ಬೇದಾ ಬಾವ ನೋಡದೆ ಅಂಬಿ-ಅಪ್ಪು ಗುಡಿ ಕಟ್ಟಿದ್ದಿರಿ ನಿಮ್ಮ ಅಭಿಮಾನಕ್ಕೆ ನಾವು ಸದ ಋಣಿ. ನಿಮ್ಮ ಮನಸ್ಸು ಹಾಲಿನಂತೆ ಎಂದು ಹಿರಿಯ ನಟ ದೊಡ್ಡಣ್ಣ ಡಿ ಹೊಸೂರು ಗ್ರಾಮಸ್ಥರನ್ನು ಹಾಡಿ ಹೊಗಳಿದ್ದಾರೆ.
ಅಂಬಿ-ಅಪ್ಪು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ದೊಡ್ಡಣ್ಣ ಕಲಿಯುಗ ಕರ್ಣ ಅಂಬರೀಶ್, ಹೃದಯವಂತರಾಗಿದ್ದರು ಅಂಬರೀಶ್ ಅವರು ಬೈದಿಲ್ಲ ಅಂದ್ರೆ ನಮಗೆ ತಿಂದಿದ ಅನ್ನ ಮೈಗೆ ಹತ್ತುತ್ತಿರಲಿಲ್ಲ. ಅವರ ಕುಟುಂಬದಲ್ಲಿ ನಾವು ಒಬ್ಬರಾಗಿದ್ದೇವೆ.
ಅವರನ್ನ ಪ್ರೀತಿಸುವ ಜನರು ಅಪಾರವಾಗಿದ್ದಾರೆ ಅಪ್ಪು ಕೂಡ ಮುತ್ತುರಾಜನ ಮಗ ಮುತ್ತುದರ್ಶನ್ ಬರಬೇಕಿತ್ತು, ಕಾರಣಾಂತರ ಬರಕ್ಕಾಗಿಲ್ಲ. ಸ್ವಾಭಿಮಾನಿ ಸಂಸದೆ ಎಲ್ಲಿರುತ್ತಾರೋ ಅಲ್ಲಿ ಡಿ ಬಾಸ್ ಇರ್ತಾರೆ ಜೊತೆ ಇಡೀ ಚಿತ್ರರಂಗ ಸುಮಲತಾ ಅವರ ಜೊತೆ ಇರುತ್ತೆ. ಅಭಿಷೇಕ್ ಅವರು ಕೂಡ ನಿಮ್ಮ ಜೊತೆ ಇರುತ್ತಾರೆ ನಿಮ್ಮ ಆಶೀರ್ವಾದ ಅಂಬರೀಶ್ ಕುಟುಂಬದ ಮೇಲೆ ಇರಲಿ ಎಂದಿದ್ದಾರೆ.
ಮಾತನಾಡುವ ವೇಳೆ ಅಂಬಿಯನ್ನ ನೆನದು ಸೂರ್ಯವಂಶ ಚಿತ್ರದ ಡೈಲಾಗ್ ಹೊಡೆದು ಜನರನ್ನು ರಂಜಿಸಿ ತಮ್ಮ ಭಾಷಣಕ್ಕೆ ವಿರಾಮ ನೀಡಿದ್ದರು. .