• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಹೆಚ್ಚು ಹೆಚ್ಚು ಸಂಸ್ಕರಿತ ಆಹಾರದ ಸೇವನೆಯು ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು: ಅಧ್ಯಯನ ವರದಿ

ಫಾತಿಮಾ by ಫಾತಿಮಾ
August 2, 2022
in ಅಭಿಮತ
0
ಹೆಚ್ಚು ಹೆಚ್ಚು ಸಂಸ್ಕರಿತ ಆಹಾರದ ಸೇವನೆಯು ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು: ಅಧ್ಯಯನ ವರದಿ
Share on WhatsAppShare on FacebookShare on Telegram

ತಂಪು ಪಾನೀಯಗಳು, ಚಿಪ್ಸ್ ಮತ್ತು ಕುಕೀಗಳಂತಹ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಜನರು ಇಂತಹ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವವರಿಗಿಂತ ಬುದ್ಧಿಮಾಂದ್ಯರಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನವು ಹೇಳುತ್ತದೆ.

ADVERTISEMENT

ವ್ಯಕ್ತಿಯೊಬ್ಬರ ಆಹಾರ ಕ್ರಮದಲ್ಲಿ ಸಂಸ್ಕರಿಸಿದ (ultra processed)ಆಹಾರಗಳಿಗಿಂತ ಸಂಸ್ಕರಿಸದ ಅಥವಾ ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇರಿಸುವುದು ಹೆಚ್ಚು ಆರೋಗ್ಯದಾಯಕ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಸ್ಕರಿಸಲ್ಪಟ್ಟ ಆಹಾರಗಳು ಬುದ್ಧಿಮಾಂದ್ಯತೆಯನ್ನು ಉಂಟುಮಾಡುತ್ತವೆ ಎಂದು ಅಧ್ಯಯನವು ಸಾಬೀತುಪಡಿಸುವುದಿಲ್ಲ. ಆದರೆ ಅಂತಹ ಒಂದು ಸಾಧ್ಯತೆಯನ್ನು ಇದು ತೋರಿಸುತ್ತದೆ. 

ಅಲ್ಟ್ರಾ ಪ್ರೊಸೆಸ್‌ಡ್ ಆಹಾರಗಳಲ್ಲಿ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪು ಕಂಡುಬರುತ್ತವೆ ಮತ್ತು ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಮತ್ತು ಫೈಬರ್ ಕಡಿಮೆ ಇರುತ್ತದೆ.  ತಂಪು ಪಾನೀಯಗಳು, ಉಪ್ಪು ಮತ್ತು ಸಕ್ಕರೆ ತಿಂಡಿಗಳು, ಐಸ್ ಕ್ರೀಮ್, ಸಾಸ್‌ಗಳು, ಡೀಪ್-ಫ್ರೈಡ್ ಚಿಕನ್, ಯೋಗರ್ಟ್,  ಕೆಚಪ್, ಮಯನೈಸ್,  ಪ್ಯಾಕ್ ಮಾಡಿದ ಬ್ರೆಡ್‌ಗಳು ಮತ್ತು ಫ್ಲೇವರ್‌ಡ್ ಧಾನ್ಯಗಳನ್ನು ಹೆಚ್ಚಾಗಿ ಸಂಸ್ಕರಿಸಲಾಗುತ್ತದೆ.

ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ಆಗಿರುವ  Neurology®ಯ ಆನ್‌ಲೈನ್ ಸಂಚಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು ಈ ರೀತಿ ಸಂಸ್ಕರಿಸಿದ ಆಹಾರಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತವೆ ಎಂದು  ಸಂಶೋಧನೆಯು ಕಂಡುಹಿಡಿದಿದೆ. ಅಲ್ಲದೆ ಆರೋಗ್ಯಕರ ಆಯ್ಕೆಗಳೊಂದಿಗೆ ಅವುಗಳನ್ನು ಬದಲಿಸುವುದರಿಂದ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಲೂಬಜುದು ಎಂದು ಅಧ್ಯಯನ ಹೇಳುತ್ತದೆ.

 

“ಅಲ್ಟ್ರಾ-ಪ್ರೊಸೆಸ್ಸ್‌ಡ್ ಆಹಾರಗಳು ಅನುಕೂಲಕರ ಮತ್ತು ರುಚಿಕರವಾಗಿರುತ್ತವೆ, ಆದರೆ ಅವು ವ್ಯಕ್ತಿಯ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ” ಎಂದು ಚೀನಾದ ಟಿಯಾಂಜಿನ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಯೂ ಆಗಿರುವ ಈ  ಅಧ್ಯಯನ ಲೇಖಕರಾಗಿರುವ ಹುಪಿಂಗ್ ಲಿ ಹೇಳಿದ್ದಾರೆ.  “ಈ ಆಹಾರಗಳು ಫುಡ್ ಅಡಿಟಿವ್‌ಗಳನ್ನು ಹೊಂದಿರಬಹುದು ಅಥವಾ ಪ್ಯಾಕೇಜಿಂಗ್‌ ಮಾಲಿಕ್ಯೂಲ್‌ಗಳನ್ನು ಒಳಗೊಂಡಿರಬಹುದು ಅಥವಾ ಅತಿ ಹೆಚ್ಚಿನ ತಾಪದಲ್ಲಿ ಸಂಸ್ಕರಣೆಗೊಂಡಿರಬಹುದು, ಇವೆಲ್ಲವೂ ಚಿಂತನೆ ಮತ್ತು ಸ್ಮರಣೆಯ ಕೌಶಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ಇತರ ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಧ್ಯಯನಕ್ಕಾಗಿ, ಸಂಶೋಧಕರು UK ಬಯೋಬ್ಯಾಂಕ್‌ನಿಂದ 72,083 ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಭಾಗವಹಿಸಿದವರು 55 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಅಧ್ಯಯನದ ಪ್ರಾರಂಭದಲ್ಲಿ ಯಾವುದೇ ಬುದ್ಧಿಮಾಂದ್ಯತೆಯನ್ನು ಹೊಂದಿದವರಾಗಿರಲಿಲ್ಲ.  ಅವರನ್ನು ಸರಾಸರಿ 10 ವರ್ಷಗಳ ಕಾಲ ಪರೀಕ್ಷಿಸಲಾಗಿದೆ. ಈ ಅಧ್ಯಯನದ ಅಂತ್ಯದ ವೇಳೆಗೆ, 518 ಜನರು ಬುದ್ಧಿಮಾಂದ್ಯತೆಗೆ ಒಳಗಾಗಿದ್ದಾರೆ. 

ಅಧ್ಯಯನದ ಸಮಯದಲ್ಲಿ, ಅದರಲ್ಲಿ ಭಾಗವಹಿಸುವವರು ಹಿಂದಿನ ದಿನ ಏನನ್ನು ತಿನ್ನುತ್ತಿದ್ದರು ಮತ್ತು ಕುಡಿಯುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿತ್ತು. ನಂತರ ಸಂಶೋಧಕರು ಈ ಸಂಶೋಧನೆಯಲ್ಲಿ ಭಾಗಿಯಾದವರನ್ನು  ಕಡಿಮೆ ಪ್ರಮಾಣದಲ್ಲಿ ಸಂಸ್ಕರಿತ ಆಹಾರಗಳನ್ನು ಸೇವಿಸುವುದರಿಂದ ಅತ್ಯಧಿಕ ಪ್ರಮಾಣದಲ್ಲಿ ಸೇವಿಸುವ  ಆಧಾರದ ಮೇಲೆ ನಾಲ್ಕು ಸಮಾನ ಗುಂಪುಗಳಾಗಿ ವಿಂಗಡಿಸಿದ್ದಾರೆ.

ಸರಾಸರಿಯಾಗಿ,  ಕಡಿಮೆ ಗುಂಪಿನ ಜನರ ದೈನಂದಿನ ಆಹಾರದಲ್ಲಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಪಾಲು 9% ಅಥವಾ ದಿನಕ್ಕೆ ಸರಾಸರಿ 225 ಗ್ರಾಂ ರಷ್ಟಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಗುಂಪಿನಲ್ಲಿರುವ ಜನರ ಆಹಾರದಲ್ಲಿ  ಇವುಗಳ ಪಾಲು 28% ಅಥವಾ ದಿನಕ್ಕೆ ಸರಾಸರಿ 814 ಗ್ರಾಂ.  ಪಿಜ್ಜಾ ಅಥವಾ ಫಿಶ್ ಸ್ಟಿಕ್‌ಗಳಂತಹ ಐಟಂಗಳ ಒಂದು ಸೇವೆಯು 150 ಗ್ರಾಂಗಳಿಗೆ ಸಮನಾಗಿರುತ್ತದೆ.  ಹೆಚ್ಚಿನ ಸಂಸ್ಕರಿಸಿದ ಆಹಾರ ಸೇವನೆಗೆ ಕೊಡುಗೆ ನೀಡುವ ಮುಖ್ಯ ಆಹಾರಗಳೆಂದರೆ ಪಾನೀಯಗಳು, ನಂತರ ಸಕ್ಕರೆ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಹಾಲಿನ ಉತ್ಪನ್ನಗಳು.

ಸಂಶೋಧನೆಯಲ್ಲಿ ಭಾಗಿಯಾದವರಲ್ಲಿ ಮಾಡಲಾದ ನಾಲ್ಕು ಗುಂಪುಗಳಲ್ಲಿ ಅತಿ ಕಡಿಮೆ ಸೇವಿಸುವವರ ಗುಂಪಿನಲ್ಲಿರುವ 18,021 ಜನರಲ್ಲಿ 105 ಜನರು ಬುದ್ಧಿಮಾಂದ್ಯರಾದರೆ ಆದರೆ ಅತಿ ಹೆಚ್ಚು ಸೇವಿಸುತ್ತಿದ್ದ ಗುಂಪಿನಲ್ಲಿರುವ 18,021 ಜನರಲ್ಲಿ 150 ಜನರು ಬುದ್ಧಿಮಾಂದ್ಯತೆಗೆ ಒಳಗಾಗಿದ್ದರು.

ವಯಸ್ಸು, ಲಿಂಗ, ಬುದ್ಧಿಮಾಂದ್ಯತೆಯ ಕುಟುಂಬದ ಇತಿಹಾಸ ಮತ್ತು ಹೃದ್ರೋಗ ಮತ್ತು ಬುದ್ಧಿಮಾಂದ್ಯತೆಯ ಅಪಾಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳನ್ನು ಪರಿಗಣಿಸಿದ ನಂತರ, ಅಲ್ಟ್ರಾ-ಪ್ರೊಸೆಸ್ಸ್‌ಡ್ ಆಹಾರಗಳ ದೈನಂದಿನ ಸೇವನೆಯಲ್ಲಿ ಪ್ರತಿ 10% ಹೆಚ್ಚಳಕ್ಕೆ, ಜನರು ಬುದ್ಧಿಮಾಂದ್ಯತೆಯ ಅಪಾಯವನ್ನು 25% ಹೆಚ್ಚು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.  .

ಒಬ್ಬ ವ್ಯಕ್ತಿಯು 10% ಸಂಸ್ಕರಿಸಿದ ಆಹಾರಗಳಿಗೆ ಬದಲಾಗಿ ತಾಜಾ ಹಣ್ಣುಗಳು, ತರಕಾರಿಗಳು, ಕಾಳುಗಳು, ಹಾಲು ಮತ್ತು ಮಾಂಸದಂತಹ ಸಂಸ್ಕರಿಸದ ಅಥವಾ ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸಿದರೆ   ಏನಾಗುತ್ತದೆ ಎಂದು ಅಂದಾಜು ಮಾಡಲು ಸಹ ಸಂಶೋಧಕರು ಅಧ್ಯಯನದ ಡೇಟಾವನ್ನು ಬಳಸಿಕೊಂಡಿದ್ದು ಅಂತಹ ಪರ್ಯಾಯವು ಬುದ್ಧಿಮಾಂದ್ಯತೆಯ ಸಾಧ್ಯತೆಯನ್ನು 19% ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಹುಪಿಂಗ್ ಲಿ  “ಆಹಾರದಲ್ಲಿನ ಸಣ್ಣ ಮತ್ತು ನಿರ್ವಹಿಸಬಹುದಾದ ಬದಲಾವಣೆಗಳು ವ್ಯಕ್ತಿಯ ಬುದ್ಧಿಮಾಂದ್ಯತೆಯ ಅಪಾಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಸಾಬೀತಾಗಿರುವುದು ಮಾನವನ ಆರೋಗ್ಯದ ದೃಷ್ಟಿಯಿಂದ ಉತ್ತೇಜನಕಾರಿಯಾಗಿದೆ” ಎಂದಿದ್ದಾರೆ.

Tags: Covid 19ಕರೋನಾಕೋವಿಡ್-19
Previous Post

ಸರಕಾರಿ ಲಾಂಛನ ವಿಕಾರಗೊಳಿಸಲಾಯಿತೆ?: ಇತಿಹಾಸಕಾರರು ಏನು ಹೇಳುತ್ತಾರೆ?

Next Post

ಆರ್ಥಿಕ ಶಕ್ತಿ ಕೇಂದ್ರವಾಗಿ ಪುಟಿದೇಳಲು ಕರ್ನಾಟಕಕ್ಕೆ ಸಮಯವಾಗಿದೆ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಆರ್ಥಿಕ ಶಕ್ತಿ ಕೇಂದ್ರವಾಗಿ ಪುಟಿದೇಳಲು ಕರ್ನಾಟಕಕ್ಕೆ ಸಮಯವಾಗಿದೆ

ಆರ್ಥಿಕ ಶಕ್ತಿ ಕೇಂದ್ರವಾಗಿ ಪುಟಿದೇಳಲು ಕರ್ನಾಟಕಕ್ಕೆ ಸಮಯವಾಗಿದೆ

Please login to join discussion

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada