ಈ ಬಾರಿಯ ಕರ್ನಾಟಕ ( Karnataka ) ವಿಧಾನಸಭೆಯಲ್ಲಿ ( vidhana sabha ) ಕಾಂಗ್ರೆಸ್ ( Congress ) ದಿಗ್ವಿಜಯವನ್ನು ಸಾಧಿಸಿರೋದು ದೇಶದ ರಾಜಕಾರಣದಲ್ಲಿ ( political ) ಹಲವು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ ಅದರಲ್ಲೂ ಕೂಡ ನೆಲಕಚ್ಚುತ್ತಿದ್ದ ಕಾಂಗ್ರೆಸ್ಸಿಗೆ ಹೊಸದೊಂದು ಚೈತನ್ಯವನ್ನು ಕರ್ನಾಟಕದ ( Karnataka ) ಕಾಂಗ್ರೆಸ್ಸಿನ ಗೆಲುವು ( victory ) ತಂದುಕೊಟ್ಟಿದೆ. ಅಸಲಿಗೆ ಕಾಂಗ್ರೆಸ್ನ ( Congress ) ಈ ಗೆಲುವು ಸ್ವತಹ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ( Prime minister Narendra Modi ) ಅವರಿಗೆ ಕೂಡ ಮುಂದಿನ ಲೋಕಸಭೆ ಚುನಾವಣೆಯ ( Parliament Election ) ಬಗ್ಗೆ ಭಯ ಹುಟ್ಟುವ ಹಾಗೆ ಮಾಡಿದೆ.
ಅದರಲ್ಲೂ ಯಾವಾಗ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನ ಅಜೆಂಡವಾಗಿ ಇಟ್ಟುಕೊಂಡು ಕರ್ನಾಟಕದಲ್ಲಿ ( Karnataka ) ಬಹುದೊಡ್ಡ ಗೆಲುವನ್ನ ಸಾಧಿಸುತ್ತೋ ಇದು ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ( North India ) ಬರುವ ಚುನಾವಣೆಗಳ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿರೋದು ಸುಳ್ಳಲ್ಲ ಒಂದು ವೇಳೆ ಉತ್ತರ ಭಾರತದ ವಿವಿಧ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನ ಘೋಷಣೆ ಮಾಡಿದರೆ ಅಲ್ಲಿಯೂ ಕೂಡ ಬಿಜೆಪಿ ಸೋಲುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ

ಅದಲ್ಲೂ ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ ಬಿಜೆಪಿ ವಿರೋಧಿ ಅಲೆಯಿದ್ದು ಮಧ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಗೆಲುವು ಸಿಗಬಹುದು ಎಂಬ ಅಭಿಪ್ರಾಯಗಳು ರಾಜಕೀಯ ಪಂಡಿತರಿಂದ ಕೇಳಿ ಬರ್ತಾ ಇದೆ ಹೀಗಾಗಿ, ಮಧ್ಯಪ್ರದೇಶದ ಕಾಂಗ್ರೆಸ್ನ ಪ್ರಮುಖ ನಾಯಕರು ಈಗಾಗಲೇ ದೆಹಲಿ ಹೈಕಮಾಂಡ್ನ ಹಿರಿಯ ನಾಯಕರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಇದರ ನಡುವೆಯೇ ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪಚರಿಯನ್ನ ವಿಚಾರಿಸಿಕೊಂಡಿದ್ದಾರೆ.

ಈ ಕುರಿತು ಟ್ವಿಟ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಕಚೇರಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಹಾಗೂ ಅವರ ಪತ್ನಿ ಅಮೃತಾ ರೈ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜು ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಅವರು ಈ ವೇಳೆ ಉಪಸ್ಥಿತರಿದ್ದರು.” ಎಂದು ತಿಳಿಸಿದೆ
ಈ ಸುದ್ದಿಗಾಗಿ ಓದಿದ್ದೀರಾ? ; ದೆಹಲಿ | ಮದುವೆಗೆ ನಿರಾಕರಣೆ ; ರಾಡ್ನಿಂದ ಹಲ್ಲೆ ನಡೆಸಿ ವಿದ್ಯಾರ್ಥಿನಿ ಭೀಕರ ಹತ್ಯೆ
ಹೀಗಾಗಿ ಇದೀಗ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಹಾಗೂ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಭೇಟಿ ಇದೀಗ ರಾಜಕೀಯ ವಲಯದಲ್ಲಿ ಹಲವು ಕುತೂಹಲಗಳನ್ನು ಮೂಡಿಸಿದ್ದು ಇದು ಮುಂಜಾನೆಗಳಲ್ಲಿ ಯಾವ ರೀತಿಯಾದಂತಹ ಮಹತ್ವವನ್ನ ಪಡೆಯಲಿದೆ ಅನ್ನೋದನ್ನ ಕಾದುನೋಡಬೇಕಾಗಿದೆ






