ಬೆಂಗಳೂರು : ಡಿಕೆ ಶಿವಕುಮಾರ್ ನೇತೃತ್ವದ ನೂತನ ಸಚಿವರಿಗೆ ಇದೀಗ ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತವಾಗಿ ಖಾತೆಗಳ ಹಂಚಿಕೆ ಮಾಡಲಾಗಿದೆ. ಹಲವು ದಿನಗಳ ಕಸರತ್ತುಗಳ ಬಳಿಕ ಮಂತ್ರಿ ಮಂಡಲ ವಿಸ್ತರಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಖಾತೆಗಳ ಕ್ಯಾತೆಯನ್ನು ಬಗೆಹರಿಸಿದೆ. ಇಂದು ಬೆಳಿಗ್ಗೆಯೇ ಖಾತೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದರು.

ಆದರೆ ರಾಜ್ಯಪಾಲರು ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುವ ಮೂಲಕ ಅಂತಿಮ ಮುದ್ರೆಯನ್ನು ಒತ್ತಿದ್ದಾರೆ. ಅಧಿವೇಶನಕ್ಕೂ ಮುನ್ನಾ ದಿನವೇ ಸಿಎಂ ಎಲ್ಲ ಸಚಿವರಿಗೆ ಖಾತೆಗಳ ಜವಾಬ್ದಾರಿ ನೀಡಿದ್ದಾರೆ.
ನೂತನ ಸಚಿವರು ಹಾಗೂ ಅವರಿಗೆ ಹಂಚಿಕೆಯಾದ ಇಲಾಖೆಗಳ ಪೂರ್ಣ ಪಟ್ಟಿ..
1. ಎನ್. ಚಲುವರಾಯಸ್ವಾಮಿ – ಜಲಸಂಪನ್ಮೂಲ ಇಲಾಖೆ
2. ಎಚ್.ಸಿ. ಬಾಲಕೃಷ್ಣ – ಪೌರಾಡಳಿತ ಇಲಾಖೆ
3. ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
4. ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ, ಮುಜರಾಯಿ ಇಲಾಖೆ
5. ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
6. ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
7. ಬಿ. ಝಡ್. ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
8. ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ, ಕೃಷಿ ಮಾರುಕಟ್ಟೆ
9. ಡಾ. ಅಜಯ್ ಸಿಂಗ್ – ಸಣ್ಣ ನೀರಾವರಿ ಇಲಾಖೆ
10. ಎಸ್. ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
11. ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
12. ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
13. ಆರ್. ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಇಲಾಖೆ
14. ಕೆ.ಎಂ. ಶಿವಲಿಂಗೇಗೌಡ – ಅಬಕಾರಿ ಇಲಾಖೆ
15. ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ ಇಲಾಖೆ
16. ಪಿ.ಎಂ. ನರೇಂದ್ರ ಸ್ವಾಮಿ – ಕೃಷಿ ಇಲಾಖೆ
17. ಬಿ. ನಾಗೇಂದ್ರ – ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
18. ಟಿ. ರಘುಮೂರ್ತಿ – ಪರಿಶಿಷ್ಟ ಪಂಗಡಗಳ (ST) ಕಲ್ಯಾಣ ಇಲಾಖೆ
19. ರುದ್ರಪ್ಪ ಲಮಾಣಿ – ಸಕ್ಕರೆ ಮತ್ತು ಜವಳಿ ಇಲಾಖೆ
20. ಯು.ಟಿ.ಖಾದರ್ – ಅಲ್ಪಸಂಖ್ಯಾತರ ಕಲ್ಯಾಣ, ಹಜ್ & ವಕ್ಫ್, ಆರೋಗ್ಯ & ಕುಟುಂಬ ಕಲ್ಯಾಣ






