• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಾಕ್‌ಡೌನ್‌ ಅವಧಿಯಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆ: ಸಂಘರ್ಷ ಹೆಚ್ಚಳ: NCRB ವರದಿ

ಫಾತಿಮಾ by ಫಾತಿಮಾ
September 16, 2021
in ದೇಶ
0
ಲಾಕ್‌ಡೌನ್‌ ಅವಧಿಯಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆ: ಸಂಘರ್ಷ ಹೆಚ್ಚಳ: NCRB ವರದಿ
Share on WhatsAppShare on FacebookShare on Telegram

2020ರಲ್ಲಿ ದೇಶ ಮೊದಲ ಬಾರಿ ರಾಷ್ಟ್ರೀಯ ಲಾಕ್‌ಡೌನ್ನನು ಕಂಡಿತ್ತು. ಈ ಅವಧಿಯಲ್ಲಿ ಸಾಂಪ್ರದಾಯಿಕ ಅಪರಾಧಗಳಾದ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆ ದಾಖಲಾದವು ಆದರೆ ಇದು ದೊಡ್ಡ ಮಟ್ಟದ ನಾಗರಿಕ ಸಂಘರ್ಷಗಳಿಗೆ ಕಾರಣವಾಯಿತು.

ADVERTISEMENT

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಬಿಡುಗಡೆ ಮಾಡಿದ ‘ಕ್ರೈಮ್ ಇನ್ ಇಂಡಿಯಾ’ದ ಇತ್ತೀಚಿನ ಮಾಹಿತಿಯ ಪ್ರಕಾರ, 2020 ರಲ್ಲಿ ಕೋಮು ಗಲಭೆಗಳು ಹಿಂದಿನ ವರ್ಷಕ್ಕಿಂತ 96% ಹೆಚ್ಚಳವನ್ನು ದಾಖಲಿಸಿವೆ.  ಅಂತೆಯೇ, ಜಾತಿ ಗಲಭೆಗಳು 50%, ಕೃಷಿ ಗಲಭೆಗಳು 38%ಮತ್ತು ‘ಆಂದೋಲನ/ಪ್ರತಿಭಟನಾ’ ಸಮಯದಲ್ಲಿನ ಗಲಭೆಗಳು 33%ಹೆಚ್ಚಾಗಿದೆ.

ಕಳೆದ ವರ್ಷ ಮಾರ್ಚ್ 25 ಮತ್ತು ಮೇ 31 ರಿಂದ ಸಂಪೂರ್ಣ ಲಾಕ್ಡೌನ್ನಿಂದಾಗಿ, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರೀಕರ ವಿರುದ್ಧದ ಪ್ರಕರಣಗಳು, ಕಳ್ಳತನ, ದರೋಡೆ ಮತ್ತು ದೌರ್ಜನ್ಯಗಳಂತಹ ಅಪರಾಧಗಳು ಸುಮಾರು 2 ಲಕ್ಷದಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.  ‘ಹಿಂಸಾತ್ಮಕ ಅಪರಾಧಗಳ’ ವರ್ಗದಲ್ಲಿ ಬರುವ ಅಪರಾಧಗಳು 0.5% ರಷ್ಟು ಕಡಿಮೆಯಾಗಿದ್ದರೂ ಸಹ ಕೊಲೆ 1% ನಷ್ಟು ಹೆಚ್ಚಳವನ್ನು ದಾಖಲಿಸಿದೆ.

ಈ ವರ್ಷವು ‘ದೇಶದ ವಿರುದ್ಧದ ಅಪರಾಧಗಳಿಗೆ’ ಸಂಬಂಧಿಸಿದ ಪ್ರಕರಣಗಳು ಗಮನಾರ್ಹ ಕುಸಿತವನ್ನು ಕಂಡಿದೆ, ಇವು 2019 ಕ್ಕಿಂತ 27% ನಷ್ಟು ಇಳಿಕೆಯಾಗಿದೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಕಾರಣದಿಂದಾಗಿ ಈ ವರ್ಗದಲ್ಲಿ ಹೆಚ್ಚಳವನ್ನು ದಾಖಲಿಸಿದ ಏಕೈಕ ಪ್ರಮುಖ ರಾಜ್ಯ ಯುಪಿ.  ರಾಜ್ಯವು ದಾಖಲಿಸಿದ ‘ಸಾರ್ವಜನಿಕ ಆಸ್ತಿಗೆ ಹಾನಿ’ ಪ್ರಕರಣಗಳಲ್ಲಿ ಹಲವು ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದ್ದು.

ಬಿಹಾರವು 117 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಹರಿಯಾಣ ಮತ್ತು ಜಾರ್ಖಂಡ್ ತಲಾ 51, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (26) ಮತ್ತು ಗುಜರಾತ್ (23) ಇವೆ.  ಡಾಟಾಗಳ ಪ್ರಕಾರ 2020 ರಲ್ಲಿ ಉತ್ತರ ಪ್ರದೇಶವು ಒಂದೇ ಒಂದು ಕೋಮುಗಲಭೆಯನ್ನು ದಾಖಲಿಸಿಲ್ಲ.

2019ರಲ್ಲಿ 492ರಷ್ಟಿದ್ದ ಜಾತಿ ಸಂಘರ್ಷದ ಪ್ರಕರಣಗಳು 2020 ರಲ್ಲಿ 736 ಕ್ಕೆ ಏರಿಕೆಯಾಗಿದೆ. ಬಿಹಾರದಲ್ಲಿ ಈ ವಿಭಾಗದಲ್ಲಿ 208, ಮಹಾರಾಷ್ಟ್ರ (125), ಯುಪಿ (116), ಕರ್ನಾಟಕ (95) ಮತ್ತು ತಮಿಳುನಾಡು (69) ಪ್ರಕರಣಗಳು ದಾಖಲಾಗಿವೆ.

ಆದರೆ ಈ ಎನ್‌ಸಿಆರ್‌ಬಿ ದತ್ತಾಂಶವು ಪೊಲೀಸರು ದಾಖಲಿಸಿದ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿರುತ್ತವೆ ಆದ್ದರಿಂದ ದತ್ತಾಂಶವು ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ.

ಕೇಂದ್ರವು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಅಭೂತಪೂರ್ವ ಪ್ರತಿಭಟನೆಗಳನ್ನು ಕಂಡ ಈ ವರ್ಷವು 2,188 ಕೃಷಿ ಗಲಭೆಗಳನ್ನು ದಾಖಲಿಸಿದೆ.

ಆದರೆ ಕುತೂಹಲಕಾರಿ ಪ್ರಕ್ರಿಯೆಯಲ್ಲಿ ಪಂಜಾಬ್ ನಲ್ಲಿ ಕೃಷಿ ಗಲಭೆಗಳ ಶೂನ್ಯ ಪ್ರಕರಣಗಳು ದಾಖಲಾಗಿದೆ.

ಹರಿಯಾಣ 34, ಬಿಹಾರ 1,286, ಮಹಾರಾಷ್ಟ್ರ 279, ಕರ್ನಾಟಕ 148, ಯುಪಿ 142 ಮತ್ತು ಜಾರ್ಖಂಡ್ನಲ್ಲಿ 83  ಪ್ರಕರಣಗಳು ವರದಿಯಾಗಿವೆ.

‘ಆಂದೋಲನ/ಪ್ರತಿಭಟನಾ’ ಸಮಯದ ಗಲಭೆಯ ಪ್ರಕರಣಗಳಲ್ಲಿ, ಕೇರಳವು 1,798 ಪ್ರಕರಣಗಳನ್ನು ದಾಖಲಿಸಿದೆ. ಇದು 2020 ಕ್ಕಿಂತ 95% ಹೆಚ್ಚು.

ಯುಎಪಿಎ ಪ್ರಕರಣಗಳು 2019 ಕ್ಕಿಂತ 2020 ರಲ್ಲಿ 35% ನಷ್ಟು ಇಳಿಕೆಯನ್ನು ದಾಖಲಿಸಿವೆ. ಅತಿಹೆಚ್ಚು UAPA ಪ್ರಕರಣಗಳು J&K (287) ನಲ್ಲಿ ದಾಖಲಾಗಿವೆ, ಮಣಿಪುರ (169), ಜಾರ್ಖಂಡ್ (86), ಅಸ್ಸಾಂ (76) ಮತ್ತು UP (72) ನಂತರದ ಸ್ಥಾನದಲ್ಲಿವೆ.

Tags: Corona LockdownCovid 19Crime Ratecrime storyLockdownlockdown effectnationwide lockdownNCRBಕೋವಿಡ್-19
Previous Post

ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ನ್ಯಾಯಮಂಡಳಿಗಳಿಗೆ ನೇಮಕಾತಿ ಆಯ್ಕೆ ಮಾಡುತ್ತಿದೆ: ಸುಪ್ರೀಂ ಕೋರ್ಟ್ ಆಕ್ಷೇಪ

Next Post

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಪುಣೆ ನ್ಯಾಯಾಲಯದಿಂದ ಎಲ್ಲಾ 5 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ

Related Posts

543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?
Top Story

543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

by ಪ್ರತಿಧ್ವನಿ
August 31, 2026
0

ಮೂಲ : ಎಸ್ ವೈ ಖುರೇಷಿ ಕನ್ನಡಕ್ಕೆ : ನಾ ದಿವಾಕರ (ಮೂಲ : Why 543 should remain 543 – ಎಸ್ ವೈ ಖುರೇಷಿ...

Read moreDetails
ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

August 30, 2026
ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**

August 27, 2026
ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

August 27, 2026
2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

August 27, 2026
Next Post
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಪುಣೆ ನ್ಯಾಯಾಲಯದಿಂದ ಎಲ್ಲಾ 5 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಪುಣೆ ನ್ಯಾಯಾಲಯದಿಂದ ಎಲ್ಲಾ 5 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada