ರಣ ಹೇಡಿ ಪಾಕಿಸ್ತಾನಕ್ಕೆ (Pakistan) ಕೆಟ್ಟಕಾಲ ಶುರುವಾದಂತಿದೆ. ಬೇಕು ಬೇಕಂತಲೇ ಭಾರತವನ್ನು (India) ಕೆಣಕುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯ ಸನ್ನಿಹಿತವಾದಂತಿದೆ. ಕಾಶ್ಮೀರದ (Kashmir) ಮೇಲೆ ಕಣ್ಣು ಹಾಕಿರುವ ಪಾಕಿಸ್ತಾನದ ಕಣ್ಣು ಕಿತ್ತು ಭೂದಿ ಮಾಡುವ ಕೆಲಸಕ್ಕೆ ಭಾರತ ಮುಂದಾಗಬೇಕಿದೆ. ಕಾಶ್ಮೀರದ ಬಗ್ಗೆ ಪಾಕ್ ಪ್ರಧಾನಿ ತನ್ನ ನಾಲಗೆ ಹರಿಬಿಟ್ಟಿದ್ದಾನೆ.

ಹೌದು ಜಮ್ಮು ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಾಲಗೆ ಹರಿಬಿಟ್ಟಿದ್ದಾನೆ. ಕಾಶ್ಮೀರವೇ ತಮ್ಮ ಜೀವನಾಡಿ ಎಂದು ಪಾಕ್ ಪ್ರಧಾನಿ ಹೇಳುವ ಮೂಲಕ ಭಾರತವನ್ನು ಇನ್ನಷ್ಟು ಕೆರಳಿಸಲು ಶೆಹಬಾಜ್ ಯತ್ನಿಸಿದ್ದಾನೆ.

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಅನಾವಶ್ಯಕವಾಗಿ ತಮ್ಮ ಮೇಲೆ ಭಾರತ ಆರೋಪ ಹೊರಿಸಲಾಗುತ್ತಿದೆ ಎಂದು ಶಹಬಾಜ್ ಹೇಳಿಕೊಂಡಿದ್ದಾನೆ.ಈ ಬಗ್ಗೆ ಪಾರದರ್ಶಕ ತನಿಖೆಗೆ ಪಾಕಿಸ್ತಾನ ಸಿದ್ದವಿದೆ ಎಂದಿದ್ದಾನೆ.

ಇನ್ನು ಭಾರತ ಈಗಾಗಲೇ ಸಿಂಧೂ ಒಪ್ಪಂದ ರದ್ದುಗೊಳಿಸಿದ್ದು,ನಮಗೆ ಸಿಂಧೂ ನದಿಯ ನೀರಿನ ಮೇಲೆ ಮೇಲೆ ಹಕ್ಕಿದೆ. ನಮ್ಮ ದೇಶದ ಸಾರ್ವಭೌಮತೆ ರಕ್ಷಿಸಲು ನಮ್ಮ ಸೇನೆ ಸಿದ್ಧವಿದೆ ಎಂದು ಪಾಕ್ ಪ್ರಧಾನಿ ಭಾರತವನ್ನು ಕೆರಳಿಸಿದ್ದಾನೆ.