ಚೆನ್ನಪಟ್ಟಣದ (chennapattana) ರೋಡ್ ಶೋನಲ್ಲಿ ಘರ್ಜಿಸಿದ ಅಮಿತ್ ಶಾ (smith sha) ಡಾಕ್ಟರ್ ಮಂಜುನಾಥ್ ೫ ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ಅಬ್ಬರಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಬಿಜೆಪಿ ಮತ್ತು ಜೆಡಿಎಸ್ ನಾಯಕರ (BJP & jds ) ಜೊತೆಗೆ ಸಾಲು ಸಾಲು ಸಭೆಗಳನ್ನು ನಡೆಸಿದ ಅಮಿತ್ ಶಾ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕು ಎಂಬ ಟಾರ್ಗೆಟ್ ನೀಡಿದ್ದಾರೆ.
![](https://pratidhvani.com/wp-content/uploads/2024/04/IMG_6544.jpeg)
ಸೋಮವಾರ ರಾತ್ರಿ ತಡವಾಗಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಷಾ ಮಂಗಳವಾರ ಬೆಳ್ಳಂಬೆಳ್ಳಗ್ಗೆಯಿಂದಲೇ ಸಾಲು ಸಾಲು ನಾಯಕರ ಸಭೆ ನಡೆಸಿದ್ದರು ಯಡಿಯೂರಪ್ಪ (BS Yediyurappa) ,ಬಿ ವೈ ವಿಜಯೇಂದ್ರ (vijayendra) ,ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸೇರಿದ ಹಾಗೆ ಪ್ರಮುಖ ನಾಯಕರ ಜೊತೆಗೆ ಚುನಾವಣೆ ಗೆಲ್ಲುವ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದ್ದರು.
![](https://pratidhvani.com/wp-content/uploads/2024/04/IMG_6545.jpeg)
ಈ ಬಾರಿ ಶತಾಯಗತಾಯ ಡಿಕೆ ಬ್ರದರ್ಸ್ ನ (Dk brothers) ಕಟ್ಟಿ ಹಾಕಬೇಕು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಗೆ ಸೋಲಿನ ರುಚಿ ತೋರಿಸಬೇಕು ಎಂದು ಪಣತೊಟ್ಟಿರುವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ಎಂದು ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ಆಯೋಜಿಸಿದರು ಈ ರೋಡ್ ಶೋನಲ್ಲಿ ಅಬ್ಬರಿಸಿದ ಅಮಿತ್ ಷಾ ಯಾವುದೇ ಸಂದೇಹ ಬೇಡ ಈ ಬಾರಿ ಡಾಕ್ಟರ್ ಮಂಜುನಾಥ್(Dr.manjunath) 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ ಅಂತ ಡಿಕೆ ಬ್ರದರ್ಸ್ ವಿರುದ್ಧ ಅಬ್ಬರಿಸಿದ್ದಾರೆ.