ಭಾರತದಲ್ಲಿ ಮುಂದಿನ ಐದತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡಬೇಕು ಅನ್ನೋ ಉದ್ದೇಶ ಹೊಂದಿದ್ದೇವೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಅದೇ ಕಾರಣಕ್ಕೆ ಸರ್ಕಾರ ಎಲೆಕ್ಟ್ರಾನಿಕ್ ವಾಹನಗಳ ಕಡೆಗೆ ಪ್ರೋತ್ಸಾಹ ಕೊಡುತ್ತೇವೆ ಎಂದಿತ್ತು. ಈಗಾಗಲೇ ಜನರೂ ಕೂಡ ಎಲೆಕ್ಟ್ರಾನಿಕ್ ವಾಹನಗಳ ಖರೀದಿ ಕಡೆಗೆ ಮನಸ್ಸು ಮಾಡಿದ್ದಾರೆ. ಇನ್ನು ಬೆಂಗಳೂರಿನಂತಹ ನಗರಗಲ್ಲೂ ಎಲೆಕ್ಟ್ರಾನಿಕ್ ಬಿಎಂಟಿಸಿ ಬಸ್ಗಳ ಸಂಚಾರ ನಡೆಯುತ್ತಿದೆ. ಎಲೆಕ್ಟ್ರಾನಿಕ್ ವಾಹನಗಳ ಸಂಚಾರದಿಂದ ವಾತಾವರಣದಲ್ಲಿ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಜೊತೆಗೆ ಮುಗಿದು ಹೋಗುವ ಇಂಧನಗಳಾದ ಪೆಟ್ರೋಲ್, ಡೀಸೆಲ್ ಬಳಕೆ ಮಾಡುವುದು ವಿಶ್ವದ ಕನಸಾಗಿದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳು ಜನರನ್ನು ಆತಂಕಕ್ಕೆ ತಳ್ಳಿದೆ.
ಕಂಡ ಕಂಡಲ್ಲಿ ಎಲೆಕ್ಟ್ರಾನಿಕ್ ವಾಹನಗಳಿಗೆ ಬೆಂಕಿ ಬೀಳ್ತಿರೋದ್ಯಾಕೆ..?
![](https://pratidhvani.com/wp-content/uploads/2023/10/e-bike-fire-chichester-fire-station-facebook-1024x942.jpg)
ಎಲೆಕ್ಟ್ರಾನಿಕ್ ವಾಹನಗಳು ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವಾಗಲೇ ಬೆಂಕಿ ಬೀಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಎಲೆಕ್ಟ್ರಾನಿಕ್ ವಾಹನಗಳನ್ನು ಕೊಂಡುಕೊಳ್ಳುವ ಮನಸ್ಥಿತಿಯಲ್ಲಿ ಇರುವ ಜನರಿಗೆ ಬೆಂಕಿ ಬೀಳುತ್ತಿರುವ ಪ್ರಕರಣಗಳು ಆತಂಕ ಸೃಷ್ಟಿಸಿದೆ. ಈ ಮೊದಲು ಮೊಪೆಡ್ಗಳಲ್ಲೂ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಾಗಿದ್ದವು. ಇತ್ತೀಚಿಗೆ ಸ್ಕೂಟರ್ಗಳಿಗೆ ಬೆಂಕಿ ಬೀಳುವ ಪ್ರಮಾಣ ಕಡಿಮೆ ಆಗಿದೆ. ಆದರೆ ಕಾರುಗಳಲ್ಲಿ ಬೆಂಕಿ ಬೀಳುವ ಪ್ರಮಾಣ ಇನ್ನೂ ಕಡಿಮೆ ಆಗಿಲ್ಲ. ಇದರ ನಡುವೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಲೆಕ್ಟ್ರಾನಿಕ್ ವಾಹನಗಳ ಮಾರಾಟಕ್ಕೆ ಪೆಟ್ಟು ಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಮಾಡುವ ಮೂಲಕ ವಾಯುಮಾಲಿನ್ಯ ನಿಯಂತ್ರಣ ಮಾಡುವ ನಿಲುವಿಗೆ ತದ್ವಿರುದ್ಧ ಆಗಿದೆ.
ಗ್ರಾಹಕರಿಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ ಭಾರತ ಸರ್ಕಾರ..!
![](https://pratidhvani.com/wp-content/uploads/2023/10/images-4.jpeg)
ಮೊದಲಿಗೆ ಎಲೆಕ್ಟ್ರಾನಿಕ್ ವಾಹನಗಳ ಮmಾರಾಟಕ್ಕೆ ಪ್ರೋತ್ಸಾಹ ಕೊಟ್ಟಿದ್ದ ನರೇಂದ್ರ ಮೋದಿ ಸರ್ಕಾರ, ಕೆಲವೇ ತಿಂಗಳುಗಳಲ್ಲಿ ಸಬ್ಸಿಡಿ ತಡೆಯುವ ಕೆಲಸ ಮಾಡಿದೆ. ಇದೀಗ ಎಲೆಕ್ಟ್ರಾನಿಕ್ ವಾಹನಗಳಿಗೆ ಕಂಡ ಕಂಡಲ್ಲಿ ಬೆಂಕಿ ಬೀಳುತ್ತಿರುವುದು ಹಾಗು ಕೇಂದ್ರ ಸರ್ಕಾರ ಸಬ್ಸಿಡಿ ನೀಡದೆ ಎಲೆಕ್ಟ್ರಾನಿಕ್ ವಾಹನಗಳ ದರ ಏಕಾಏಕಿಯಾಗಿ ಏರಿಕೆ ಆಗಿರುವುದು ಸರ್ಕಾರದ ಸದುದ್ದೇಶ ಈಡೇರುವುದು ಕಷ್ಟ ಸಾಧ್ಯ. ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಲ್ ಹಾಗು ಡೀಸೆಲ್ ರಹಿತ ವಾಹನಗಳ ಕನಸು ಕಾಣುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಗೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಎಲೆಕ್ಟ್ರಾನಿಕ್ ವಾಹನಗಳಿಗೆ ಸಬ್ಸಿಡಿ ನೀಡುವ ಮೂಲಕ ಖರೀದಿಗೆ ಪ್ರೋತ್ಸಾಹ ನೀಡುವ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲಬೇಕಿತ್ತು. ಆದರೆ ಸರ್ಕಾರ ಕೂಡ ಸಬ್ಸಿಡಿ ನೀಡದೆ ಎಡವಟ್ಟು ಮಾಡುತ್ತಿರುವುದು ಎಲೆಕ್ಟ್ರಾನಿಕ್ ವಾಹನಗಳ ಉದ್ದೇಶ ಈಡೇರುವ ಸಾಧ್ಯತೆ ಕಡಿಮೆ.
ಶೇಕಡ 41ರಷ್ಟು ಎಲೆಕ್ಟ್ರಾನಿಕ್ ವಾಹನಗಳ ಮಾರಾಟ ಹೆಚ್ಚಳ..!
ದ್ವಿಚಕ್ರ ವಾಹನ ಮಾರಾಟದಲ್ಲಿ ಶೇಕಡ 23.42 ರಷ್ಟು ಹಾಗು ತ್ರಿಚಕ್ರ ವಾಹನ ಮಾರಾಟದಲ್ಲಿ ಶೇಕಡ 73.40 ರಷ್ಟು ಕಾರುಗಳ ಮಾರಾಟದಲ್ಲಿ ಶೇಕಡ 185.46 ರಷ್ಟು ಬಸ್ಗಳ ಮಾರಾಟದಲ್ಲಿ ಶೇಕಡ – 52.12 ರಷ್ಟು ಹಾಗು ಲಘು ಸರಕು ಸಾಗಣೆ ವಾಹನ ಶೇಕಡ 142.85 ರಷ್ಟು ವಾಹನ ಮಾರಾಟ ನಡೆದಿದೆ. ಅಂದರೆ ದೇಶದಲ್ಲಿ ಶೇಕಡ 41 ರಷ್ಟು ಮಾರಾಟ ಆಗಿದೆ. ಸಬ್ಸಿಡಿ ಸಿಗುತ್ತಿದ್ದ ಕಾರಣಕ್ಕೆ ಪ್ರಯಾಣಿಕರು ಎಲೆಕ್ಟ್ರಾನಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದರು. ಇತ್ತೀಚಿಗೆ ಸಬ್ಸಿಡಿ ಸ್ಥಗಿತ ಆಗಿರುವ ಕಾರಣಕ್ಕೆ ಮಾರಾಟ ವ್ಯವಸ್ಥೆಯಲ್ಲಿ ಕುಸಿತ ಕಾಣುವ ಸಂಭವ ಹೆಚ್ಚಾಗಿದೆ. ಸ್ಕೂಟರ್ಗಳನ್ನು ಸುಧಾರಣೆ ಮಾಡಿ, ಮಾರಾಟಕ್ಕೆ ಅವಕಾಶ ಕೊಟ್ಟಿರುವಂತೆ ಕಾರುಗಳಲ್ಲೂ ಸುಧಾರಣೆ ಮಾಡಿ ಮಾರಾಟ ಮಾಡುವ ಅವಕಾಶವನ್ನು ಸರ್ಕಾರ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಮಾರಾಟಕ್ಕೆ ಪ್ರೋತ್ಸಾಹಿಸುವ ಮಾತನಾಡುವ ಸರ್ಕಾರ, ಸಬ್ಸಿಡಿ ರದ್ದು ಮಾಡುವ ಮೂಲಕ ವಿರೋಧಾಭಾಸ ಮಾಡಿದೆ ಎನ್ನಬಹುದು.
-ಕೃಷ್ಣಮಣಿ