ಮಂಡ್ಯದ ಗಂಡು, ರೆಬೆಲ್ಸ್ಟಾರ್ ಅಂಬರೀಶ್ 4ನೇ ಪುಣ್ಯಸ್ಮರಣೆ ಅಂಗವಾಗಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಡಿ/ಹೊಸೂರು ಗ್ರಾಮದಲ್ಲಿ ಅಂಬರೀಶ್ ಹಾಗೂ ಪುನೀತ್ ರಾಜ್ಕುಮಾರ್ ಪ್ರತಿಮೆಯನ್ನ ಗ್ರಾಮಸ್ಥರು ನಿರ್ಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದೆ ಸುಮಲತಾ ಮಾತನಾಡಿ ಅಂಬರೀಶ್ ಅಭಿಮಾನಿಗಳನ್ನ ಸ್ನೇಹಿತರ ತರ ನೋಡ್ಕೊಂಡಿದ್ರು ಇವತ್ತಿಗೂ ಅಂಬರೀಶ್ ಅವರಿಗೆ ಅಭಿಮಾನಿಗಳು ಪ್ರಾಣ ಕೊಡ್ತಾರೆ. ಅಂಬರೀಶ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು ನಿಮ್ಮ ಈ ಪ್ರೀತಿ, ಅಭಿಮಾನಕ್ಕೆ ನಾವು ಚಿರ ಋಣಿ ಎಂದಿದ್ದಾರೆ.
ಅವರ ಮೇಲಿಟ್ಟಿದ್ದ ಪ್ರೀತಿಗೆ ನನಗೂ ಆಶೀರ್ವಾದ ನೀಡಿದ್ದೀರಿ ನನ್ನ ಮೇಲೆ ಭರವಸೆ ಇಟ್ಟು ಒಂದು ಸ್ಥಾನ ಕೊಟ್ಟಿದ್ದಿರಿ ಆ ಪ್ರೀತಿಯನ್ನ ಪ್ರತಿ ದಿನ ಮರೆಯಕ್ಕಾಗಲ್ಲ ಎಂದು ಸ್ಮರಿಸಿದ್ದಾರೆ.
ನಾನು ಇವತ್ತು ಸಂಸದೆಯಾಗಿರಬಹುದು ನಾಳೆ ದಿನ ಇಲ್ದೆ ಇರಬಹುದು ಯಾರು ಮುಂಚಿತವಾಗಿ ಹೇಳುವುದಕ್ಕೆ ಹಾಗಲ್ಲ ಮಂಡ್ಯ,ಮದ್ದೂರು, ನಿಮ್ಮೂರಿಗೆ ಸಂಸದೆಯಲ್ಲ. ಇವತ್ತೂನು ನಿಮ್ಮೂರಿನ ಸೊಸೆ ನಾನು ನಿಮ್ಮ ಮನೆಯ ಹೆಣ್ಣು ಮಗಳಾಗಿದ್ದೇನೆ ಅಂಬರೀಶ್ ಅವರ ಪ್ರೀತಿನಾ ನಿಮ್ಮ ಪ್ರೀತಿಯಲ್ಲಿ ನೋಡಿಕೊಳ್ಳುವ ಅವಕಾಶವನ್ನ ಕೊಟ್ಟಿದ್ದೀರಿ ಇದ್ದಕ್ಕಿಂತ ನನಗೆ ಬೇಡ ಏನು ಬೇಡ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.
ಮಂಡ್ಯ ಒಂದು ಕ್ಷೇತ್ರವಲ್ಲ ನನ್ನ ಮನೆ ನಮ್ಮ ಮನೆಯನ್ನ ಬಿಟ್ಟು ಯಾವ ಕಾರಣಕ್ಕೆ ಹೋಗಲಿ. ಈ ಪ್ರಶ್ನೆಯನ್ನ ಅಂಬರೀಶ್ ಕೇಳಿದ್ರೆ ಏನು ಉತ್ತರ ಕೊಡ್ತಿದ್ರು ಚಾನ್ಸೆ ಇಲ್ಲ ನೋ ವೇ ಅಂತಿದ್ರು, ಅದೇ ರೀತಿ ನಾನು ಹೇಳುತ್ತೇನೆ ಎಂದು ಮಾತನಾಡುವ ವೇಳೆ ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜಕಾರಣ ಬೇರೆ, ನನಗೂ ಮಂಡ್ಯಕ್ಕೂ ಇರುವ ಅನುಭಂದ ಬೇರೆ ಈ ಕ್ಷೇತ್ರ ಅಲ್ಲ, ಪುಣ್ಯ ಕ್ಷೇತ್ರ, ಮರು ಜನ್ಮ ಕೊಟ್ಟ ಕ್ಷೇತ್ರ ನನ್ನ ಮನೆ ಬಿಟ್ಟು ಯಾರು ನನ್ನ ಕಳುಹಿಸಕ್ಕಾಗಲ್ಲ. ಅ ಪ್ರೀತಿ ನನಗೆ ಇಲ್ಲಿ ಸಿಕ್ಕಿದೆ, ನಿಮ್ಮ ಆಶೀರ್ವದ ಇದ್ರೆ ಸಾಕು ನಿಮ್ಮ ಋಣ ನನ್ನ ಮೇಲೆ ಇದೆ ಅಭಿಷೇಕ್ ಅಂಬರೀಶ್ ಮದ್ದೂರನ್ನ ಇಷ್ಟ ಪಟ್ಟು ಪ್ರತಿ ಸಲ ಬರ್ತಾರೆ ನಿಮ್ಮ ಜೊತೆ ಇರ್ತಾರೆ, ನಿಮ್ಮ ಪ್ರೀತಿ ಅವನ ಮೇಲೆ ಇರಲಿ ಎಂದು ಪರೋಕ್ಷವಾಗಿ ಪುತ್ರನ ರಾಜಕೀಯ ಎಂಟ್ರಿ ಕುರಿತು ಸುಳಿವು ನೀಡಿದ್ದಾರೆ.