ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷವು ಗೆಲುವಿನತ್ತ ಮುಖಮಾಡಿತಿದ್ದಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ಕುರಿತು ಸಮಾವೇಶವನ್ನು ನಡೆಸಿದ್ದಾರೆ. “ಎಎಪಿ ವಿರುದ್ಧ ಎಲ್ಲಾ ವಿರೋಧಿಗಳು ಒಟ್ಟುಗೂಡಿ, ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದು ಹೇಳಿದರು. ಆದರೆ ಕೇಜಿರ್ವಾಲ್ ಭಯೋತ್ಪಾದಕ ಅಲ್ಲ, ಅವರು ನಿಜವಾದ ದೇಶಭಕ್ತ ಎಂದು ದೇಶದ ಜನರು ತೀರ್ಪು ನೀಡಿದ್ದಾರೆ” ಎಂದು ಅವರು ಹೇಳಿದರು.
“ಸ್ವಾತಂತ್ರ್ಯ ದೊರೆತ ನಂತರ ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ ಏನೂ ಆಗುವುದಿಲ್ಲ ಎಂದು ಭಗತ್ ಸಿಂಗ್ ಒಮ್ಮೆ ಹೇಳಿದ್ದರು, ಕಳೆದ 75 ವರ್ಷಗಳಲ್ಲಿ, ಈ ಪಕ್ಷಗಳು ಮತ್ತು ರಾಜಕಾರಣಿಗಳು ಬ್ರಿಟಿಷರ ವ್ಯವಸ್ಥೆಯನ್ನು ಉಳಿಸಿಕೊಂಡಿದ್ದಾರೆ, ಅವರು ಯಾವುದೇ ಶಾಲೆ ಅಥವಾ ಆಸ್ಪತ್ರೆಗಳನ್ನು ಮಾಡಲಿಲ್ಲ. ಕಳೆದ 7 ವರ್ಷಗಳಲ್ಲಿ ಎಎಪಿ ವ್ಯವಸ್ಥೆಯನ್ನು ಬದಲಾಯಿಸಿದೆ” ಎಂದು ಕೇಜ್ರಿವಾಲ್ ಹೇಳಿದರು.

“ಭಗತ್ ಸಿಂಗ್ ಮತ್ತು ಬಾಬಾಸಾಹೇಬರ ಕನಸುಗಳು ನನಸಾಗುತ್ತವೆ, ನಾವೆಲ್ಲರೂ ಹೊಸ ಭಾರತವನ್ನು ಕಟ್ಟುವ ಪ್ರತಿಜ್ಞೆ ಮಾಡಬೇಕಾಗಿದೆ, ಅಲ್ಲಿ ದ್ವೇಷಕ್ಕೆ ಸ್ಥಳವಿಲ್ಲ, ನಮ್ಮ ಸಹೋದರಿಯರು ಮತ್ತು ತಾಯಂದಿರು ಎಲ್ಲಿ ಸುರಕ್ಷಿತವಾಗಿರುತ್ತಾರೆ, ಅಲ್ಲಿ ಶ್ರೀಮಂತರು ಮತ್ತು ಬಡವರು ಇಬ್ಬರೂ ಉತ್ತಮ ಶಿಕ್ಷಣ ಪಡೆಯುತ್ತಾರೆ ಎಂದು ಅವರು ಹೇಳಿದರು.