ಸ್ನೇಹಿತ ದರ್ಶನ್ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ ನಟಿ ರಕ್ಷಿತಾ ಪ್ರೇಮ್. ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ಗೆ ಬೆನ್ನು ನೋವಿದೆ. ಅದು ಅಷ್ಟು ಬೇಗ ಸರಿ ಹೋಗಲ್ಲ. ಎಲ್ಲದಕ್ಕೂ ಟೈಮ್ ಬೇಕು, ಅದೇ ರೀತಿ ದರ್ಶನ್ ರಿಕವರಿಗೂ ಟೈಮ್ ಬೇಕು ಎಂದಿದ್ದಾರೆ. ಇನ್ನು ದರ್ಶನ್ಗೆ ಡಾಕ್ಟರ್ ಸರ್ಜರಿಗೆ ಹೇಳಿದ್ದಾರೆ, ಆದರೆ ಟೈಮ್ ಬೇಕು. ನನಗೆ ನಂಬಿಗೆ ಇದೆ ಅವನ ಜೀವನದಲ್ಲೂ ಸಂಕ್ರಾಂತಿ ಒಳ್ಳೆದಾಗುತ್ತೆ ಎಂದಿದ್ದಾರೆ.

ನಮ್ಮ ಅಪ್ಪಾಜಿ ಕಾಲದಿಂದಲೂ ದರ್ಶನ್ ನಮ್ಮ ಜೊತೆ ಒಡನಾಟದಲ್ಲಿದ್ದಾನೆ. ನಮ್ಮ ದೊಡಮ್ಮ ನಮ್ಮ ಜೊತೆ ಇದ್ರು. ಅವ್ರು ಡಿಪ್ರೆಶನ್ಗೆ ಹೋಗಿ ಬೆಂಕಿ ಹಚ್ಕೊಂಡಿದ್ರು. ಆ ಸಮಯದಲ್ಲಿ ನಮ್ಮ ಅಪ್ಪ ನನಗೆ ಕಾಲ್ ಮಾಡಿರಲಿಲ್ಲ. ದರ್ಶನ್ ಗೆ ಕಾಲ್ ಮಾಡಿದ್ರು. ಆಗ ದರ್ಶನ್ ನಮ್ಮ ಮನಗೆ ಬಂದು ಅವನ ಮಾರುತಿ ಕಾರಲ್ಲಿ ಅವ್ರನ್ನ ಅಸ್ಪತ್ರೆಗೆ ಕರ್ಕೊಂಡ್ ಹೋಗಿದ್ದ. ದರ್ಶನ್ ಇವತ್ತಿಂದ ಅಲ್ಲ, ನನ್ನ ತಂದೆಗೆ ಕಷ್ಟ ಬಂದ ದಿನದಿಂದಲೂ ಅವನು ನಮ್ಮ ಜೊತೆ ಇದ್ದಾನೆ ಎಂದು ನೆನಪು ಮಾಡಿಕೊಂಡಿದ್ದಾರೆ.

ದರ್ಶನ್ ನನ್ನ ಕುಟುಂಬ, ನನಗೆ ಏನಾದ್ರು ತೊಂದರೆ ಅದ್ರೆ ಅವನು ನನ್ನ ಜೊತೆ ಇರ್ತಾನೆ. ಅವನಿಗೆ ಏನೇ ಅದ್ರು ನಾನು ಅವನ ಜೊತೆ ಇದ್ದೇ ಇರ್ತಿನಿ. ಅವನಿಗೆ ಇನ್ಮುಂದೆ ಏನು ಆಗಲ್ಲ ಏನು ಆಗಬಾರದು. ಇದನ್ನೆ ನಾನು ಅವನಿಗೆ ಹೊಸ ವರ್ಷಕ್ಕೆ ವಿಶ್ ಮಾಡಿದ್ದು. ದರ್ಶನ್ ವಿಚಾರದಲ್ಲಿ ಎಲ್ಲಾ ಸರಿ ಹೋಗ್ತಿದೆ ಅನ್ನಿಸ್ತಿದೆ ನೋಡೊಣ. ದರ್ಶನ್ ಮೇಲೆ ಕೊಲೆ ಅರೋಪ ಬಂದಾಗ ನಾನು ತಲೆನೆ ಕೆಡಿಸಿಕೊಂಡಿರಲಿಲ್ಲ. ನಾನು ಶಿವಣ್ಣನನ್ನು ಫಾಲೋ ಮಾಡ್ತಿದ್ದೀನಿ ಪಾಸಿಟಿವ್ ಆಗಿ ಹೋಗೊಣ ಅಂತ ಅಷ್ಟೆ ಎಂದಿದ್ದಾರೆ.

ನನ್ನ ಪ್ರಕಾರ ದರ್ಶನ್ ಗುಡ್ ಮ್ಯಾನ್, ಅವನ ವಿಚಾರದಲ್ಲಿ ಒಳ್ಳೆಯದನ್ನೇ ನೋಡ್ತಿನಿ. ನಾನು ದರ್ಶನ್ನ ಜೈಲಲ್ಲಿ ನೋಡಿ ಏನು ಮಾತಾಡಿರಲಿಲ್ಲ, ಜೈಲಲ್ಲಿ ಅವನು ತುಂಬಾ ವೀಕ್ ಆಗಿದ್ದ, ನಾನು ಅವನ ತಬ್ಬಿಕೊಂಡಿದ್ದೆ. ನಾವು ನೆಗೆಟಿವ್ ಯೋಚನೆ ಮಾಡಿದ್ರೆ ನೆಗೆಟಿವ್.. ಪಾಸಿಟಿವ್ ಯೋಚನೆ ಮಾಡಿದ್ರೆ ಪಾಸಿಟಿವ್.. ದರ್ಶನ್ ಬಗ್ಗೆ ನಾನು ಯಾವಾಗಲೂ ಪಾಸಿಟಿವ್ ಯೋಚನೆ ಮಾಡ್ತಿನಿ. ದರ್ಶನ್ ಅರೋಗ್ಯದ ಬಗ್ಗೆ ಹೊರಗಡೆ ತುಂಬಾ ಜನ ಮಾತಾಡ್ತಾರೆ. ಅದ್ರೆ ಅವಮ ಹತ್ತಿರ ಇರೋರಿಗೆ ಗೊತ್ತು ಅವನು ಎಷ್ಟು ನೋವು ತಿಂತಿದ್ದಾನೆ ಅಂತ ಎಂದಿದ್ದಾರೆ. ಸರ್ಜರಿ ಬಗ್ಗೆ ನಾನು ಹೇಳೊಕೆ ಆಗಲ್ಲ ಅವ್ರ ಫ್ಯಾಮಿಲಿ ನಿರ್ಧಾರ ಮಾಡುತ್ತೆ ಎಂದಿರುವ ರಕ್ಷಿತಾ, ವಿಜಯಲಕ್ಷ್ಮೀ ಸ್ಟ್ರಾಂಗ್ ವುಮೆನ್ ಎಂದಿದ್ದಾರೆ.