ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರಿಗೆ ಶೂಟಿಂಗ್ ಸಮಯದಲ್ಲಿ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಅವರ ಕೈಗೆ ಬೆಲ್ಟ್ ಹಾಕಲಾಗಿದೆ. ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಅವರ ಕೈ ಪೆಟ್ಟಾಗಿದ್ದು ಕಂಡು ಬಂದಿದ್ದು, ಇದೀಗ ನಟ ಆಪರೇಷನ್ಗೆ ಒಳಗಾಗಲಿದ್ದಾರೆ. ಇಂದು ಆಸ್ಪತ್ರೆಗೆ ಆಡ್ಮಿಟ್ ಆಗಿ ನಾಳೆ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ . ಖಾಸಗಿ ಆಸ್ಪತ್ರೆಗೆ ದರ್ಶನ್ ದಾಖಲಾಗಿದ್ದು, ಆಪರೇಷನ್ ನಂತ್ರ ಕೆಲದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಸದ್ಯ ಡಿ ಬಾಸ್ ಡೆವಿಲ್ ಸಿನಿಮಾದಲ್ಲಿ ನಟನೆ ಮಾಡ್ತಿದ್ದು, ಮಿಲನಾ ಪ್ರಕಾಶ್ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಬುಧವಾರ ಮಂಡ್ಯಕ್ಕೆ ದಿಬಾಸ್ ಬಂದಿದ್ರು. ಸುಮಲತಾ ಅಂಬರೀಶ್ ಕಾರ್ಯಕ್ರಮದಲ್ಲಿ
ಭಾಗಿಯಾಗಿದ್ರು. ಸುಮಲತಾ ಅಮ್ಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ. ಇವತ್ತು ಆಪರೇಷನ್ ಇತ್ತು. ಆದ್ರೂ, ಅಮ್ಮನಿಗಾಗಿ ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಯಮ ಕರೆದ್ರು, ಸುಮಲತಾ ಅಮ್ಮನಿಗಾಗಿ ಮೊದಲು ಬಂದು ಆಮೇಲೆ ಹೋಗುತ್ತೇನೆ. ಕಳೆದ ಎಲೆಕ್ಷನ್ ನಲ್ಲಿ ಪ್ರಚಾರದ ಸಂದರ್ಭ ಎಳನೀರು ಕೊಟ್ಟು ಆಶೀರ್ವಾದ ಮಾಡಿದ ಎಲ್ರಿಗೂ ಅಭಿನಂದನೆಗಳು. ಸುಮಲತಾ ಅಮ್ಮ ಮಂಡ್ಯ ಕ್ಕಾಗಿ ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ಬದ್ಧ. ಸದಾ ಅವರಿಗೆ ಬೆಂಬಲವಾಗಿ ನಿಲ್ಲೋದಾಗಿ ದರ್ಶನ್ ಹೇಳಿದ್ರು. ಇದೀಗ ಮಾತು ಕೊಟ್ಟಂತೆ ದರ್ಶನ್ ನಡೆದುಕೊಂಡಿದ್ದು , ಗುರುವಾರ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
![](https://pratidhvani.com/wp-content/uploads/2024/04/WhatsApp-Image-2024-04-03-at-5.47.53-PM-1-1024x576.jpeg)