
ಗುರುವಾರ ವಿಶೇಷ ಸಚಿವ ಸಂಫೂಟದಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚೆ ಆಗಿದ್ದು, ಒಮ್ಮತದ ನಿರ್ಧಾರಕ್ಕೆ ಬರುವಲ್ಲ ರಾಜ್ಯ ಸಚಿವ ಸಂಪುಟ ವಿಫಲವಾಗಿದೆ. ಈ ನಡುವೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ನಿವಾಸಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಸಭೆ ಬಳಿಕ ಸಚಿವ ಮುನಿಯಪ್ಪ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ನಮ್ಮ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ ಕೊಟ್ಟಿದ್ದಾರೆ. ಏಪ್ರಿಲ್ 28ಕ್ಕೆ ಸಿಎಂ ಕಾರ್ಯಕ್ರಮ ಇದೆ. ಹೀಗಾಗಿ ನಮ್ಮ ಮನೆಗೆ ಉಪಹಾರಕ್ಕೆ ಕರೆದಿದ್ದೆ, ನಮಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ಅವಾಗವಾಗ ನಾವು ಸೇರ್ತಾ ಇರ್ತೇವೆ ಎಂದಿದ್ದಾರೆ.

ನಾವು ಅವರ ಮನೆಗೆ ಹೋಗ್ತಾ ಇರ್ತೇವೆ. ಜಾತಿಗಣತಿ ಇನ್ನೂ ತೀರ್ಮಾನ ಆಗಿಲ್ಲ. ಜಾತಿ ಜನಗಣತಿ ಯಾರಿಗೂ ತೊಂದರೆಯಾಗಲ್ಲ. ಲಿಂಗಾಯತ, ಒಕ್ಕಲಿಗ ಯಾರಿಗೂ ತೊಂದರೆಯಾಗಲ್ಲ. ಎಲ್ಲಾ ಸೇರಿ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲರೂ ಒಪ್ಪುವ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಮಾತನಾಡಿ, ನಮ್ಮ ಮನೆಗೆ ಅವರು ಬಂದಿದ್ರು, ಅವರ ಮನೆಗೆ ನಾವು ಬಂದಿದ್ದೇವೆ. ಸಿಎಂ ಕಾರ್ಯಕ್ರಮ ಇದೆ, ಅದಕ್ಕೆ ಆಹ್ವಾನ ಕೊಟ್ಟಿದ್ದಾರೆ. ನೂರಕ್ಕೂ ಹೆಚ್ಚು ಕಿಲೋಮೀಟರ್ ರಸ್ತೆ ಕೊಟ್ಟಿದ್ದೇವೆ. ಜಾತಿ ಜನಗಣತಿ ಜಾರಿ ಇನ್ನೂ ಒಂದು ವರ್ಷವಾಗಬಹುದು. ಬಹಳ ಜಟಿಲ ಸಮಸ್ಯೆ ಇದು ಎಂದಿದ್ದಾರೆ. ಜಾತಿ ಜನಗಣತಿ ಬಹಳಷ್ಟು ಚರ್ಚೆಯಾಗಬೇಕಿದೆ ಎಂದಿದ್ದಾರೆ.

ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಂಡಿದೆ. ಹೀಗಾಗಿ ಇನ್ನೂ ಒಂದು ವರ್ಷವಾಗಬಹುದು. ಅಂಕಿ ಸಂಖ್ಯೆ ಜನರೆ ಬರೆಸಿದ್ದು ಅಲ್ವಾ..? ಸಹಿ ಮಾಡಿದವರೇ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕು, ಆಗ ಮಾತ್ರ. ಸಾದರ ಜನರನ್ನು ಕಡಿಮೆ ತೋರಿಸಲಾಗಿದೆ. 64 ಸಾವಿರ ಅಷ್ಟೆ ತೋರಿಸಿದ್ದಾರೆ. ಮೂರು ಜಿಲ್ಲೆಯಲ್ಲಿ ಸಾದರ ಜನರಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ. ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಶಿಫಾರಸು ಏನೋ ಅವರು ಮಾಡಿದ್ದಾರೆ ಅಷ್ಟೇ. ಈಗ ಅಂಕಿ ಅಂಶಗಳ ಸರಿ ಮಾಡಬೇಕು. ಅಂಕಿ ಅಂಶಗಳ ಸರಿ ಮಾಡಲು ಅವಕಾಶ ನೀಡಬೇಕು ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಸರಿಯಾಗಿ ನಾವು ಇಂಪ್ಲಿಮೆಂಟ್ ಮಾಡದಿದ್ರೆ ಕಷ್ಟವಾಗುತ್ತೆ. ನಾವು ಸರಿಯಾಗಿ ಇಂಪ್ಲಿಮೆಂಟ್ ಮಾಡಬೇಕು. ಯಾವುದೇ ಸಮಾಜಕ್ಕೆ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಬೇಕು ಎಂದಿದ್ದಾರೆ.

ಗುರುವಾರ ವಿಶೇಷ ಸಚಿವ ಸಂಫೂಟದಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚೆ ಆಗಿದ್ದು, ಒಮ್ಮತದ ನಿರ್ಧಾರಕ್ಕೆ ಬರುವಲ್ಲ ರಾಜ್ಯ ಸಚಿವ ಸಂಪುಟ ವಿಫಲವಾಗಿದೆ. ಈ ನಡುವೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ನಿವಾಸಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಸಭೆ ಬಳಿಕ ಸಚಿವ ಮುನಿಯಪ್ಪ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ನಮ್ಮ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ ಕೊಟ್ಟಿದ್ದಾರೆ. ಏಪ್ರಿಲ್ 28ಕ್ಕೆ ಸಿಎಂ ಕಾರ್ಯಕ್ರಮ ಇದೆ. ಹೀಗಾಗಿ ನಮ್ಮ ಮನೆಗೆ ಉಪಹಾರಕ್ಕೆ ಕರೆದಿದ್ದೆ, ನಮಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ಅವಾಗವಾಗ ನಾವು ಸೇರ್ತಾ ಇರ್ತೇವೆ ಎಂದಿದ್ದಾರೆ.

ನಾವು ಅವರ ಮನೆಗೆ ಹೋಗ್ತಾ ಇರ್ತೇವೆ. ಜಾತಿಗಣತಿ ಇನ್ನೂ ತೀರ್ಮಾನ ಆಗಿಲ್ಲ. ಜಾತಿ ಜನಗಣತಿ ಯಾರಿಗೂ ತೊಂದರೆಯಾಗಲ್ಲ. ಲಿಂಗಾಯತ, ಒಕ್ಕಲಿಗ ಯಾರಿಗೂ ತೊಂದರೆಯಾಗಲ್ಲ. ಎಲ್ಲಾ ಸೇರಿ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲರೂ ಒಪ್ಪುವ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಮಾತನಾಡಿ, ನಮ್ಮ ಮನೆಗೆ ಅವರು ಬಂದಿದ್ರು, ಅವರ ಮನೆಗೆ ನಾವು ಬಂದಿದ್ದೇವೆ. ಸಿಎಂ ಕಾರ್ಯಕ್ರಮ ಇದೆ, ಅದಕ್ಕೆ ಆಹ್ವಾನ ಕೊಟ್ಟಿದ್ದಾರೆ. ನೂರಕ್ಕೂ ಹೆಚ್ಚು ಕಿಲೋಮೀಟರ್ ರಸ್ತೆ ಕೊಟ್ಟಿದ್ದೇವೆ. ಜಾತಿ ಜನಗಣತಿ ಜಾರಿ ಇನ್ನೂ ಒಂದು ವರ್ಷವಾಗಬಹುದು. ಬಹಳ ಜಟಿಲ ಸಮಸ್ಯೆ ಇದು ಎಂದಿದ್ದಾರೆ. ಜಾತಿ ಜನಗಣತಿ ಬಹಳಷ್ಟು ಚರ್ಚೆಯಾಗಬೇಕಿದೆ ಎಂದಿದ್ದಾರೆ.

ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಂಡಿದೆ. ಹೀಗಾಗಿ ಇನ್ನೂ ಒಂದು ವರ್ಷವಾಗಬಹುದು. ಅಂಕಿ ಸಂಖ್ಯೆ ಜನರೆ ಬರೆಸಿದ್ದು ಅಲ್ವಾ..? ಸಹಿ ಮಾಡಿದವರೇ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕು, ಆಗ ಮಾತ್ರ. ಸಾದರ ಜನರನ್ನು ಕಡಿಮೆ ತೋರಿಸಲಾಗಿದೆ. 64 ಸಾವಿರ ಅಷ್ಟೆ ತೋರಿಸಿದ್ದಾರೆ. ಮೂರು ಜಿಲ್ಲೆಯಲ್ಲಿ ಸಾದರ ಜನರಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ. ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಶಿಫಾರಸು ಏನೋ ಅವರು ಮಾಡಿದ್ದಾರೆ ಅಷ್ಟೇ. ಈಗ ಅಂಕಿ ಅಂಶಗಳ ಸರಿ ಮಾಡಬೇಕು. ಅಂಕಿ ಅಂಶಗಳ ಸರಿ ಮಾಡಲು ಅವಕಾಶ ನೀಡಬೇಕು ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಸರಿಯಾಗಿ ನಾವು ಇಂಪ್ಲಿಮೆಂಟ್ ಮಾಡದಿದ್ರೆ ಕಷ್ಟವಾಗುತ್ತೆ. ನಾವು ಸರಿಯಾಗಿ ಇಂಪ್ಲಿಮೆಂಟ್ ಮಾಡಬೇಕು. ಯಾವುದೇ ಸಮಾಜಕ್ಕೆ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಬೇಕು ಎಂದಿದ್ದಾರೆ.