ ತಲೆ ಮರೆಸಿಕೊಂಡಿದ್ದನು. ಮೈಸೂರು ಸೇರಿದಂತೆ ಹೊರ ಜಿಲ್ಲೆಯಲ್ಲಿ ಇವನ ಬಂಧನಕ್ಕೆ ಪೋಲಿಸರು ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.
ಆದರೆ ಸ್ಯಾಂಟ್ರೊ ರವಿ ಕರ್ನಾಟಕ ಬಿಟ್ಟು ಎಸ್ಕೇಪ್ ಆಗಿದ್ದನು. ಈ ಹಿನ್ನೆಲೆ ಇವನ ಬಂಧನಕ್ಕೆ 7 ರಾಜ್ಯಗಳಲ್ಲಿ ಪೋಲಿಸರು ಆಪರೇಷನ್ ಮಾಡಿದ್ದರು. ಕೊನೆಗೆ ಸ್ಯಾಂಟ್ರೊ ರವಿಯನ್ನು ಗುಜರಾತ್ ನಲ್ಲಿ ಅರೆಸ್ಟ್ ಮಾಡಲಾಗಿದೆ.
ಹೋಂ ಮಿನಿಷ್ಟರ್ ಅರಗ ಜ್ಞಾನೇಂದ್ರ ಕೂಡ ಗುರುರಾತ್ ನಲ್ಲಿ ಇದ್ದಾರೆ.ಅಲ್ಲಿ ಸಿಕ್ಕಿದ್ರೆ ವಿದೇಶಕ್ಕೆ ಕಳಿಸೊ ಪ್ಲಾನ್ ಏನಾದರೂ ಇತ್ತಾ ಅಂತಾ ಗೊತ್ತಿಲ್ಲ.. ಆದ್ರೆ ಇಲ್ಲಿನ ರಾಜಕೀಯ ನಾಯಕರ ಹೆಸರು ಹೊರ ಬರುತ್ತೆ. ಸ್ಯಾಂಟ್ರೋ ರವಿ ರಕ್ಷಣೆ ಮಾಡಲು ಹೋರಟಿದ್ರಾ ನನಗೆ ಗೊತ್ತಿಲ್ಲ. .ಗುಜರಾತ್ ನಲ್ಲಿ ಅರೆಸ್ಟ್ ಆಗಿದ್ದಾನೆ ಅಂದ್ರೆ ನನಗೆ ಆಗೆ ಅನ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಕು ಮಾರಸ್ವಾಮಿಯವರು ಹೇಳಿದ್ದಾರೆ