ಮನೆಯಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಕರೋನ ಸಾಂಕ್ರಾಮಿಕಕ್ಕೆ ತುತ್ತಾದ ಜನರ ಲೆಕ್ಕವನ್ನು ಪರಿಷ್ಕರಿಸಿದ ಬಿಹಾರ ಸರ್ಕಾರ ಕರೋನ ದಿಂದ ಮೃತಪಟ್ಟವರ ಅಂಕಿಅಂಶಗಳವನ್ನು ಇಂದು ಬಿಡುಗಡೆ ಮಾಡಿದೆ. ಅಂಕಿಅಂಶಗಳ ಪ್ರಕಾರ, ಇವತ್ತು ಒಂದೇ ದಿನದಲ್ಲಿ ಸುಮಾರು 6,148 ಮಂದಿ ಸಾವನಪ್ಪಿದ್ದು, ಭಾರತದಲ್ಲಿ ಕರೋನದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೃತಪಟ್ಟಿರು ಏಕೈಕ ರಾಜ್ಯ ಬಿಹಾರ ಎನ್ನಲಾಗಿದೆ.
ಬಿಹಾರದ ಆರೋಗ್ಯ ಇಲಾಖೆಯು ಬುಧವಾರ ತನ್ನ ಒಟ್ಟು ಕರೋನ ಸಂಬಂಧಿತ ಸಾವಿನ ಸಂಖ್ಯೆಯನ್ನು ಸುಮಾರು 5,400 ರಿಂದ 9,300 ಕ್ಕೆ ಪರಿಷ್ಕರಿಸಿದೆ. ಯುನೈಟೆಡ್ ಸ್ಟೇಟ್ಸ್ ಸಾವಿನ ಸಂಖ್ಯೆಗೆ ಹೋಲಿಸಿದರೆ, ಫೆಬ್ರವರಿ 12 ರಂದು ಅಲ್ಲಿ 5,444 ಕರೋನ ಸಾವುಗಳನ್ನು ದಾಖಲಿಸಿದೆ.
ಬಿಹಾರ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಶ್ವಿ ಯಾದವ್ ಅವರು ಗುರುವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಟೀಕಿಸಿದ್ದಾರೆ.
ತೇಜಶ್ವಿ ಯಾದವ್ ಅವರು ಟ್ವೀಟ್ ಮಾಡಿ, “ನಿತೀಶ್ ಜಿ, ಅಷ್ಟು ಸುಳ್ಳು ಹೇಳಬೇಡಿ ಮತ್ತು ಅವರ ಸಮಾಧಿ ಮಾಡಿದ ನಂತರ ನೀವು ಎಂದಿಗೂ ಎದ್ದೇಳಲು ಸಾಧ್ಯವಿಲ್ಲ. ನೀವು ಸಿಕ್ಕಿಬಿದ್ದ ಒಂದೇ ದಿನದಲ್ಲಿ ಸಾವಿನ ಸಂಖ್ಯೆಯನ್ನು 4000 ಹೆಚ್ಚಿಸಲಾಗಿದೆ, ನಿತೀಶ್ ಸರ್ಕಾರವು ವರದಿ ಮಾಡಿದ ಸಾವಿನ ಸಂಖ್ಯೆಗಿಂತ 20 ಪಟ್ಟು ಹೆಚ್ಚಿದೆ. ನಿತೀಶ್ ಸರ್ಕಾರ ಹೇಗೆ ನಕಲಿಯೊ ಅವರ ಅಂಕಿಅಂಶಗಳು ಸಹ ನಕಲಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಪಾಟ್ನಾ ಹೈಕೋರ್ಟ್ನ ವಿಭಾಗೀಯ ಪೀಠವು ಮೇ ತಿಂಗಳಲ್ಲಿ ಬಿಹಾರ ಸರ್ಕಾರವನ್ನು ದೂಷಿಸಿತ್ತು ಮತ್ತು ಬಕ್ಸಾರ್ ಜಿಲ್ಲೆಯ ಅಂಕಿ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇಬ್ಬರು ಉನ್ನತ ಸರ್ಕಾರಿ ಅಧಿಕಾರಿಗಳು ಎರಡು ಪ್ರತ್ಯೇಕ ಅಫಿಡವಿಟ್ಗಳಲ್ಲಿ ಮಂಡಿಸಿದರು. ಎಲ್ಲಾ ಸಂಗತಿಗಳನ್ನು ದಾಖಲೆಗಳನ್ನು ಇಡುವ ಮೊದಲು ಅದನ್ನು ಪರಿಶೀಲಿಸುವಂತೆ ನ್ಯಾಯಾಲಯ ಸರ್ಕಾರವನ್ನು ಕೋರಿತ್ತು.
“ಎಲ್ಲಾ ಸಂಗತಿಗಳನ್ನು ಎಲ್ಲಾ ಮೂಲಗಳಿಂದ ಪರಿಶೀಲಿಸಬೇಕು ನಂತರ ಅದನ್ನು ನಮ್ಮ ಮುಂದೆ ಇಡಬೇಕು, ಇಲ್ಲದಿದ್ದರೆ ಅದು ಸುಳ್ಳು ಅಥವಾ ಅಪೂರ್ಣವಾದ ಅಫಿಡವಿಟ್ ಸಲ್ಲಿಸುವ ಮೊತ್ತವಾಗಿರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎಸ್. ಕುಮಾರ್ ಸರ್ಕಾರಕ್ಕೆ ತಿಳಿಸಿದರು.
ನ್ಯಾಯಾಲಯದ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಆರೋಗ್ಯ ಇಲಾಖೆ ಆಯಾ ಜಿಲ್ಲೆಗಳು ಮತ್ತು ಆಸ್ಪತ್ರೆಗಳಲ್ಲಿನ ಕರೋನ ಸೊಂಕು ಮತ್ತು ಸಾವುಗಳ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು, ನಾಗರಿಕ ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಮುಖ್ಯಸ್ಥರಿಗೆ ವಿವರವಾದ ಸೂಚನೆಗಳನ್ನು ಕಳುಹಿಸಿತ್ತು.
ಜೂನ್ 8 ರಂದು ಬಿಹಾರ ಸರ್ಕಾರ, ಜೂನ್ 7 ರಂದು ಸಾಂಕ್ರಾಮಿಕ ರೋಗದಿಂದಾಗಿ 5,424 ರಿಂದ 9,375 ಕ್ಕೆ ಏರಿದೆ ಎಂದು ಹೇಳಿದ್ದಾರೆ. 20 ದಿನಗಳ ಕಾಲ ನಡೆದ ಪರಿಶೀಲನಾ ಕಸರತ್ತಿನಲ್ಲಿ ರಾಜ್ಯ ಸರ್ಕಾರ 3,951 ಹೆಚ್ಚು ಸಾವುಗಳನ್ನು ಪಟ್ಟಿಯಲ್ಲಿ ಸೇರಿಸಿದೆ .
ರಾಜ್ಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಾವುಗಳು 2021 ಏಪ್ರಿಲ್ ರಿಂದ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಸಂಭವಿಸಿವೆ.
ಪಾಟ್ನಾದಲ್ಲಿ ಅತಿ ಹೆಚ್ಚು 2,303 ಸಾವುಗಳು ಸಂಭವಿಸಿವೆ, ನಂತರದ ಸ್ಥಾನಗಳಲ್ಲಿ ಮುಜಾಫರ್ಪುರ್ 609, ನಳಂದ (463), ಬೆಗುಸರಾಯ್ (454), ಪೂರ್ವ ಚಂಪಾರನ್ (425), ದರ್ಭಂಗಾ (342) ಮತ್ತು ಮಧುಬಾನಿ (317) ಈ ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿದೆ.
ಸಾವುಗಳ ಸಂಖ್ಯೆಯಲ್ಲಿನ ಹೆಚ್ಚಳವು ಖಾಸಗಿ ಆಸ್ಪತ್ರೆಗಳಲ್ಲಿ, ಆರೋಗ್ಯ ಸೌಲಭ್ಯಗಳಿಲ್ಲದೆ, ಹೊಮ್ ಐಸೋಲೇಷನ್ ಮತ್ತು negative ಪರೀಕ್ಷೆ ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ ನಂತರ ಕರೋನ ನಂತರದ ತೊಂದರೆಗಳಿಂದ ಸಾಯುತ್ತಿರುವವರನ್ನು ನೋಡಬಹುದು ಎಂದು ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಪ್ರತ್ಯಯ ಅಮೃತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾವಿನ ಪರಿಶೀಲನೆಗಾಗಿ ಆರೋಗ್ಯ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದೆ ಎಂದು ಅಮೃತ್ ಹೇಳಿದ್ದಾರೆ.
ಕರೋನದಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಬಿಹಾರ ಸರ್ಕಾರ ₹ 4 ಲಕ್ಷ ಪರಿಹಾರವನ್ನು ಘೋಷಿಸಿತ್ತು. ಈ ಕುರಿತು ವರದಿಗಾರರು ಇಲ್ಲಿಯವರೆಗೆ ಎಷ್ಟು ಕುಟುಂಬಗಳಿಗೆ ಪರಿಹಾರವನ್ನು ಪಡೆದಿದ್ದಾರೆ ಎಂದು ಕೇಳಿದಾಗ, ಶ್ರೀ ಅಮೃತ್, “ನಾವು ಪರಿಶೀಲಿಸುತ್ತೇವೆ ಮತ್ತು ಹೇಳುತ್ತೇವೆ” ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಬಿಹಾರ, ರಾಜ್ಯದಲ್ಲಿ COVID-19 ನಿಂದ ಸಾವನ್ನಪ್ಪಿದ ನೂರಾರು ವೈದ್ಯರಿಗೆ ಪರಿಹಾರವನ್ನು ಕೋರಿದೆ.
ಇಲ್ಲಿ ಈವರೆಗೆ ಒಟ್ಟು 7.15 ಲಕ್ಷ ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 6.98 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಆದರೆ 7,352 ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.
ಭಾರತವು ಕಳೆದ 24 ಗಂಟೆಗಳಲ್ಲಿ 94,052 ಕೋವಿಡ್ -19 ಪ್ರಕರಣಗಳನ್ನು ಮತ್ತು ಕಳೆದ 24 ಗಂಟೆಗಳಲ್ಲಿ 6,148 ಸಾವುಗಳನ್ನು ವರದಿ ಮಾಡಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಂದು ದಿನದಲ್ಲಿ ದೇಶ ಕಂಡ ಅತಿ ಹೆಚ್ಚು ಸಾವುಗಳು ಇದು.