ಬಿಜೆಪಿ-ಜೆಡಿಎಸ್ ಗೆ (BJP-JDS) ಕಾರ್ಯಕ್ರಮ ಕೂಡ ಇಲ್ಲ.ಅವರಿಗೆ ಪಕ್ಷ ಕೆಟ್ಟ ಪರಿಸ್ಥಿತಿ ಎದುರುಸಿತ್ತಿದೆ. ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾವ ಅಸಮಾಧಾನ ಕೂಡ ಇಲ್ಲ, ಒಗ್ಗಟ್ಟಿನಿಂದ ಪಾರ್ಲಿಮೆಂಟ್ ಚುನಾವಣೆ ಎದುರಿಸುತ್ತೇವೆ.
ಅವರೆಲ್ಲರೂ ಅನವಶ್ಯಕವಾಗಿ ಮಾತನಾಡ್ತಾರೆ ಅಷ್ಟೆ.
ಕಾರ್ಯಕರ್ತರು, ಎಂಎಲ್ ಎದು ರೇಷಿಯೋ ಪಕ್ಷ ಕಾರ್ಯಕರ್ತರಿಗೆ ಮೊದಲ ಆದ್ಯತೆ ಕೊಡಬೇಕು ಅಂತ.
ಎಂಎಲ್ ಎಗಳು ಮಂತ್ರಿಯಾಗದಿರುವವರು ಅವರಿಗೂ ಅವಕಾಶ ಕೊಡಬೇಕು ಅಂತ ಒತ್ತಾಯ ಇದೆ. ಆದರಿಂದ ಸ್ವಲ್ಪ ತಡವಾಗಿದೆ ಆದಷ್ಟು ಬೇಗ ಎಲ್ಲಾ ಸರಿಪಡಿಸ್ತೇವೆ ಚಲುವರಾಯಸ್ವಾಮಿ (Chaluvarayaswamy) ಹೇಳಿದರು
![](https://pratidhvani.com/wp-content/uploads/2024/01/cheluvaraya-swamy-87873753.jpg)
ಅಸ್ಸಾಂ ನಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚಂದ್ರಶೇಖರ್ ನಂತರ ಇಡೀ ರಾಷ್ಟ್ರವನ್ನ ಪ್ರಥಮವಾಗಿ ಸ್ವತಂತ್ರ ನಂತರ ಈ ವಯಸ್ಸಿನಲ್ಲಿ ಯಾರು ಪಾದಯಾತ್ರೆ ಮಾಡಿಲ್ಲ.ಭಾರತದ ಒಗ್ಗಟ್ಟಿಗೆ, ಜನರ ಬದುಕಿಗಾಗಿ ಪಾದಯಾತ್ರೆ ಮಾಡ್ತಿದ್ದಾರೆ.ಆಂದ್ರ ಮತ್ತು ಕರ್ನಾಟಕದಲ್ಲಿ ಫಲಿತಾಂಶ ಬದಲಾವಣೆ ಕಂಡು ಬಿಜೆಪಿಗೆ ಗಾಬರಿ ಯಾಗಿದೆ.ಅದನ್ನು ಪ್ರೋವಕ್ ಮಾಡ್ತಾರೆ ಅಷ್ಟೆ ಎಂದು ಹೇಳಿದರು.
![](https://pratidhvani.com/wp-content/uploads/2024/01/1686129435-7976-jpg.webp)
ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ
ನಮ್ಮಲ್ಲಿ ಅಂತಿಮಕ್ಕೆ ತಲುಪಿದ್ದೇವೆ. ಮತ್ತೊಂದು ಬಾರಿ ಶಾಸಕರು, ಮುಖಂಡರು ಚರ್ಚೆ ಮಾಡಿ ಕೆಪಿಸಿಸಿಗೆ ಕೊಡ್ತೇವೆ.ಅವರು ಅಂತಿಮ ಅಭ್ಯರ್ಥಿ ಆಯ್ಕೆ ಮಾಡ್ತಾರೆ ಎಂದರು. ಅಲ್ಲದೆ ಪ್ರಿಯಾಂಕಾ ಖರ್ಗೆ ಹೇಳಿಕೆ ವಿಚಾರ, ಅದು ಅವರ ವೈಯಕ್ತಿಕ, ನಾವು ರಾಮನ ಭಕ್ತರೇ.ಸಿದ್ದರಾಮಯ್ಯ ಅವರೇ ಜೈ ಶ್ರೀ ರಾಮ್ ಅಂತ ಹೇಳಿಲ್ವಾ. ರಾಮ ಮಂದಿರ ಈಗಾಗಲೇ ಉದ್ಘಾಟನೆಯಾಗಿದೆ. ಬಿಜೆಪಿಯವರು ಚುನಾವಣೆಗಾಗಿ ಬಳಸಿಕೊಳ್ತಿದ್ದಾರೆ. ಚುನಾವಣೆ ಬಿಟ್ಟು ನಾವು ವೈಯಕ್ತಿಕವಾಗಿ ದೇವರ ಪೂಜೆ ಮಾಡ್ತೇವೆ ಎಂದು ಹೇಳಿದರು