ಬೆಂಗಳೂರು : ಭಾರತೀಯ ಚಿತ್ರರಂಗ ಕಂಡ ಯಶಸ್ವೀ ಹಿರಿಯ ನಿರ್ದೇಶಕ ಭಾರತಿ ರಾಜ (86) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ನಿಧನಕ್ಕೆ ತಮಿಳು ನಾಡು ಸಿಎಂ ವಿಜಯ್ ಸೇರಿದಂತೆ ತಮಿಳು ಚಿತ್ರರಂಗ ಮತ್ತು ಸ್ಯಾಂಡಲ್ವುಡ್ ತೀವ್ರ ಸಂತಾಪ ಸೂಚಿಸಿದೆ. 1977 ರಲ್ಲಿ ನಿರ್ದೇಶಕನಕ್ಕಿಳಿದ ಭಾರತಿ ರಾಜ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇನ್ನು, ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕರಾಗಿಯೂ ಇವರು ಕೆಲಸ ಮಾಡಿದ್ದರು.

ಬಣ್ಣದ ಹೆಜ್ಜೆ
1977 ರಲ್ಲಿ ಚಿತ್ರ 16 ವಯತಿನಿಲೆ’ ಸಿನಿಮಾ ಮೂಲಕ ಭಾರತಿ ರಾಜ ನಿರ್ದೇಶಕನಕ್ಕೆ ಎಂಟ್ರಿಯಾದರು. ಅದಾದ ಬಳಿಕ, ಅವರು ‘ಕಿಲಕ್ಕೆ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ‘ಮುದಲ್ ಮರಿಯಥೈ’ ಸೇರಿದಂತೆ ಇನ್ನೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದರು. ವಿಶೇಷವೆಂದರೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಭಾರತಿ ರಾಜ ಕೆಲಸ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕ ನಿರ್ದೇಶಕರಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಈವರೆಗೆ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ನಿರ್ದೇಶಿಸಿರಲಿಲ್ಲ.

ತೆಲುಗಿನಲ್ಲೂ ಸಹ ಹಲವು ಕ್ಲಾಸಿಕ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’, ‘ಯುವತರಂ ಪಿರಿದಿಂಡಿ’ ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಮೀಂದುಮ್ ಒರು ಮರಿಯಾದೈ’ ಚಿತ್ರ ಅವರ ಕೊನೆಯ ನಿರ್ದೇಶನ ಸಿನಿಮಾವಾಗಿತ್ತು. 2020 ರಲ್ಲಿ ಬಿಡುಗಡೆಯಾದ ಈ ಚಿತ್ರ ಅಷ್ಟೇನೂ ಪ್ರಭಾವ ಬೀರಿರಲಿಲ್ಲ. ಆ ಬಳಿಕ ಅವರು ಯಾವ ಸಿನಿಮಾಗೂ ಆಕ್ಷನ್ ಕಟ್ ಹೇಳಿರಲಿಲ್ಲ.

ಭಾರತಿರಾಜ ಅವರ ಒಬ್ಬರೇ ಪುತ್ರ ಮನೋಜ್ ಭಾರತಿರಾಜ ಕೂಡ ಕಳೆದ ವರ್ಷ ಮೃತಪಟ್ಟಿದ್ದರು. ನಟರಾಗಿ ಮತ್ತು ನಿರ್ದೇಶಕರಾಗಿ ಬೆಳೆಯುತ್ತಿದ್ದ ಮನೋಜ್ ಅವರ ಹಠಾತ್ ನಿಧನ, ಭಾರತಿರಾಜ ಅವರನ್ನು ತೀವ್ರವಾಗಿ ಕಾಡಿತ್ತು. ಈ ಘಟನೆಯಿಂದ ಹೊರಬರಲು ಅವರು ಸಮಯ ತೆಗೆದುಕೊಂಡಿದ್ದರು. ಈನ್ನು ಆ ಘಟನೆ ಮರೆಯಲು ಭಾರತಿರಾಜ ತಮ್ಮ ಕುಟುಂಬ ಸದಸ್ಯರೊಂದಿಗೆ ವಿದೇಶದಲ್ಲಿ ಸ್ವಲ್ಪ ಸಮಯ ಕಳೆದಿದ್ದರು.






