ಕಾಟೇರ ಸಿನಿಮಾದ ಸಕ್ಸಸ್ ನಲ್ಲಿರುವ ನಟ ದರ್ಶನ್ ಗೆ (Darshan) ಹೊಸ ಸಂಕಷ್ಟ ಎದುರಾಗಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುರಿತು ಜಯಶ್ರೀ ಎಂಬುವವರು ಮಹಿಳಾ ಆಯೋಗಕ್ಕೆ (Karnataka State Commission for Women) ದೂರು ನೀಡಿದ್ದಾರೆ.
![](https://pratidhvani.com/wp-content/uploads/2024/02/IMG-20240222-WA0009-1024x768.webp)
ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿ ಪರ್ವದಲ್ಲಿ ದರ್ಶನ್, ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎಂದು ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ದರ್ಶನ್ ಅವರ ಈ ಹೇಳಿಕೆಗೆ ಒಕ್ಕಲಿಗ ಗೌಡತಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
![](https://pratidhvani.com/wp-content/uploads/2024/02/IMG-20240222-WA0007-768x1024.webp)
ಸಂಸದೆ ಸುಮಲತಾ, ಸ್ವಾಮೀಜಿಗಳ ಉಪಸ್ಥಿತಿ ಇದ್ದರೂ, ಅದೃಷ್ಟ ದೇವತೆ ನಿಮ್ಮ ಮನೆ ಬಾಗಿಲಿಗೆ ಬಂದ್ರೆ, ಬೆಡ್ ರೂಮ್ ಒಳಗಡೆ ಕೂಡಿ ಹಾಕ್ಕೊಳ್ಳಿ ಎಂದು ಹೇಳಿದ್ದಾರೆ. ಇದು ಮಹಿಳೆಯರಿಗೆ ಮುಜುಗರ ತರುವಂತಿದೆ ಇಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಗೌಡತಿಯರ ಸೇನೆ ರಾಜ್ಯಾಧ್ಯಕ್ಷೆ ರೇಣುಕಾ ಕಿಡಿಕಾರಿದ್ದಾರೆ.
ದರ್ಶನ್ ಅವರು ಡಾ.ರಾಜ್ ಕುಮಾರ್ ಅವರಿಂದ ನೋಡಿ ಕಲಿಯೋದು ಬಾಕಿಯಿದೆ. ನಿರ್ಮಾಪಕರನ್ನ ಕೀಳಾಗಿ ನೋಡೋದು ಎಷ್ಟು ಸರಿ? ಕಾಟೇರ ಸಕ್ಸಸ್ ಆಗಿದೆ ನಿಜ. ಆದರೆ ದರ್ಶನ್ ಹಾಗೇ ಮಾತಾಡಬಾರದು. ದರ್ಶನ್ ಗೆ ಈ ಅಧಿಕಾರ ಕೊಟ್ಟೋರು ಯಾರು? ದರ್ಶನ್ ಫ್ಯಾನ್ಸ್ ಇದನ್ನೇ ಕಲಿತಾರೆ. ದರ್ಶನ್ ಹೆಣ್ಣುಮಕ್ಕಳನ್ನ ಛೇಡಿಸ್ತಾರೆ. ಸಾರ್ವಜನಿಕ ಜೀವನದಲ್ಲಿ ಹೀಗೆ ಮಾತನಾಡಬಾರದಿತ್ತು. ದರ್ಶನ್ ಹೆಣ್ಣುಮಕ್ಕಳಿಗೆ ಯಾವ್ ರೀತಿ ಗೌರವ ಕೊಡ್ತಾರೆ ನಾವು ನೋಡಿದ್ದೀವಿ. ದರ್ಶನ್ ಸಮಾಜಕ್ಕೆ ಒಳ್ಳೆ ಸಂದೇಶ ಕೊಡ್ತಿಲ್ಲ. ದರ್ಶನ್ ಈ ಕೂಡಲೇ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ಮನೆ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
#Karnataka #bengaluru #darshan #actor #sandalwood