ಬೆಂಗಳೂರು ಗ್ರಾಮಾಂತರ (Bangalore rural) ಲೋಕಸಭಾ ಕ್ಷೇತ್ರದ ರಾಮನಗರ ಜಿಲ್ಲೆಯ (ramnagar district) ದ್ಯಾವರಸೇಗೌಡನ ದೊಡ್ಡಿ ಗೋಡೌನ್ನಲ್ಲಿ ಕಾಂಗ್ರೆಸ್ನವರು (congress) ಅಕ್ರಮವಾಗಿ ಮತದಾರರಿಗೆ ಹಂಚಲು ಸೀರೆ, ಡ್ರೆಸ್ಗನ್ನು (saree,dress) ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಜೆಡಿಎಸ್ (jds) ಕಾರ್ಯಕರ್ತರು ವ್ಯಾಪಕವಾದ ಆಕ್ರೋಶ ಹೊರಹಾಕಿದ್ದಾರೆ. Dr.ಮಂಜುನಾಥ್ (Dr.manjunath) ಅವರ ಸ್ಪರ್ಧೆಯಿಂದ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ (congress) , ಮತದಾರರಿಗೆ ಆಮಿಷ ಒಡ್ಡಲು ಮುಂದಾಗಿದೆ ಎಂದು ಜೆಡಿಎಸ್ (jds) ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ.
![](https://pratidhvani.com/wp-content/uploads/2024/03/IMG_5799-2.jpeg)
ಗೋಡೌನ್ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀರೆ ಹಾಗೂ ಡ್ರೆಸ್ ಪೀಸ್ಗಳನ್ನ ಸಂಗ್ರಹಿಸಿರೋ ಬಗ್ಗೆ ಮಾಹಿತಿ ಗೊತ್ತಾದ ಕೂಡಲೆ ಜೆಡಿಎಸ್ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ ಸೀರೆ, ಡ್ರೆಸ್ ಸಾಗಿಸುತ್ತಿದ್ದ ವಾಹನವನ್ನ ತಡೆದಿದ್ದಾರೆ. ಈ ವೇಳೆ ಗೋಡೌನ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ವೇಳೆ ಗೋಡೌನ್ ಬಳಿ ಜೆಡಿಎಸ್-ಕಾಂಗ್ರೆಸ್ (jds- congress) ಕಾರ್ಯಕರ್ತರ ದೊಡ್ಡ ಹೈಡ್ರಾಮಾವೇ (Highdrama)ನಡೆದೋಗಿದೆ.
![](https://pratidhvani.com/wp-content/uploads/2024/03/IMG_5797-1.jpeg)
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ DySP ದಿನಕರ್ ಶೆಟ್ಟಿ ( Dinakar shetty) ನೇತೃತ್ವದ ಪೊಲೀಸರ ತಂಡ,ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾದ ಸೀರೆಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದು, ಸಿಸಿ ಕ್ಯಾಮರಾ ( cc camera) ದೃಶ್ಯಗಳನ್ನು ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದೆ. ಈ ಮಧ್ಯೆ ಇದೇ ರೀತಿ ಚುನಾವಣಾ ಅಕ್ರಮಗಳು ಮುಂದುವರೆದ್ರೆ ಬಚ್ಚಿಟಿರುವ ಸೀರೆ ಕುಕ್ಕರ್ ಗಳನ್ನ ಹುಡುಕಿ ಬೆಂಕಿ ಹಚ್ಚಲು ಕಾರ್ಯಕರ್ತರಿಗೆ ಕರೆ ನೀಡಬೇಕಾಗುತ್ತದೆ ಎಂದು ಹೆಚ್.ಡಿ.ಕೆ (HDK)ಎಚ್ಚರಿಕೆ ನೀಡಿದ್ದಾರೆ.