ಕೆಆರ್ಎಸ್(KRS) ಸುತ್ತಮುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾರ್ಥ(Testing) ಸ್ಫೋಟ(Blast) ನಡೆಸುವಂತೆ ಉಚ್ಚ ನ್ಯಾಯಾಲಯ(High Court) ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜಾರ್ಖಂಡ್(Jharkhand)ನ ವಿಜ್ಞಾನಿಗಳು ಹಾಗೂ ತಜ್ಞರ ತಂಡ ಇಂದು(ಮಾ.5) ಮಂಡ್ಯ(Mandya) ಜಿಲ್ಲೆಗೆ ಆಗಮಿಸುತ್ತಿದೆ.
ಆರು ತಿಂಗಳೊಳಗೆ ಪ್ರಾಯೋಗಿಕ ಸ್ಫೋಟ ನಡೆಸಿ ವರದಿ ನೀಡುವಂತೆ ಹೈಕೋರ್ಟ್(High Court) ಆದೇಶ ನೀಡಿರುವುದರಿಂದ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಅದರಂತೆ, ರೈತ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆ ಸಲಾಗಿತ್ತು. ಆದರೆ ಆ ಪ್ರಯತ್ನ ವಿಫಲವಾಗಿತ್ತು. ಆದರೂ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದು ತಿಳಿಸಿತ್ತು. ಅದರಂತೆ, ಮಾ. 5ರಂದು ಜಾರ್ಖಂಡ್ನ ವಿಶೇಷ ತಜ್ಞರ ತಂಡ ಆಗಮಿಸುತ್ತಿದ್ದು, KRS ಸುತ್ತಮುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲು ಜಾಗ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.
ತಜ್ಞರು, ರೈತ(Raitha) ಮುಖಂಡರ ಸಭೆ: ಮದ್ದೂರಿನ ಮರಳಿಗ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ(Minister) ಎನ್.ಚಲುವರಾಯಸ್ವಾಮಿ(Cheluvarayaswamy), ಮಂಗಳವಾರ ಪರೀಕ್ಷಾರ್ಥ ಸ್ಫೋಟ ನಡೆಸಲು ತಜ್ಞರು ಆಗಮಿಸುತ್ತಿದ್ದಾರೆ. ನ್ಯಾಯಾಲಯವೂ ಈಗಾಗಲೇ ಪ್ರಾಯೋಗಿಕ ಸ್ಫೋಟ ನಡೆಸುವಂತೆ ಆದೇಶ ನೀಡಿದೆ. ಅದರಂತೆ, ಪರೀಕ್ಷಾರ್ಥ ಸ್ಫೋಟ ಮಾಡಬೇಕಾ? ಬೇಡವಾ? ಎನ್ನುವುದನ್ನು ತಜ್ಞರು ಹಾಗೂ ರೈತರ ಸಭೆಯಲ್ಲಿ ಚರ್ಚಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಸಭೆ ನಡೆಸಿ ಎಲ್ಲರನ್ನೂ ಮನವೊಲಿಸಬೇಕಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ತಜ್ಞರ ತಂಡದ ಆಗಮನ ಹಾಗೂ ಪರೀಕ್ಷಾರ್ಥ ಸ್ಫೋಟವನ್ನು ವಿರೋಧಿಸಿ ಗೋಬ್ಯಾಕ್(Goback) ಚಳವಳಿ ನಡೆಸಲು ರೈತಸಂಘ ಹಾಗೂ ಬಿಜೆಪಿ ನಿರ್ಧರಿಸಿವೆ. KRS ಜಲಾಶಯದ ಆವರಣದಲ್ಲಿಯೇ ಪ್ರತಿಭಟನೆ, ಧರಣಿ ನಡೆಸಲು ಮುಂದಾಗಿವೆ. ಕೆಆರ್ಎಸ್(KRS) ಜಲಾಶಯದ ಸುರಕ್ಷತೆ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ನಡೆಸಲು ಬಿಡುವುದಿಲ್ಲ. ಮಂಗಳವಾರ ಗೋಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. BJPಯೂ ಗೋಬ್ಯಾಕ್ ಚಳವಳಿ ನಡೆಸಲು ಮುಂದಾಗಿದೆ.
#KRS #Dam #Mandya #TrailBlast #BJPKarnataka #SumalathaAmbreesh