• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಲಸಿಕೆ ಬಿಕ್ಕಟ್ಟು: ಕಾಲದ ವಿರುದ್ಧದ ಸಮರದಲ್ಲಿ ಸೋಲುತ್ತಿದೆ ಭಾರತ..!

Shivakumar by Shivakumar
May 13, 2021
in ದೇಶ
0
ಲಸಿಕೆ ಬಿಕ್ಕಟ್ಟು: ಕಾಲದ ವಿರುದ್ಧದ ಸಮರದಲ್ಲಿ ಸೋಲುತ್ತಿದೆ ಭಾರತ..!
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಲಸಿಕೆ ಹಾಹಾಕಾರ ಎಷ್ಟು ಗಂಭೀರವಾಗಿದೆ ಎಂದರೆ; ಮೇ 1ರಿಂದ ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ ಚಾಲನೆ ನೀಡಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನವನ್ನೇ ಸ್ಥಗಿತಗೊಳಿಸಲಾಗಿದೆ.

ADVERTISEMENT

ಕಳೆದ ಒಂದು ವಾರದಿಂದ ರಾಜ್ಯದ ಮೂಲೆಮೂಲೆಯಲ್ಲಿ ಲಸಿಕೆ ಕೊರತೆಯಿಂದ ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲ ಎಂಬ ಬೋರ್ಡುಗಳು ನೇತಾಡುತ್ತಿದ್ದವು. ಕೇಂದ್ರ ಭರವಸೆ ನೀಡಿದ ಲಸಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಒಂದು ವಾರ ಕಾದುನೋಡಿದ ಸರ್ಕಾರ, ಕೊನೆಗೂ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಗದೆ 18-44 ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತವಾಗಿ ಬುಧವಾರ ಘೋಷಿಸಿ ಕೈತೊಳೆದುಕೊಂಡಿದೆ. ಈಗಿರುವ ಲಸಿಕೆಗಳು, 45ವರ್ಷ ಮೇಲ್ಪಟ್ಟವರಲ್ಲಿ ಕೂಡ ನೋಂದಣಿ ಮಾಡಿಸಿಕೊಂಡ ಎಲ್ಲರಿಗೂ ನೀಡುವುದಿರಲಿ, ಕನಿಷ್ಟ ಎರಡನೇ ಡೋಸ್ ನೀಡಬೇಕಾದವರಿಗೆ ನೀಡುವಷ್ಟೂ ಲಸಿಕೆ ಇಲ್ಲ ಎಂದು ಸರ್ಕಾರವೇ ಹೇಳಿದೆ.

ಕೋವಿಡ್ ಲಸಿಕೆ ಪಡೆಯಲು 80-90 ಕಿಮೀ ಪ್ರಯಾಣಿಸುತ್ತಿರುವ ಬೆಂಗಳೂರಿಗರು

ಈ ನಡುವೆ, ರಾಜ್ಯ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರೇ, ಬುಧವಾರ ಕೇಂದ್ರದಿಂದ ಲಸಿಕೆಯ ವಿಷಯದಲ್ಲಿ ಸಹಕಾರ ಸಿಕ್ಕಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಲಸಿಕೆ ನೀಡಬೇಕಿದ್ದು, ಅದಕ್ಕಾಗಿ ಪ್ರತಿ 15 ದಿನಕ್ಕೊಮ್ಮೆ 15 ಲಕ್ಷ ಲಸಿಕೆಯನ್ನು ಕೇಂದ್ರ ರಾಜ್ಯಕ್ಕೆ ಪೂರೈಸಬೇಕು. ಆದರೆ, ಕಳೆದ 12 ದಿನದಲ್ಲಿ ಕೇವಲ 8 ಲಕ್ಷ ಪೂರೈಕೆ ಮಾಡಲಾಗಿದೆ. ಇನ್ನು 45 ವರ್ಷದ ಕೆಳಗಿನವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ರಾಜ್ಯಕ್ಕೆ ವಹಿಸಲಾಗಿದ್ದು, ಅದಕ್ಕಾಗಿ 6 ಕೋಟಿ ಲಸಿಕೆ ಬೇಕಾಗುತ್ತವೆ. ರಾಜ್ಯ ಸರ್ಕಾರ ಈಗಾಗಲೇ 3 ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಆ ಪೈಕಿ ಕೇಲವ 7 ಲಕ್ಷ ಮಾತ್ರ ಸರಬರಾಜಾಗಿದೆ. ಹಾಗಾಗಿ, ಸದ್ಯಕ್ಕೆ 45 ವರ್ಷ ಕೆಳಗಿನವರಿಗೆ ಸಲಿಕೆ ನೀಡಿಕೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಹೀಗೆ ಲಸಿಕೆ ಅಭಿಯಾನ ತೀರಾ ಕನಿಷ್ಟ ಯೋಜನೆಯೂ ಇಲ್ಲದೆ, ಪೂರ್ವ ತಯಾರಿಯೂ ಇಲ್ಲದೆ, ಆರಂಭವಾಗಿ 50 ದಿನದಲ್ಲೇ ಮುಗ್ಗರಿಸಿದೆ. ಮುಖ್ಯವಾಗಿ, ಕೋಟ್ಯಂತರ ಲಸಿಕೆಯನ್ನು ವ್ಯಾಕ್ಸಿನ್ ಡಿಪ್ಲೊಮಸಿ ಹೆಸರಿನಲ್ಲಿ ನೆರೆಹೊರೆಯ ದೇಶಗಳಿಗೆ ಉಚಿತವಾಗಿ ನೀಡಿ, ಪ್ರಧಾನಿ ಮೋದಿಯವರ ವಿಶ್ವನಾಯಕ ವರ್ಚಸ್ಸು ವೃದ್ಧಿಗೆ ತೋರಿದ ಆಸಕ್ತಿಯನ್ನು ಕೇಂದ್ರ ಸರ್ಕಾರ, ದೇಶದಲ್ಲಿ ಲಸಿಕೆ ಮಾನದಂಡದ ಪ್ರಕಾರ ಅರ್ಹ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ದಾಸ್ತಾನು ಮಾಡಲು ತೋರದೇ ಇರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂಬುದನ್ನು ದಾರಿಹೋಕ ಕೂಡ ಗ್ರಹಿಸಬಲ್ಲ.

ಆದರೆ, ಬಿಜೆಪಿ ಮತ್ತು ಅದರ ಐಟಿ ಸೆಲ್ ಮಾತ್ರ ಮತ್ತದೇ ಹಸೀಸುಳ್ಳುಗಳು, ಕಟ್ಟುಕತೆಗಳ ಮೂಲಕ ಲಸಿಕೆ ಅಭಿಯಾನದ ವೈಫಲ್ಯವನ್ನು ದೇಶದ ಜನರ ತಲೆಗೆ ಕಟ್ಟುವ ನಾಚಿಕೆಗೇಡಿನ ಪ್ರಯತ್ನದಲ್ಲೇ ಮುಳುಗಿದೆ. ಆರಂಭದಲ್ಲಿ ಲಸಿಕೆಯ ವಿರುದ್ಧ ಅಪಪ್ರಚಾರ ನಡೆಸಿದ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಈಗ ಲಸಿಕೆ ಕೊರತೆ ಬಗ್ಗೆ ಬೊಬ್ಬೆ ಹೊಡೆಯುತ್ತಿವೆ ಎಂಬ ನಗೆಪಾಟಲಿನ ಪ್ರಶ್ನೆಯನ್ನು ಎತ್ತಿವೆ. ಆದರೆ, ಹೊಸ ಲಸಿಕೆಯೊಂದನ್ನು(ಕೋವಾಕ್ಸಿನ್) ನಿಗದಿತ ಪ್ರಯೋಗಗಳಿಗೆ ಮುಂಚೆಯೇ ಜನರಿಗೆ ನೀಡಲು ಮುಂದಾದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವುದು ದೇಶದ ಜನರ ಜೀವದ ದೃಷ್ಟಿಯಿಂದ ಯಾವುದೇ ಜವಾಬ್ದಾರಿಯುತ ಮಾಧ್ಯಮ ಮತ್ತು ಪ್ರತಿಪಕ್ಷಗಳ ಕರ್ತವ್ಯವಾಗಿತ್ತು ಎಂಬ ಸತ್ಯವನ್ನು ಅಂತಹ ಹೇಳಿಕೆಯ ಮೂಲಕ ಮರೆಮಾಚಲಾಗುತ್ತಿದೆ ಎಂಬುದು ಈ ಐಟಿ ಸೆಲ್ ಮತ್ತು ಮೋದಿ ಭಕ್ತರಿಗೆ ದೇಶದ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಸಾಕ್ಷಿ.

ಈ ನಡುವೆ, ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ದೇಶದ ಪ್ರಮುಖ ಪ್ರತಿಪಕ್ಷಗಳು, ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ಒತ್ತಾಯಿಸಿವೆ. ಹಣಕಾಸು ಹೊರೆಯ ನೆಪವೊಡ್ಡಿ ಕೇವಲ 45ವರ್ಷ ಮೇಲಟ್ಪವರಿಗೆ ಮಾತ್ರ ತಾನು ಲಸಿಕೆ ಒದಗಿಸುವುದಾಗಿಯೂ ಮತ್ತು ಉಳಿದವರಿಗೆ ಆಯಾ ರಾಜ್ಯ ಸರ್ಕಾರಗಳೇ ಲಸಿಕೆ ವೆಚ್ಚ ಭರಿಸಬೇಕು ಎಂದು ಕೇಂದ್ರ ಏಪ್ರಿಲ್ ನಲ್ಲಿ ಪ್ರಕಟಿಸಿತ್ತು. ಅದಾದ ಬೆನ್ನಲ್ಲೇ ಲಸಿಕೆ ಲಭ್ಯತೆಯ ಯಾವ ಅಂದಾಜನ್ನೂ ಮಾಡದೆ ಪ್ರಧಾನಿ ಮೋದಿ, ಮೇ 1ರಿಂದಲೇ ದೇಶಾದ್ಯಂತ 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಜನರ ಜೀವ ಉಳಿಸುವ ಲಸಿಕೆ ಒದಗಿಸಲು ಹಣದ ಕೊರತೆಯ ನೆಪವೊಡ್ಡುವ ಚೌಕಿದಾರ್ ಮೋದಿಯವರು, ತಮ್ಮ ವಾಸದ ಭವ್ಯ ಬಂಗಲೆಯೂ ಸೇರಿದಂತೆ ಸೆಂಟ್ರಲ್ ವಿಸ್ತಾ ಎಂಬ ಹೊಸ ಸಂಸತ್ ಭವನ ಸಂಕೀರ್ಣಕ್ಕೆ, ಅದರ ತುರ್ತು ಅಗತ್ಯವೇ ಇಲ್ಲದೇ ಇದ್ದರೂ, ಬರೋಬ್ಬರಿ 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ತುರ್ತು ಚಾಲನೆ ನೀಡಿದ್ದಾರೆ! ಸಹಜವಾಗೇ ಇಂತಹ ಜನವಿರೋಧಿ ಧೋರಣೆ ದೇಶಾದ್ಯಂತ ವ್ಯಾಪಕ ಖಂಡನೆ ಮತ್ತು ಜನಾಕ್ರೋಶಕ್ಕೆ ಕಾರಣವಾಗಿದೆ.

ಹೊಸ ಸಂಸತ್‌ ಕಟ್ಟಡ ನಿರ್ಮಾಣ ಯೋಜನೆ ಕೈಬಿಟ್ಟು ವೈದ್ಯಕೀಯ ಸೌಲಭ್ಯ ವಿಸ್ತರಿಸಿ: ಕೇಂದ್ರ ಸರ್ಕಾರಕ್ಕೆ ನೆಟ್ಟಿಗರಿಂದ ಒತ್ತಾಯ

ಹಾಗೆ ನೋಡಿದರೆ, ದೇಶದ 18 ವರ್ಷ ಮೇಲ್ಪಟ್ಟ ಸುಮಾರು 84 ಕೋಟಿ ಜನರಿಗೆ ಲಸಿಕೆ ನೀಡಲು ಬೇಕಾಗುವುದು ಸುಮಾರು 68 ಸಾವಿರ ಕೋಟಿ ರೂ. ಅಷ್ಟೇ. ಅಂದರೆ, ಅದು ನಮ್ಮ ದೇಶದ ಒಟ್ಟು ಜಿಡಿಪಿಯ ಶೇ.0.36ರಷ್ಟಾಗಲಿದೆ(ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್ ಪ್ರಕಾರ). ಅದರಲ್ಲೂ ಕೇಂದ್ರ ಸರ್ಕಾರ, ತಾನು 20,870 ಕೋಟಿ ಮಾತ್ರ ಭರಿಸಲಿದ್ದು, ಉಳಿದ 46,323 ಕೋಟಿಯಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕು ಎಂದು ಹೇಳಿದೆ. ಹಾಗಾಗಿ, ಕೇಂದ್ರದ ಬಜೆಟ್ ನ ಶೇ.0.12ರಷ್ಟು ಮಾತ್ರ ಕೇಂದ್ರದ ಹೊರೆಯಾಗಲಿದ್ದು, ಉಳಿದ ಶೇ.0.24ರಷ್ಟು ಮೊತ್ತ ಎಲ್ಲಾ ರಾಜ್ಯಗಳ ಬಜೆಟ್ ಹಂಚಿಕೆಯಲ್ಲಿ ಹಂಚಿಹೋಗುತ್ತದೆ. ಅಷ್ಟಾಗಿಯೂ ಕನಿಷ್ಟ ದೇಶದ ಜಿಡಿಪಿಯ ಶೇ.0.36ರಷ್ಟು ಅತ್ಯಲ್ಪ ಪ್ರಮಾಣದ ಹಣವನ್ನು ಕೂಡ ದೇಶದ ಜನರ ಪ್ರಾಣ ರಕ್ಷಣೆಯ ಲಸಿಕೆ ಅಭಿಯಾನಕ್ಕೆ ನೀಡಲು ಪ್ರಧಾನಿ ಮೋದಿಯವರು ನಿರಾಕರಿಸುವ ಮೂಲಕ ತಮ್ಮ ಆದ್ಯತೆ ಜನರ ಜೀವವಲ್ಲ; ಬದಲಾಗಿ ತಮ್ಮ ವರ್ಚಸ್ಸು ಬೆಳೆಸುವ ಸೆಂಟ್ರಲ್ ವಿಸ್ತಾದಂತಹ ಯೋಜನೆಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅವರ ಅಂತಹ ಧೋರಣೆಯ ಪರಿಣಾಮವಾಗಿ ಈಗ ಕರ್ನಾಟಕದಲ್ಲಿ ಮಾತ್ರವಲ್ಲ; ಇಡೀ ದೇಶಾದ್ಯಂತ ಲಸಿಕೆಗಾಗಿ ಹಾಹಾಕಾರ ಉಂಟಾಗಿದ್ದು, ಈಗಾಗಲೇ ಮಹಾರಾಷ್ಟ್ರ ಮತ್ತಿರರ ರಾಷ್ಟ್ರಗಳು 18-44 ವಯೋಮಾನದವರ ಲಸಿಕೆ ಅಭಿಯಾನ ನಿಲ್ಲಿಸಿವೆ. ಇದೀಗ ಕರ್ನಾಟಕ ಕೂಡ ಅದೇ ಹಾದಿ ತುಳಿದಿದೆ.

ಈ ನಡುವೆ, ದೇಶದಲ್ಲಿ 44 ವರ್ಷ ಮೇಲ್ಪಟ್ಟ ಸುಮಾರು 34 ಕೋಟಿ ಜನರಿಗೆ ಸಂಪೂರ್ಣ ಲಸಿಕೆ ನೀಡಲು ಕೂಡ, ಲಸಿಕೆ ಲಭ್ಯತೆಯ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕನಿಷ್ಟ ಮೂರು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಈಗ ಒಂದೊಂದೇ ರಾಜ್ಯಗಳು ಸ್ಥಗಿತಗೊಳಿಸುತ್ತಿರುವ 18 ವರ್ಷ ಮೇಲ್ಪಟ್ಟವರ ಗುಂಪಿನ ಸುಮಾರು 50 ಕೋಟಿ ಮಂದಿಗೆ ಲಸಿಕೆ ನೀಡಬೇಕು. ಜೊತೆಗೆ ಎರಡು ವರ್ಷ ಮೇಲ್ಟಟ್ಟ ಮಕ್ಕಳು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ಏಕೆಂದರೆ ಮೂರನೇ ಅಲೆ ಎರಡನೇ ಅಲೆಗಿಂತ ಮಾರಣಾಂತಿಕವಾಗಿರಲಿದ್ದು, ಅದರಲ್ಲೂ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

 ಈ ನಡುವೆ, ಮೊದಲ ಲಸಿಕೆ ಪಡೆದ 6-8 ವಾರಗಳ ಮಿತಿಯಲ್ಲಿ ಎರಡನೇ ಡೋಸ್ ಸಲಿಕೆ ಪಡೆಯಬೇಕಿದೆ. ಇಲ್ಲವಾದಲ್ಲಿ ಅದು ನಿರೀಕ್ಷಿತ ಮಟ್ಟದಲ್ಲಿ ವೈರಸ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಜೊತೆಗೆ ಈ ಎರಡೂ ಡೋಸ್ ಲಸಿಕೆ ಪಡೆದ ಬಳಿಕ, ವೈರಸ್ ವಿರುದ್ಧ ಅದು ಶಕ್ತಿಶಾಲಿ ಎನಿಸುವುದು ಕೇವಲ ಒಂದರಿಂದ ಒಂದೂವರೆ ವರ್ಷ ಕಾಲ ಮಾತ್ರ. ಆ ಬಳಿಕ ಮತ್ತೆ ದೇಶದ ಎಲ್ಲರಿಗೂ ಲಸಿಕೆ ನೀಡಬೇಕಾಗುತ್ತದೆ. ಹಾಗಾಗಿ ಲಸಿಕೆ ನೀಡಿಕೆ ಎಂಬುದು ಕರೋನಾ ವೈರಾಣು ಇರುವವರೆಗೆ ಇನ್ನು ವಾರ್ಷಿಕ ಬಜೆಟ್ ಹೊರೆಯೇ!

ಕೋವಿಡ್‌ ಬಿಕ್ಕಟ್ಟು: ದುಬಾರಿ ವೆಚ್ಚದ ಯೋಜನೆ ಕೈಬಿಡಿ, ಆ ಹಣ ಆರೋಗ್ಯ ಕ್ಷೇತ್ರಕ್ಕೆ ಬಳಸಿ- KRS ಪಕ್ಷದಿಂದ ಆಗ್ರಹ

ಆದರೆ, ಸದ್ಯದ ಅಧಿಕೃತ ಅಂಕಿಅಂಶಗಳನ್ನು ಗಮನಿಸುವುದಾದರೆ; ಭಾರತ ದಿನವೊಂದಕ್ಕೆ 17-18 ಲಕ್ಷ ಲಸಿಕೆಗಳನ್ನು ನೀಡುತ್ತಿದ್ದು, ಕಳೆದ ಹದಿನೈದು ದಿನಗಳಲ್ಲಿ 40 ಲಕ್ಷದಷ್ಟಿದ್ದ ದೈನಂದಿನ ಲಸಿಕೆ ನೀಡಿಕೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ. ಒಂದು ಕಡೆ ಲಸಿಕೆಗಾಗಿ ಕೋವಿಲ್ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳುವವರ ಸಂಖ್ಯೆ ಪ್ರತಿದಿನ ಕೋಟ್ಯಂತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದರೆ, ಲಸಿಕೆ ಕೊರತೆಯಿಂದಾಗಿ ನೀಡಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರಿಗೆ ಲಸಿಕೆ ನೀಡಲು ಕೂಡ ಕನಿಷ್ಟ ಆರು ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ಇಂತಹ ಬಿಕ್ಕಟ್ಟಿನ ನಡುವೆ, ಇದೀಗ ಎರಡನೇ ಅಲೆಯ ಹಾನಿ ಕಡಿತ ಮಾಡಲು ಲಸಿಕೆಯೇ ಪ್ರಮುಖ ಅಸ್ತ್ರವಾಗಿದ್ದು ಕನಿಷ್ಟ 20 ಶೇ.ಜನರನ್ನಾದರೂ ನಾವು ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಸಮುದಾಯದ ರೋಗನಿರೋಧಕತೆ(ಹರ್ಡ್ ಇಮ್ಯುನಿಟಿ) ವೃದ್ಧಿಸಬೇಕಿದೆ. ಆ ಕೆಲಸವನ್ನು ಎಷ್ಟು ಬೇಗ ಮಾಡುತ್ತೇವೆಯೋ ಅಷ್ಟು ಬೇಗ ಎರಡನೇ ಅಲೆಯ ಅಟ್ಟಹಾಸ ತಗ್ಗಿಸಬಹುದು. ಹಾಗೇ ಇದಕ್ಕಿಂತ ಭಯಾನಕ ಮೂರನೇ ಅಲೆ ಬರದಂತೆ ತಡೆಯಬಹುದು. ಆದರೆ, ಒಂದು ಕಡೆ ದೇಶದ ಪ್ರಮುಖ ಎರಡು ಲಸಿಕೆ ತಯಾರಿಕಾ ಕಂಪನಿಗಳಾದ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಸದ್ಯದ ವೇಗದ ಉತ್ಪಾದನೆಯನ್ನು ಪರಿಗಣಿಸಿದರೆ, ಇಂತಹ ಸವಾಲಿನಲ್ಲಿ ನಾವು ಗೆಲ್ಲುವುದು ಅನುಮಾನಾಸ್ಪದ ಎಂಬ ಅಭಿಪ್ರಾಯಗಳಿವೆ.

ಹಾಗಾಗಿ, ಲಸಿಕೆ ಎಂಬುದು ಭಾರತದ ಮಟ್ಟಿಗೆ ಸದ್ಯಕ್ಕೆ ಹಣದ ಹೊರೆಯ ವಿಷಯವಷ್ಟೇ ಅಲ್ಲ; ಬದಲಾಗಿ ಕಾಲದ ವಿರುದ್ಧ ಓಟದ ಸವಾಲು. ಆದರೆ, ಅಂತಹ ಸವಾಲಿನ ಹೊತ್ತಿನಲ್ಲಿ, ದೇಶದ ಆಡಳಿತ ಐಷಾರಾಮಿ ಸೆಂಟ್ರಲ್ ವಿಸ್ತಾದ ಕಡೆ ಗಮನ ನೆಟ್ಟಿದೆ ಮತ್ತು ಚೌಕಿದಾರ ಪ್ರಧಾನಿ ಮೋದಿಯವರು ಕಳೆದ ಹಲವು ದಿನಗಳಿಂದ ದೇಶದ ಭೀಕರ ಸಂಕಷ್ಟಕ್ಕೆ ಬೆನ್ನು ತಿರುಗಿಸಿ, ನಿಗೂಢ ಮೌನಕ್ಕೆ ಶರಣಾಗಿದ್ದಾರೆ!

Previous Post

ಉದ್ಯೋಗ ಖಾತ್ರಿ ಯೋಜನೆ ಅನುಷ್ಟಾನ ಪುನಾರಂಭ: ಸಚಿವ ಕೆ.ಎಸ್ ಈಶ್ವರಪ್ಪ

Next Post

ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹೆಚ್ಚಳ: ಸರ್ಕಾರ ಗ್ರಾಮಗಳ ಕಡೆ ಗಮನಹರಿಸಬೇಕು, ವೈದ್ಯಕೀಯ ವ್ಯವಸ್ಥೆ ಬಲಪಡಿಸಬೇಕು -ಸಿದ್ದರಾಮಯ್ಯ

Related Posts

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು
ಕರ್ನಾಟಕ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

by ಪ್ರತಿಧ್ವನಿ
July 2, 2025
0

ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ...

Read moreDetails
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025
Next Post
ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹೆಚ್ಚಳ: ಸರ್ಕಾರ ಗ್ರಾಮಗಳ ಕಡೆ ಗಮನಹರಿಸಬೇಕು,  ವೈದ್ಯಕೀಯ ವ್ಯವಸ್ಥೆ ಬಲಪಡಿಸಬೇಕು  -ಸಿದ್ದರಾಮಯ್ಯ

ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹೆಚ್ಚಳ: ಸರ್ಕಾರ ಗ್ರಾಮಗಳ ಕಡೆ ಗಮನಹರಿಸಬೇಕು, ವೈದ್ಯಕೀಯ ವ್ಯವಸ್ಥೆ ಬಲಪಡಿಸಬೇಕು -ಸಿದ್ದರಾಮಯ್ಯ

Please login to join discussion

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada