ಬೆಂಗಳೂರು: ರಾಜ್ಯದಲ್ಲಿ ಇಂಧನ ಸಚಿವರಾಗಿ ಕೆ.ಜೆ ಜಾರ್ಜ್ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರದ ಜನರ ಸಮಸ್ಯೆ ಆಲಿಸೋದಕ್ಕೆ ಮುಂದಾಗಿದ್ದಾರೆ. ಆ ಮೂಲಕ ಆಯ್ಕೆ ಮಾಡಿದ ಜನರಿಗೆ ನೇರವಾಗಿ ಧನ್ಯವಾದಗಳನ್ನ ಕೂಡ ಸಲ್ಲಿಸಿದ್ದಾರೆ. ಇದೇ ವೇಳೆ ಕ್ಷೇತ್ರದ ಜನರ ಸಮಸ್ಯೆಗಳನ್ನ ಬಗೆ ಹರಿಸುವ ನಿಟ್ಟಿನಲ್ಲಿ ಕೂಡ ಅಧಿಕಾರಿಗಳಿಗೆ ಒಂದಷ್ಟು ಸೂಚನೆಯನ್ನ ಕೂಡ ನೀಡಿದ್ದಾರೆ.

ಮಾನ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶಾಸಕರ ಕಚೇರಿಗೆ ಭೇಟಿ ನೀಡಿ, ಸರ್ವಜ್ಞನಗರ ಕ್ಷೇತ್ರದ ನಿವಾಸಿಗಳು, ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಒಂದಷ್ಟು ಹೊತ್ತುಗಳ ಕಾಲ ಸಂವಾದವನ್ನ ಕೂಡ ನಡೆಸಿದರು.ಶಾಸಕರ ಭೇಟಿ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದಿದ್ದರಿಂದ ಅವರೊಂದಿಗೆ ಚರ್ಚಿಸಿ, ಸರ್ವಜ್ಞನಗರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಒಂದಷ್ಟು ಪರಿಶೀಲನೆಯನ್ನ ನಡೆಸಿದರು.
ಇದರ ಜೊತೆಗೆ ವಿವಿಧ ಕಾರ್ಯಕ್ರಮಗಳಿಗೆ ಕೂಡ ಚಾಲನೆ ನೀಡಿದ ಅವರು ಸಾಮಾಜಿಕವಾಗಿ ಜನರಿಗೆ ಸಹಾಯವಾಗುಯವಂತ ಕೆಲಸದಲ್ಲಿ ಸದಾ ತೊಡಗಿಸಿಕೊಳ್ಳುವಂತೆ ಹಾಗೂ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗ ಸೂಚನೆಯನ್ನ ಕೂಡ ನೀಡಿದ್ದಾರೆ. ಒಟ್ಟಾರೆಯಾಗಿ ಇದೀಗ ಸಚಿವರ ಈ ನಡೆಗೆ ವ್ಯಾಪಕವಾದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.