ಪೊಲೀಸ್ ಸುಪರ್ದಿಯಲ್ಲಿದ್ದ ವಿಚಾರಣಾಧೀನ ಖೈದಿಯೋರ್ವ ಚೆನೈನ G-5ಸೆಕ್ರೆಟರಿಯೇಟ್ ಪೊಲೀಸ್ ಠಾಣೆಯಲ್ಲಿ ಸಾವನಪ್ಪಿದ್ದು ಪೊಲೀಸರು ನೀಡಿರುವ ಚಿತ್ರಹಿಂಸೆ ಅದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಗರದ ಮರೀನಾ ಬೀಚ್ನಲ್ಲಿ ಕುದುರೆ ಸವಾರಿ ಮಾಡಿಸುತ್ತಿದ್ದ ವಿಘ್ನೇಶ್ನನ್ನು ಪೊಲೀಸರು ಏಪ್ರಿಲ್ 18ರಂದು ತಿರುವಲ್ಲಿಕೇಣಿಯಲ್ಲಿ ವಾಸಿಸುತ್ತಿರುವ ಕಟ್ಟಡ ಕಾರ್ಮಿಕ ಸುರೇಶ್(28) ಜೊತೆಗೆ ವಶಕ್ಕೆ ಪಡೆದಿದ್ದರು.
ಈ ಕುರಿತು ಮಾತನಾಡಿರುವ ವಿಷ್ನೇಶ್(25) ಕುಟುಂಬ ಸದಸ್ಯರು ಬಂಧಿಸಿರುವ ಬಗ್ಗೆ ನಮ್ಮಗೆ ಮಾಹಿತಿ ನೀಡಿಲ್ಲ ಮಾಧ್ಯಮಗಳ ಮೂಲಕ ನಾವು ಅದನ್ನು ತಿಳಿದುಕೊಂಡೆವು. ಠಾಣೆ ಬಳಿ ಮಗನ ಶವ ನೋಡಲು ಹೋದಾಗ ಪೊಲೀಸರು ನೋಡಲು ಗಂಟೆಗಟ್ಟಲೆ ಸತ್ತಾಯಿಸಿದ್ದರು ಎಂದು ಆಋಓಪಿಸಿದ್ದಾರೆ.

ಮೃತ ವಿಘ್ನೇಶ್
ಈ ಕುರಿತು ಮಾತನಾಡಿರುವ ಸುರೇಶ್ ತಾಯಿ ಕರ್ಪಗಂ ನಮ್ಮಗೆ ಇದರ ಬಗ್ಗೆ ಏನು ತಿಳಿದಿರಲಿಲ್ಲ ಒಬ್ಬರು ಮೃತಪಟ್ಟಿದ್ದಾರೆ ಎಂದು ಟಿವಿಯಲ್ಲಿ ನೋಡಿ ಇಲ್ಲಿಗೆ ಬಂದಿದ್ದೀವಿ ನಾನು ತಿರುವಲ್ಲಿಕೇಣಿಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದೇನೆ ನನ್ನ ಅಂಗಡಿ ಬಳಿ ಇದ್ದ ಕೆಲವರು ತಮ್ಮ ಫೋನಿನಲ್ಲಿ ನನ್ನ ಮಗನನ್ನು ಬಂಧಿಸಿರುವುದಾಗಿ ತೋರಿಸಿದರು ನನ್ನ ಹಿರಿ ಮಗ ಸುರೇಶ್ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸುರೇಶ್ ತಾಯಿ ಹೇಳಿದ್ದಾರೆ.
ಮೃತ ವಿಘ್ಞೇಶ್ ಕುಟುಂಬ ಸದಸ್ಯರನ್ನು ಠಾಣೆಯೊಳಗೆ ಕೂರಿಸಿದ್ದರು ಮತ್ತು ಮಾಧ್ಯಮದವರ ಬಳಿ ಮಾತನಾಡಲು ಸಹ ಬಿಡಲಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿರುವ ವಿಘ್ಞೇಶ್ ಸಹೋದರ ವಿನೋದ್ ನನ್ನ ತಮ್ಮನ ದೇಹ ಭಾಗದ ಮುಖ ಹಾಗೂ ತೋಳಿನ ಮೇಲೆ ಗಾಯಗಳಾಗಿವೆ ಗಾಯದ ಗುರುತುಗಳು ಪೊಲೀಸರು ನೀಡಿರುವ ಚಿತ್ರ ಹಿಂಸೆಯನ್ನು ಹೇಳುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಗಳು ವಿಘ್ಞೇಶ್ ಹಾಗೂ ಸುರೇಶ್ ಇಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಈ ವೇಳೆ ಕೆಲ್ಲಿಸ್ನಲ್ಲಿ ತಪಾಸಣೆಯ ವೇಳೆ ಇಬ್ಬರ ಮೈಮೇಲೆ ಗಾಯಗಳಾಗಿರುವುದು ಕಂಡು ಬಂದ ಕಾರಣ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಯಿತ್ತು. ಇಬ್ಬರನ್ನು ವಿಚಾರಣೆ ನಡೆಸುವ ವೇಳೆ ಇಬ್ಬರ ಬಳಿ ಗಾಂಜಾ ಹಾಗೂ ಮಧ್ಯದ ಬಾಟಲಿಗಳು ಕಂಡು ಬಂದವು ಚಾಕುವಿನಿಂದ ನಮ್ಮ ಮೇಲೆ ದಾಳಿ ಮಾಡಲು ಯತ್ನಿಸಿದರು ಕೂಡಲೇ ಅವರನ್ನು ಬಂಧಿಸಿ ಠಾಣೆಗೆ ಕರೆತರಲಾಯಿತ್ತು
ಠಾಣೆಗೆ ಬಂದ ನಂತರ ವಿಘ್ಞೇಶಗಗ ಆರೋಗ್ಯದ್ಲಿ ಏರುಪೇರಾದ ಕಾರಣ ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತು. ಆದರೆ, ಮಾರ್ಗಮಧ್ಯೆ ಅವರನು ಸಾವನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಈ ಕುರಿತು ಮಾತನಾಡಿರುವ ಕುಟುಂಬ ಸದಸ್ಯರು ವಿಘ್ಞೇಶ್ಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ. ಪೊಲೀಸರು ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವುದಿಲ್ಲ ನೇರವಾಗಿ ಸ್ಮಶಾನಕ್ಕೆ ಕೊಂಡೊಯಲಾಗುವುದು ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ನ್ಯಾಯಾಂಗ ತನಿಖೆ ನಡೆಯುತ್ತಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.






