ಬೆಂಗಳೂರು: ಕಾಂಗ್ರೆಸ್(Congress Karnataka) ನಾಯಕರಿಗೆ ಲೋಕಸಭಾ(Loka Saba) ಚುನಾವಣೆ ತಯಾರಿ ಬೆನ್ನಲ್ಲೇ ನಿಗಮ ಮಂಡಳಿ ನೇಮಕದ ಗೊಂದಲ ಕೂಡ ಎದುರಾಗಿದೆ.
ಬಹುನಿರೀಕ್ಷಿತ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿರುವ ನಡುವೆಯೇ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Karge) ಅವರೊಂದಿಗೆ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮಾತುಕತೆ ನಡೆಸಿದ್ದಾರೆ. ಈ ವಿಷಯದ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಇಬ್ಬರು ಅಧ್ಯಕ್ಷರು, ನಿಗಮ ಮಂಡಳಿ ನೇಮಕದ ನಡುವೆಯೇ ಅನಗತ್ಯ ಹೇಳಿಕೆ ನೀಡುತ್ತಿರುವ ಸಚಿವರ ವಿರುದ್ಧವೂ ಕ್ರಮವಹಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸಚಿವರಿಂದ ಹೈಕಮಾಂಡ್ ನಾಯಕರ ವಿರುದ್ದವೇ ಟೀಕೆಗಳು ಹೆಚ್ಚಾಗಿದ್ದು, ಇದು ಮುಂದುವರಿದರೆ ನೊಟೀಸ್ ನೀಡುವ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಮತ್ತು ಡಿಕೆಶಿ ಸಮಾಲೋಚನೆ ನಡೆಸಿದ್ದಾರೆ.
![](https://pratidhvani.com/wp-content/uploads/2024/01/WhatsApp-Image-2024-01-26-at-09.04.19-1024x683.webp)
ಈ ನಡುವೆ ಸಚಿವ ಕೆ.ಎನ್. ರಾಜಣ್ಣಗೆ ನೊಟೀಸ್ ನೀಡುವ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜಣ್ಣ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷರೇ ಗಮನಿಸಿದ್ದಾರೆ. ಸಿಎಂ ಕೂಡ ಈ ಬಗ್ಗೆ ಗಮನವಹಿಸುತ್ತಾರೆ. ರಾಜಣ್ಣ ಎಐಸಿಸಿ ಅಡಿಯಲ್ಲಿ ಬರುವುದರಿಂದ ಅವರ ಮಾತುಗಳಿಗೆ ಎಐಸಿಸಿ ಬಹಳ ಗೌರವಪೂರ್ವಕವಾಗಿ ಏನು ಮಾಡಬೇಕೋ ಮಾಡುತ್ತದೆ ಎಂದು ಸಚಿವರಿಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.