2021ರ ಅಕ್ಟೋಬರ್ 29ರಂದು ಇಡೀ ರಾಜ್ಯ ಆಘಾತಕ್ಕೊಳಗಾಗಿತ್ತು. ಕನ್ನಡಿಗರ ಮನೆ ಮನಗಳಲ್ಲಿ ನೆಲೆಸಿದ್ದ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth Rajkumar) ಹೃದಯಾಘಾತದಿಂದ (Heart attack) ವಿಧಿವಶರಾಗಿದ್ದರು. ಈ ಸುದ್ದಿ ಕನ್ನಡಿಗರಿಗೆ ಬರ ಸಿಡಿಲಿನಂತೆ ಬಂದೆರಗಿತ್ತು.

ಇದೀಗ ಈ ಕರಾಳ ಘಟನೆಗೆ ಮೂರು ವರ್ಷ. ಆದ್ರೆ ಇಂದಿಗೂ ಅಪ್ಪು (Appu) ನೆನಪು ಹಚ್ಚ ಹಸಿರಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Cm siddaramaiah) ಕರ್ನಾಟಕ ರತ್ನ ಪುನೀತ್ ರಾಜಕುಮಾರರನ್ನ ಸ್ಮರಿಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ ನಟನಾ ಕೌಶಲವನ್ನು ಮೀರಿ ಸರಳತೆ, ಸಜ್ಜನಿಕೆ, ಸಾಮಾಜಿಕ ಕಳಕಳಿಯಿಂದಾಗಿ ನಾಡಿನ ಮನೆಮಗನಾದವರು. ಸದಾ ನಗುತ್ತಾ, ಸುತ್ತಲಿನವರನ್ನೂ ನಗಿಸುತ್ತಾ, ಪರರ ಕಷ್ಟಕ್ಕೆ ಮಿಡಿಯುತ್ತಿದ್ದ ಅಪರೂಪದ ಜೀವ ಅಪ್ಪು ನಮ್ಮನ್ನೆಲ್ಲ ಅಗಲಿ ವರ್ಷಗಳು ಕಳೆದರೂ ಅವರ ಬದುಕಿನ ಆದರ್ಶದ ಹಾದಿ ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಪ್ಪುವಿಗೆ ಗೌರವ ಸಲ್ಲಿಸಿದ್ದಾರೆ.





