• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಇಂದು ಸಂಜೆ ಚಂದ್ರನ ಅಂಗಳಕ್ಕಿಳಿಯಲಿದೆ ಚಂದ್ರಯಾನ 3 | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಭಾರತದ ʼವಿಕ್ರಮʼ ಲ್ಯಾಂಡರ್

ಪ್ರತಿಧ್ವನಿ by ಪ್ರತಿಧ್ವನಿ
August 23, 2023
in ಇದೀಗ, ದೇಶ
0
ಚಂದ್ರಯಾನ 3
Share on WhatsAppShare on FacebookShare on Telegram

ಸಂಪೂರ್ಣ ಭಾರತ ದೇಶ ಹಾಗೂ ಪ್ರಪಂಚವೇ ಕುತೂಹಲದಿಂದ ಕಾಯುತ್ತಿರುವ ಕ್ಷಣ ಸಮೀಪಿಸಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಯೋಜನೆಯು ಬಹುನಿರೀಕ್ಷಿತ ಹಂತಕ್ಕೆ ತಲುಪಿದೆ. ಬುಧವಾರ (ಆಗಸ್ಟ್ 23) ವಿಕ್ರಮ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಇದು ಕೇವಲ ಬಾಹ್ಯಾಕಾಶ ಸಂಸ್ಥೆ ಮಾತ್ರವಲ್ಲ, ಬಹುಕೋಟಿ ಭಾರತೀಯರ ಕನಸು. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ವಿಕ್ರಮನು ಚಂದ್ರನ ಅಂಗಳದಲ್ಲಿ ಕಾಲಿರಿಸುವುದಕ್ಕೆ ಕಾತರಿಸಿದ್ದಾರೆ.

ADVERTISEMENT

ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ನೌಕೆಯ ವಿಕ್ರಂ ಲ್ಯಾಂಡರ್ ಇಳಿಸುವ ಇಸ್ರೋ ಯೋಜನೆಗೆ ಕ್ಷಣಗಣನೆ.

ಈ ಕಾರ್ಯ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಭೂಮಿಯಿಂದ ಲಗ್ಗೆ ಇಟ್ಟ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತದ ಪಾಲಾಗಲಿದೆ.

ಇಂದು ವಿಕ್ರಮ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ವಿಶ್ವದಲ್ಲೇ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ನಾಲ್ಕನೇ ದೇಶ ಭಾರತ ಎನ್ನಿಸಲಿದೆ.

ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಭರವಸೆ ಇದೆ ಎಂದು ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ವಿಕ್ರಮನು ಚಂದ್ರನ ಅಂಗಳದಲ್ಲಿ ಪಾದ ಊರಲಿದ್ದಾನೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಂತಿಮ ಹಂತದ ಪರಿಶೀಲನೆ ನಡೆಸುತ್ತಿದೆ. ಸೂರ್ಯನು ಚಂದ್ರನ ಮೇಲೆ ಉದಯಿಸಿದ ಕೆಲ ಹೊತ್ತಿನಲ್ಲಿ ವಿಕ್ರಮನು ಕೂಡ ಚಂದ್ರನ ಮೇಲೆ ಉದಯಿಸಲಿದ್ದಾನೆ.

ʼಚಂದ್ರಯಾನ-3 ಯೋಜನೆ ವೇಳಾಪಟ್ಟಿ ನಿಗದಿಯಾಗಿದೆ. ವ್ಯವಸ್ಥೆಗಳು ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ. ಮಿಷನ್ ಅಪರೇಷನ್ಸ್ ಕಾಂಪ್ಲೆಕ್ಸ್ ಶಕ್ತಿ ಮತ್ತು ಉತ್ಸಾಹದಿಂದ ಝೇಂಕರಿಸಿದೆʼ ಎಂದು ಇಸ್ರೊ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.

2019ರಲ್ಲಿ ಭಾರತದ ಚಂದ್ರಯಾನ-2 ವಿಫಲಗೊಂಡಿತ್ತು. 2019ರ ಸೆಪ್ಟೆಂಬರ್ 7 ರಂದುಇ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿತ್ತು. ಅಂದಿನಿಂದ ಅಂದರೆ ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನಿಗಳು ಚಂದ್ರಯಾನ-2 ವೈಪಲ್ಯಕ್ಕೆ ಕಾರಣಗಳನ್ನು ವಿಶ್ಲೇಷಿಸಿ ಕೊನೆಯ ಕ್ಷಣದಲ್ಲಿ ಎದುರಾಗುವ ದೋಷಗಳನ್ನು ಸರಿಪಡಿಸಲು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅನ್ನು ಬಲಪಡಿಸಿದ್ದಾರೆ. ಅಲ್ಲದೆ ಯೋಜನೆಯು ಯಶಸ್ವಿಯಾಗಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಚಂದ್ರಯಾನ-3 ರನ್ನು ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ.

ಬ್ಯಾಕಪ್ ಯೋಜನೆಗಳು

ʼಚಂದ್ರಯಾನ-3ರಲ್ಲಿ ತೊಂದರೆ ಉಂಟಾಗಬಹುದಾದ ಎಲ್ಲಾ ಸಾಧ್ಯತೆಗಳನ್ನು ನಾವು ಪರಿಗಣಿಸಿದ್ದೇವೆ, ಮಾತ್ರವಲ್ಲ ಅದಕ್ಕಾಗಿ ಬ್ಯಾಕಪ್ ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಇಲ್ಲಿಯವರೆಗೆ ಯೋಜನೆಯ ಎಲ್ಲಾ ಹಂತಗಳು ಯೋಜನೆಯ ಪ್ರಕಾರ ನಡೆದಿವೆ ಮತ್ತು ನಮ್ಮ ಲ್ಯಾಂಡರ್ ವಿಕ್ರಮ್ ನಾಳೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿದೆ ಎಂದು ವಿಶ್ವಾಸವಿದೆʼ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಹೇಳಿದ್ದಾರೆ.

ಎಲ್ಲಾ ಪರಿಶೀಲನೆಗಳ ನಂತರ ಇಂದು ಸಂಜೆ ಚಂದ್ರಯಾನ 3 ಯೋಜನೆ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಧ್ರುವ ಮೇಲೆ ಇಳಿಯಲಿದೆ. ಮೊದಲು ಲ್ಯಾಂಡರ್ ಸೇಫ್ ಲ್ಯಾಂಡಿಂಗ್ಗಾಗಿ 500m* 500m ಜಾಗ ನಿಗದಿ ಮಾಡಲಾಗಿತ್ತು. ಈಗ ಲ್ಯಾಂಡಿಂಗ್ ಜಾಗದ ವಿಸ್ತಾರವನ್ನು 4km*2.5km ಗೆ ಹೆಚ್ಚಿಸಲಾಗಿದೆ.

ಸಂಜೆ 5.45ರ ಸುಮಾರಿಗೆ ಥ್ರಸ್ಟರ್ಗಳು ಬಾಹ್ಯಾಕಾಶ ನೌಕೆಯ ನಿಯಂತ್ರಿತ ಅವರೋಹಣವನ್ನು ಪ್ರಾರಂಭಿಸಲಿವೆ. ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಗೆ ಹತ್ತಿರವಾದಂತೆ ಅದರ ವೇಗವು ಕ್ರಮೇಣ ಕಡಿಮೆಯಾಗುತ್ತದೆ. ಚಂದ್ರಯಾನ 2 ಗೆ ಹೋಲಿಸಿದರೆ ಅದರ ಕಾಲುಗಳನ್ನು ಬಲಶಾಲಿಯಾಗಿ ವಿನ್ಯಾಸಗೊಳಿಸಲಾಗಿದೆ. ಸಂಜೆ 6.04ಕ್ಕೆ ಸರಿಯಾಗಿ ಇದು ಚಂದ್ರನ ಮೇಲೆ ಲ್ಯಾಂಡಿಂಗ್ ಆಗಲಿದೆ.

ರೋವರ್ ಅನ್ನು ಚಂದ್ರನ ಮೇಲೆ ಲ್ಯಾಂಡ್ ಆಗಿ ಅದು ಚಂದ್ರನ ಮೇಲ್ಷ್ಮೈ ಚಿತ್ರಗಳನ್ನು ಕ್ಲಿಕ್ಕಿಸುತ್ತದೆ. ಲ್ಯಾಂಡರ್ ಮತ್ತು ರೋವರ್ ನಡುವೆ ಸಂವಹನವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇವು ಪರಸ್ಪರ ಚಿತ್ರಗಳನ್ನು ತೆಗೆದುಕೊಳ್ಳುತ್ತವೆ.

ವಿಕ್ರಮ್ ಹಾಗೂ ರೋಮರ್ ಯಶಸ್ವಿ ಲ್ಯಾಂಡಿಂಗ್ಗಾಗಿ ಹಲವು ಬ್ಯಾಕ್ಅಪ್ ಅನ್ನು ಇಸ್ರೋ ಸಿದ್ಧ ಪಡಿಸಿಕೊಂಡು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬ್ಯಾಕ್ಅಪ್ ಯೋಜನೆ ವಿವರಗಳನ್ನು ಬಹಿರಂಗ ಪಡಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ ವರದಿ ಮಾಡಿದೆ.

ಈ ನಡುವೆ, ಈಗಲೂ ಚಂದ್ರನ ಕಕ್ಷೆಯಲ್ಲಿ ಸುತ್ತುತಿರುವ ಇಸ್ರೋದ ಚಂದ್ರಯಾನ 2 ಆರ್ಬಿಟರ್ ಜೊತೆ, ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸಿದೆ.

ಈ ಕುರಿತು ಇಸ್ರೋ ಟ್ವಿಟ್ ಮಾಡಿ, ಚಂದ್ರಯಾನ 3 ಲ್ಯಾಂಡರ್ ಅನ್ನು ಬಾರೋ ಗೆಳೆಯ ಎಂದು ಚಂದ್ರಯಾನ 2 ಆರ್ಬಿಟರ್ ಸ್ವಾಗತಿಸಿದೆ ಎಂದು ಹೇಳಿದೆ.

ಈಗಾಗಲೇ ಚಂದ್ರನ ಮತ್ತೊಂದು ಬದಿಯ ಫೋಟೋ ತೆಗೆದು ರವಾನಿಸಿರುವ ವಿಕ್ರಂ ಲ್ಯಾಂಡರ್.

ಇಂದು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣಗಳನ್ನು ಇಸ್ರೋ ನೇರಪ್ರಸಾರ ಮಾಡಲಿದೆ.

Tags: Chandrayaan 3ISROVikram Landerಚಂದ್ರಯಾನ 3ವಿಕ್ರಮ್‌ ಲ್ಯಾಂಡರ್‌ಿಸ್ರೊ
Previous Post

ಯಶವಂತಪುರ ಉಪಚುನಾವಣೆ ಫಿಕ್ಸ್​.. ತಯಾರಿ ಶುರು ಮಾಡಿದ ಕಾಂಗ್ರೆಸ್​-ಜೆಡಿಎಸ್​..!

Next Post

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಕಾಂಬೋಡಿಯಾ ಮಹಿಳಾ ಉದ್ಯಮಿಗಳ ನಿಯೋಗ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಕಾಂಬೋಡಿಯಾ ಮಹಿಳಾ ಉದ್ಯಮಿಗಳ ನಿಯೋಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಕಾಂಬೋಡಿಯಾ ಮಹಿಳಾ ಉದ್ಯಮಿಗಳ ನಿಯೋಗ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada