• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶತಕ ಬಾರಿಸಲಿದೆ ಕಚ್ಚಾ ತೈಲ; ಮಾರ್ಚ್ 10ರ ನಂತರ ದೇಶೀಯ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ

Any Mind by Any Mind
February 15, 2022
in ದೇಶ, ವಾಣಿಜ್ಯ
0
ಶತಕ ಬಾರಿಸಲಿದೆ ಕಚ್ಚಾ ತೈಲ; ಮಾರ್ಚ್ 10ರ ನಂತರ ದೇಶೀಯ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ
Share on WhatsAppShare on FacebookShare on Telegram

ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಬಹುದಾದ ಸಂಭವನೀಯ ದಾಳಿ, ನಂತರದಲ್ಲಿ ನ್ಯಾಟೋ ದೇಶಗಳು ರಷ್ಯದ ವಿರುದ್ಧ ನಡೆಸಬಹುದಾದ ಪ್ರತಿದಾಳಿ ಊಹೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬಿರುಗಾಳಿ ಎದ್ದಿದೆ. ಕಚ್ಚಾ ತೈಲ ದರ ಏಳು ವರ್ಷಗಳ ಗರಿಷ್ಠಮಟ್ಟಕ್ಕೆ ಏರಿದ್ದು, ಶೀರ್ಘದಲ್ಲೇ ಶತಕ ದಾಟುವ ಸಾಧ್ಯತೆ ಇದೆ.

ADVERTISEMENT

ಈ ಬೆಳವಣಿಗೆ ತೈಲೋತ್ಪನ್ನ ರಾಷ್ಟ್ರಗಳಿಗೆ  ಸಂತಸದ ಸುದ್ದಿಯಾಗಿರಬಹುದು. ಆದರೆ, ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಆರ್ಥಿಕತೆ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ. ಭಾರತ ಶೇ.86ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಅತಿ ಹೆಚ್ಚಿನ ಒತ್ತಡ ಎದುರಿಸುವ ಮೊದಲ ರಾಷ್ಟ್ರವಾಗಲಿದೆ. ನೇರವಾಗಿ ಹೇಳಬೇಕೆಂದರೆ ಭಾರತದ ಜನರು ಕಚ್ಚಾ ತೈಲ ಏರಿಕೆಯ ಹೊರೆಯನ್ನು ಭರಿಸಲು ಸಿದ್ಧವಾಗಬೇಕಿದೆ. 

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಕಳೆದ ನೂರು ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ನರೇಂದ್ರ ಮೋದಿ ಸರ್ಕಾರ ತಟಸ್ಥವಾಗಿ ಇಟ್ಟಿದೆ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುವ ಮೋದಿ ಸರ್ಕಾರ, ಚುನಾವಣೆ ಮುಗಿದ ನಂತರ ನೂರು ದಿನಗಳಲ್ಲಾದ ನಷ್ಟವನ್ನು ಹತ್ತಾರು ದಿನಗಳಲ್ಲೇ ತುಂಬಿಕೊಳ್ಳಲಿದೆ. 

ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಇದ್ದಾಗಲೇ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಿತ್ತು. ಅಂದರೆ, ಪೆಟ್ರೋಲ್ ಅಷ್ಟೇ ಅಲ್ಲಾ ಡಿಸೇಲ್ ಕೂಡಾ  ಶತಕದ ಗಡಿ ದಾಟಿತ್ತು. ಚುನಾವಣೆ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ತಾನೇ ಹೇರಿದ್ದ ಸುಂಕವನ್ನು ಕೊಂಚ ಕಡಿತ ಮಾಡಿತ್ತು. ನಂತರ ದರ ಏರಿಕೆ ಮಾಡದೆ ತಟಸ್ಥವಾಗಿರುವಂತೆ ನೋಡಿಕೊಂಡಿದೆ.

ಮಾರ್ಚ್ 10 ರಂದು ಐದೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬರಲಿದೆ. ಫಲಿತಾಂಶ ಮೋದಿ ಸರ್ಕಾರದ ಪರವಾಗಿ ಬರಲಿ ವಿರುದ್ಧವಾಗಿ ಬರಲಿ, ಪೆಟ್ರೋಲ್ ಡಿಸೇಲ್ ದರ ಭಾರಿ ಪ್ರಮಾಣದಲ್ಲಿ ಏರುವುದಂತೂ ಗ್ಯಾರಂಟಿ.

ಏಕೆಂದರೆ, ಅಷ್ಟೊತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಶತಕದ ಗಟಿ ದಾಟುವ ಸಾಧ್ಯತೆ ಇದೆ. ಕಳೆದ ವರ್ಷವಿಡಿ  60- 65 ಡಾಲರ್ ಆಜುಬಾಜಿನಲ್ಲಿದ್ದ ಕಚ್ಚಾ ತೈಲದರವು, ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸುವ ಸಲುವಾಗಿ ಗಡಿಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದ ನಂತರ ತೈಲದರ ತ್ವರಿತವಾಗಿ ಜಿಗಿದಿದೆ. 

ಕಳೆದ ಮೂರು ತಿಂಗಳಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಪ್ರಸ್ತುತ ಪ್ರತಿ ಬ್ಯಾರೆಲ್ ಬ್ರೆಂಟ್ ಕ್ರೂಡ್ 96.50 ಡಾಲರ್ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ (ಡಬ್ಲ್ಯೂಟಿಐ) 95 ಡಾಲರ್ ಆಜುಬಾಜಿನಲ್ಲಿ ವಹಿವಾಟುಗುತ್ತಿವೆ. ನಿತ್ಯದ ಏರಿಳಿಕೆ ಒಂದೆರಡು ಡಾಲರ್ ಗಳಷ್ಟಿರುತ್ತದೆ. ಆದರೆ, ಇದು ಇಳಿಜಾರಿನಲ್ಲಿ ಸಾಗದೇ ಏರುಹಾದಿಯಲ್ಲೇ ಜಿಗಿಯುತ್ತಿದೆ. ಈ ತ್ವರಿತ ಜಿಗಿತದಿಂದಾಗಿ ಶೀಘ್ರವೇ ಕಚ್ಚಾ ತೈಲ 100 ಡಾಲರ್ ಗಡಿ ದಾಟುತ್ತದೆಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಮಾರ್ಚ್ 10ರ ನಂತರ ಏನೇನಾಗಲಿದೆ?

ದೇಶೀಯ ಮಾರುಕಟ್ಟೆಯಲ್ಲಿ ತೀವ್ರ ಪ್ರಮಾಣದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಲಿದೆ. ಅದರ ಪರಿಣಾಮವಾಗಿ ಸರಕು ಸಾಗಣೆ ಸೇರಿದಂತೆ ಪೂರಕವಾದ ಸೇವೆಗಳ ದರವೂ ಏರಲಿದೆ. ಅಡುಗೆ ಅನಿಲ ದರವೂ ಜಿಗಿಯಲಿದೆ. ಹೋಟೆಲ್ ಗಳಲ್ಲಿ ತಿಂಡಿ ತಿನಿಸು, ಕಾಫಿ ಟೀ ಇತ್ಯಾದಿ ದರಗಳೂ ಏರಬಹುದು. ಇದರಿಂದ ಜನಸಾಮಾನ್ಯ ಮೇಲೆ ಭಾರಿ ಹೊರೆ ಬೀಳಲಿದೆ. ಹಣದುಬ್ಬರ ತ್ವರಿತವಾಗಿ ಜಿಗಿಯಲಿದ್ದು, ಅದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರ ಏರಿಸುವ ಸಾಧ್ಯತೆ ಇದೆ.

ಇಷ್ಟಾದರೂ ಜನರು ದರ ಏರಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬಹುದು ಎಂದು ನಿರೀಕ್ಷೆ ಮಾಡುವಂತಿಲ್ಲ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹತ್ತಾರು ಮಾರ್ಗಗಳನ್ನು ಮೋದಿ ಸರ್ಕಾರ ಕಂಡುಕೊಂಡಿದೆ. ಈಗ ಕರ್ನಾಟಕದಲ್ಲಿ ಹಿಜಾಬಿಗೆ ಪ್ರತಿಯಾಗಿ ಕೆಸರಿ ಶಾಲನ್ನು ತಂದು ಇಡೀ ಶೈಕ್ಷಣಿಕ ಪರಿಸರವನ್ನೇ ಹಾಳುಮಾಡುತ್ತಿರುವಂತೆ, ಜನರ ಭಾವನೆಗಳನ್ನು ಕೆರಳಿಸುವ ಮತ್ತಷ್ಟು ವಿವಾದಗಳ ಹುಟ್ಟಿಕೊಳ್ಳಲಿವೆ. ಮೂರ್ಖಮಾಧ್ಯಮಗಳೂ ಅವುಗಳ ಬೆನ್ನ ಹಿಂದೆ ಬಿದ್ದು, ವಾಸ್ತವಿಕತೆಯನ್ನೇ ಮರೆತು ವರದಿ ಮಾಡುತ್ತವೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು  ಏರುತ್ತಲೇ ಇರುತ್ತದೆ!

Tags: Central GovernmentCrude oildieselpetrolPM Narendra ModiRBIಕಚ್ಚಾ ತೈಲಕೇಂದ್ರ ಸರ್ಕಾರಡಿಸೇಲ್‌ದರ ಏರಿಕೆಪೆಟ್ರೋಲ್‌ಪ್ರಧಾನಿ ನರೇಂದ್ರ ಮೋದಿಭಾರತೀಯ ರಿಸರ್ವ್‌ ಬ್ಯಾಂಕ್‌
Previous Post

ಪುಲ್ವಾಮಾ ಮತ್ತು ಗಲ್ವಾನಾ ಯೋಧರ ಹತ್ಯೆ ಘಟನೆಗಳಿಗೆ ದೇಶದ ಪ್ರತಿಕ್ರಿಯೆ ಯಾಕೆ ಭಿನ್ನ?

Next Post

ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು: ದೇವೇಗೌಡ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
ವಾಣಿಜ್ಯ

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

by ಪ್ರತಿಧ್ವನಿ
April 10, 2026
0

ಡಿಜಿಟಲ್ ಪಾವತಿಗಳನ್ನು ಹೆಚ್ಚಾಗಿ ಬಳಸುವ ಜನರಿಗೆ ಮಹತ್ವದ ಬದಲಾವಣೆಯ ಸೂಚನೆ ದೊರೆತಿದೆ. ಆನ್‌ಲೈನ್ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮವನ್ನು ಪರಿಗಣಿಸುತ್ತಿದ್ದು,...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು: ದೇವೇಗೌಡ

ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು: ದೇವೇಗೌಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada