• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಕೇಂದ್ರ ಸರ್ಕಾರ ಅಥವಾ ಒಕ್ಕೂಟ ಸರ್ಕಾರ?; ಸಂವಿಧಾನದ ಪ್ರಕಾರ ಯಾವುದು ಸರಿ?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 18, 2021
in ಅಭಿಮತ
0
ಕೇಂದ್ರ ಸರ್ಕಾರ ಅಥವಾ ಒಕ್ಕೂಟ ಸರ್ಕಾರ?; ಸಂವಿಧಾನದ ಪ್ರಕಾರ ಯಾವುದು ಸರಿ?
Share on WhatsAppShare on FacebookShare on Telegram

ರಾಜ್ಯಗಳ ಮತದಾರರ ಮೂಲಕ ಆಯ್ಕೆಯಾಗಿ ಸಂಸದರು ನವದೆಹಲಿಯಲ್ಲಿ ರಚಿಸುವ ಸರ್ಕಾರವನ್ನು ಏನೆಂದು ಕರೆಯುವುದು?

ADVERTISEMENT

ಸೆಂಟ್ರಲ್‌ ಗವರ್ನ್‌ಮೆಂಟ್‌ (ಕೇಂದ್ರ ಸರ್ಕಾರ) ಎನ್ನಬೇಕೋ ಅಥವಾ ಯುನಿಯನ್‌ ಗವರ್ನ್‌ಮೆಂಟ್‌ (ಒಕ್ಕೂಟ ಸರ್ಕಾರ) ಎನ್ನಬೇಕೋ?

ಇಂಗ್ಲಿಷ್‌ ಮುದ್ರಣ ಮಾಧ್ಯಮಗಳು ಹೆಚ್ಚಾಗಿ ಯುನಿಯನ್‌ ಗವರ್ನ್‌ಮೆಂಟ್‌ (ಒಕ್ಕೂಟ ಸರ್ಕಾರ) ಪದ ಬಳಸಿದರೆ, ಪ್ರಾದೇಶಿಕ ಮಾಧ್ಯಮಗಳು (ಮುದ್ರಣ ಮತ್ತು ಟಿವಿ) ಕೇಂದ್ರ ಸರ್ಕಾರ ಪದವನ್ನು ಬಳಸುತ್ತವೆ.

ಪ್ರಾದೇಶಿಕ ಹಿತಾಸಕ್ತಿ ಕಾಪಾಡುವ ಒಕ್ಕೂಟ ಸರ್ಕಾರ ಪದವನ್ನು ಪ್ರಾದೇಶಿಕ ಮಾಧ್ಯಮಗಳೇ ಹೆಚ್ಚಾಗಿ ಬಳಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಪದವೇ ಹೆಚ್ಚು ಜನಪ್ರಿಯವಾಗಿದ್ದು ಅದೇ ಹೆಚ್ಚು ಬಳಕೆಯಲ್ಲಿದೆ. ಹೀಗಾಗಿ ಪ್ರಾದೇಶಿಕ ಮಾಧ್ಯಮಗಳು ಒಮ್ಮೇಲೆ ಕೇಂದ್ರ ಸರ್ಕಾರದ ಬದಲು ಒಕ್ಕೂಟ ಸರ್ಕಾರ ಎಂದು ಬಳಸತೊಡಗಿದರೆ ಬಹುಪಾಲು ಜನರಿಗೆ ಗೊಂದಲವೂ ಆಗಬಹುದು. ಕೆಲವರ ಪ್ರಕಾರ ಒಕ್ಕೂಟ ಸರ್ಕಾರ ಪದದ ಬಳಕೆ ಈಗಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೆರವು ಆಗಬಹುದು. ಕೇಂದ್ರ ಸರ್ಕಾರ ಮೇಲಿಂದ ಮೇಲೆ ಎಸಗುತ್ತಿರುವ ತಪ್ಪುಗಳನ್ನು ತಿಳಿಸುವಾಗ ಒಕ್ಕೂಟ ಸರ್ಕಾರ ಎಂದು ಬಳಸಿದರೆ, ಜನಸಾಮಾನ್ಯರಲ್ಲಿ  ಇದು ಮೋದಿ ಸರ್ಕಾರವಲ್ಲ ಬಿಡಿ ಎಂಬ ಭಾವವೂ ಬಂದು ಅದು ಸರ್ಕಾರಕ್ಕೆ ಅನುಕೂಲಕರ ಆಗಬಹುದು.

ಚರ್ಚೆ ಹುಟ್ಟು ಹಾಕಿದ ಡಿಎಂಕೆ ಸರ್ಕಾರ

ಸೆಂಟ್ರಲ್‌ (ಕೇಂದ್ರ) ಬಳಸುವುದು  ಸರಿಯೋ ಅಥವಾ ಯುನಿಯನ್‌ ಬಳಸುವುದು ಸರಿಯೋ ಎಂಬ ಚರ್ಚೆ ಹಿಂದಿನಿಂದಲೂ ಇದೆ. ಆದರೆ ಅದು ಈಗ ಮತ್ತೆ ಮುನ್ನೆಲೆಗೆ ಬಂದಿದೆ.

 ತಮಿಳುನಾಡಿನಲ್ಲಿ  ಮೇನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರವು, ಕೇಂದ್ರ ಸರ್ಕಾರ ಎಂಬ ಪದ ಬಳಕೆಯೇ ಪ್ರಾದೇಶಿಕ ಅಸ್ಮಿತೆಯನ್ನು ಅವಮಾನಿಸಿದಂತೆ. ರಾಜ್ಯಗಳೂ ಸೇರಿ ಆ ಸರ್ಕಾರ ರಚಿತವಾದ ಕಾರಣ ಅದನ್ನು ಯುನಿಯನ್‌ ಗವರ್ನ್‌ಮೆಂಟ್‌ ಅಂದರೆ ಒಕ್ಕೂಟ ಸರ್ಕಾರ ಎಂದು ಕರೆಯುವುದೇ ಸೂಕ್ತ ಎಂದು ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿದೆ.

ಆಗಿನಿಂದ ತಮಿಳುನಾಡು ಸರ್ಕಾರ ಒಕ್ಕೂಟ ಸರ್ಕಾರ  (ತಮಿಳಿನಲ್ಲಿ ʼಒಂಡ್ರಿಯಾ ಅರಸುʼ) ಎಂಬ ಪದವನ್ನೇ ಬಳಸುತ್ತಿದೆ. ಮೋದಿ ನೇತೃತ್ವದ ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡುವಾಗ ಯುನಿಯನ್‌ ಗವರ್ನ್‌ಮೆಂಟ್‌ ಎಂದೇ ಸಂಭೋಧಿಸುತ್ತಿದೆ.

ತಜ್ಞರು ಹೇಳುವುದೇನು?

ರಾಜಕೀಯ ಚಿಂತಕ ಮತ್ತು ಸಂವಿಧಾನ ತಜ್ಞ ಪ್ರೊ.. ಮುಜಾಫರ್‌ ಅಸ್ಸಾದಿ ʼಪ್ರತಿಧ್ವನಿʼಗೆ ಪ್ರತಿಕ್ರಿಯಿಸುತ್ತ, ʼ ಯುನಿಯನ್‌  ಗವರ್ನ್‌ಮೆಂಟ್‌ʼ ಅಥವಾ ʼಒಕ್ಕೂಟ ಸರ್ಕಾರʼ ಪದವೇ ಸರಿಯಾದುದು. ಸಂವಿಧಾನದಲ್ಲಿ ಎಲ್ಲೂ ಕೇಂದ್ರ ಸರ್ಕಾರ ಅಂದರೆ ಸೆಂಟ್ರಲ್‌ ಗವರ್ನ್‌ಮೆಂಟ್‌ ಎಂಬ ಪದದ ಪ್ರಸ್ತಾಪವೇ ಇಲ್ಲ. ಸೆಂಟ್ರಲ್‌ ಗವರ್ನ್‌ಮೆಂಟ್‌ ಎಂಬುದು ಬ್ರಿಟಿಷ್‌ ವಸಾಹತುಶಾಹಿಯು ಬಳಸಿದ ಪದ. ನಮ್ಮ ಸಂವಿಧಾನದ ಪೀಠಿಕೆಯಲ್ಲೇ, ʼಭಾರತ ಅಂದರೆ ʼಯುನಿಯನ್‌ ಆಫ್‌ ಸ್ಟೇಟ್ಸ್‌ʼ  ( ಭಾರತವು ರಾಜ್ಯಗಳ ಒಕ್ಕೂಟ) ಎಂದೇ ವಿವರಿಸಲಾಗಿದೆʼ ಎಂದರು.

ʼಕೇಂದ್ರ ಸರ್ಕಾರ ಎಂಬ ಪದ ಬಳಕೆಯು ರಾಜ್ಯಗಳು ಎರಡನೇ ದರ್ಜೆ ಎಂಬ ಭಾವನೆಗೆ ಕಾರಣವಾಗುತ್ತದೆ. ಇಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಮಾನವಾದ ಪ್ರಾತಿನಿಧ್ಯ ಇರುವುದರಿಂದ ಯುನಿಯನ್‌ ಗವರ್ನ್‌ಮೆಂಟ್‌ ಅಥವಾ ಒಕ್ಕೂಟ ಸರ್ಕಾರ ಎಂದು ಕರೆಯುವುದೇ ಸರಿಯಾದ ಕ್ರಮʼ ಎಂದು ಪ್ರೊ.ಅಸ್ಸಾದಿ ವಿವರಿಸಿದರು.

ʼಬಳಕೆಯಲ್ಲಿ ಇಲ್ಲದ ʼಒಕ್ಕೂಟ ಸರ್ಕಾರʼ ಪದ ಬಳಕೆಯಿಂದ ಜನರಲ್ಲಿ ಗೊಂದಲ ಮೂಡಬಹುದೇ?ʼ ಎಂದು ʼಪ್ರತಿಧ್ವನಿʼ ಪ್ರಶ್ನಿಸಿದಾಗ, ʼಕೇಂದ್ರ ಸರ್ಕಾರ ಪದ ಜನಪ್ರಿಯ ಆಗಿರುವುದರಿಂದ ಅದು ಸಹಜ. ಹಾಗಂತ ನಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಕೈ ಬಿಡಲಾಗದು. ಸ್ವಲ್ಪ ವರ್ಷಗಳ ಕಾಲ ಒಕ್ಕೂಟ ಸರ್ಕಾರ ಪದ ಬಳಸುವಾಗ ಆವರಣದಲ್ಲಿ ಕೇಂದ್ರ ಸರ್ಕಾರ ಪದ ಬಳಸಬೇಕು. ನಂತರ ಜನಸಾಮಾನ್ಯರು ಒಕ್ಕೂಟ ಎಂಬ ಪದದ ಮಹತ್ವ ಅರಿಯುತ್ತಾರೆ. ಶಾಲಾ ಪಠ್ಯಗಳಲ್ಲೂ ಈ ಪದದ ಬಳಕೆ ಇರಬೇಕುʼ ಎಂದು ಅವರು ಅಭಿಪ್ರಾಯ ಪಟ್ಟರು.

ಅನುಚ್ಛೇದ 1 ಮತ್ತು 19

ಸಂವಿಧಾನದ ಅನುಚ್ಛೇದ 1 ಮತ್ತು ಅನುಚ್ಛೇದ 19 ಯುನಿಯನ್‌ ಪದ ಬಳಕೆಯನ್ನು ಹಲವಾರು ಬಾರಿ ಪ್ರಸ್ತಾಪಿಸಿವೆ. ಅವು ಯುನಿಯನ್‌ ಆಫ್‌ ಸ್ಟೇಟ್ಸ್‌ ಪದ ಬಳಕೆಗೆ ಮತ್ತು ಅದನ್ನು ಬಳಸುವವರಿಗೆ ರಕ್ಷಣೆ ನೀಡಿವೆ.

ಬ್ರಿಟಿಷರು ಮೊದಲಿಗೆ ಕೇಂದ್ರ  ಸರ್ಕಾರ ಪದವನ್ನು, ನಂತರದಲ್ಲಿ  ಫೆಡರಲ್‌ ಸರ್ಕಾರ ಎಂಬ ಪದವನ್ನು ಬಳಸಿತು. 1946ರಲ್ಲಿ ರಚನೆಯಾದ ಸಮಿತಿಯೊಂದು ಸ್ವಾತಂತ್ರ್ಯದ ನಂತರ ಯುನಿಯನ್‌ ಆಫ್‌ ಸ್ಟೇಟ್ಸ್‌ ಪದ ಬಳಸಲು ನಿರ್ಧರಿಸಿತು. ನಮ್ಮ ಸಂವಿಧಾನ ಮಂಡಳಿಯು ಕೂಡ ಇದೇ ಪದವನ್ನು ಅನುಮೋದಿಸಿದೆ. ಹೀಗಾಗಿ ಸಂವಿಧಾನದಲ್ಲಿ ಎಲ್ಲೂ ಸೆಂಟ್ರಲ್‌  ಗವರ್ನ್‌ಮೆಂಟ್‌ಎಂಬ ಪದವೇ ಇಲ್ಲ.

ಒಟ್ಟಿನಲ್ಲಿ ಒಕ್ಕೂಟ ಸರ್ಕಾರ ಎಂಬ ಪದವನ್ನು ಪ್ರಾದೇಶಿಕ ಪದ ಬಳಕೆಯಲ್ಲಿ ಜನಪ್ರಿಯಗೊಳಿಸುವುಸದು ರಾಜ್ಯ ಸರ್ಕಾರಗಳ ಕೆಲಸವಾಗಬೇಕು ಅಲ್ಲವೇ?

Tags: BJPCentral GovernmentCongress PartyDMKunion governmentಬಿಜೆಪಿ
Previous Post

2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ 400% ಹೆಚ್ಚಳ: NCRB ಡೇಟಾ

Next Post

ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿರುವ ಜೈ ಭೀಮ್

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿರುವ ಜೈ ಭೀಮ್

ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿರುವ ಜೈ ಭೀಮ್

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada