ಇತ್ತೀಚಿಗೆ ಗುಜರಾತ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ನೀವೇನು 100 ತಲೆ ರಾವಣನ ಎಂದು ಭಾಷಣ ಮಾಡುವ ವೇಳೆ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಖರ್ಗೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ನತ್ತು ಜನರ ದಾರಿ ತಪ್ಪಿಸುತ್ತಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಕೀಯ ಎಂಬುದು ವೈಯಕ್ತಿಕವಾಗಿ ನಡೆಯುವಂತದ್ದಲ್ಲ ಸಿದ್ದಾಂತದ ಆಧಾರದ ಮೇಲೆ ನಡೆಯುವಂತಹದ್ದು. ನಮಗೆ ಜನಪರ ಕೆಲಸ ಮಾಡುವಂತಹ ರಾಜಕೀಯ ಬೇಕು ಬಿಜೆಪಿ ಮಾಡುವಂತಹ ರಾಜಕೀಯ ಅಲ್ಲ ಎಂದಿದ್ದಾರೆ.
ಇದೇ ವೇಳೆ ಎಎಪಿ ವಿರುದ್ದ ಹರಿಹಾಯ್ದ ಖರ್ಗೆ ಗುಜರಾತಿನಲ್ಲಿ ಕಾಂಗ್ರೆಸ್ ಪರವಾಗಿರುವ ಮತಗಳನ್ನ ವಿಭಜಿಸಲು ಯಾರದ್ದೋ ಇಚ್ಚೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.