• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮದರ್ ಥೆರೆಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿ ಮೇಲೆ ಬಿಜೆಪಿ – ಆರ್‌ಎಸ್‌ಎಸ್‌ನ ದ್ವೇಷದ ಕಣ್ಣು!

ಫಾತಿಮಾ by ಫಾತಿಮಾ
December 30, 2021
in ದೇಶ, ರಾಜಕೀಯ
0
ಮದರ್ ಥೆರೆಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿ ಮೇಲೆ ಬಿಜೆಪಿ – ಆರ್‌ಎಸ್‌ಎಸ್‌ನ ದ್ವೇಷದ ಕಣ್ಣು!
Share on WhatsAppShare on FacebookShare on Telegram

ಸಂಘ ಪರಿವಾರ ಬಹಳ ಹಿಂದಿನಿಂದಲೂ ಮದರ್ ಥೆರೆಸಾ ಬಗ್ಗೆ ಒಂದು ಅಸಹನೆಯನ್ನು ಬೆಳೆಸಿಕೊಂಡೇ ಬಂದಿದೆ. ಹಿಂದುತ್ವ ಪರ ಲೇಖಕ ಎಸ್.ಎಲ್. ಭೈರಪ್ಪ ಆದಿಯಾಗಿ ಅನೇಕ ಆರ್ಎಸ್ಎಸ್ ಪಡಸಾಲೆಯ ಲೇಖಕರು ಅವರನ್ನು ಮತಾಂತರಿ ಎಂದು ಜರೆಯುತ್ತಲೇ ಬಂದಿದ್ದಾರೆ. ಆದರೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು ಅತಿರೇಕಕ್ಕೆ ಹೋಯಿತು. ‘ಘರ್ ವಾಪ್ಸಿ’ ಅಭಿಯಾನದ ಉತ್ತುಂಗದಲ್ಲಿ, ರಾಜಸ್ಥಾನದ ಭರತ್ಪುರದಲ್ಲಿ ಮಹಿಳಾ ಸದನವನ್ನು ಉದ್ಘಾಟಿಸಿ ಮಾತನಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ “ಅವರ ಸೇವೆಯು ದೊಡ್ಡದಾಗಿರಬಹುದು ಆದರೆ ಅವರ ಸಾಮಾಜಿಕ ಕಾರ್ಯದ ಹಿಂದೆ ಒಂದು ಉದ್ದೇಶವಿತ್ತು. ಅವರು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಬಯಸಿದ್ದರು” ಎಂದಿದ್ದರು.

ADVERTISEMENT

ಆನಂತರ ಉತ್ತರ ಪ್ರದೇಶದ ಗೋರಖ್ಪುರದಲ್ಲಿ, ಆಗಿನ ಸಂಸತ್ ಸದಸ್ಯ ಮತ್ತು ಪ್ರಸ್ತುತ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಥೆರೇಸಾ ಭಾರತವನ್ನು ಕ್ರಿಸ್ತೀಕರಣಗೊಳಿಸುವ ಪಿತೂರಿಯ ಭಾಗವಾಗಿದ್ದರು. ಜನರು ತಮ್ಮ ರೋಗಗಳಿಗೆ ವೈದ್ಯಕೀಯ ನೆರವು ಪಡೆಯಲು ಅಸಮರ್ಥರಾದಾಗ ಮಿಷನರಿಗಳು ಅವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಾರೆ. ಮತ್ತು ಆ ಅವಧಿಯಲ್ಲಿ ಅವರು ಬ್ರೈನ್ ವಾಶ್ ಮಾಡಿ ಕ್ರೈಸ್ತರನ್ನಾಗಿ ಪರಿವರ್ತಿಸುತ್ತಾರೆ” ಎಂದಿದ್ದರು.

ಕೋಮು ಧ್ರುವೀಕರಣದ ಈ ಅಜೆಂಡಾದ ಮುಂದುವರಿದ ಭಾಗವಾಗಿ ಡಿಸೆಂಬರ್ 25 ರಂದು ನರೇಂದ್ರ ಮೋದಿ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯನ್ನು ನವೀಕರಿಸುವ ಅವಕಾಶವನ್ನು ನಿರಾಕರಿಸಿದೆ. ಈ ಮೂಲಕ ಕ್ರಿಸ್ಮಸ್ ಸಂಭ್ರಮದಲ್ಲಿದ್ದವರಿಗೆ ಮಾನವೀಯತೆಗೆ ಅಪಚಾರವೆಸಗುವಂತಹ ಕೊಡುಗೆ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವಾಲಯವು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010 ಮತ್ತು ವಿದೇಶಿ ಕೊಡುಗೆ ನಿಯಂತ್ರಣ ನಿಯಮಗಳು 2011 ರ ಅಡಿಯಲ್ಲಿ ಅರ್ಹತಾ ಷರತ್ತುಗಳನ್ನು ಮಿಷನರೀಸ್ ಪೂರೈಸಲು ವಿಫಲವಾದ ಕಾರಣಕ್ಕಾಗಿ ಸಂಸ್ಥೆಯ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “MoCಯ ನವೀಕರಣ ಅರ್ಜಿಯನ್ನು ಪರಿಗಣಿಸುವಾಗ, ಕೆಲವು ವ್ಯತಿರಿಕ್ತ ಮಾಹಿತಿಗಳನ್ನು ಗಮನಿಸಲಾಗಿದೆ” ಎಂದೂ ಸಚಿವಾಲಯ ಹೇಳಿದೆ.

ಥೆರಸಾ ಜಾತಿ ಧರ್ಮ, ರಾಷ್ಟ್ರೀಯತೆ, ಜನಾಂಗ ಅಥವಾ ಸ್ಥಳವನ್ನು ಲೆಕ್ಕಿಸದೆ ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಿದವರು. ಬಡವರು, ಹಸಿದವರು, ಬಾಯಾರಿದವರು, ಬೆತ್ತಲೆಗಳು, ನಿರಾಶ್ರಿತರು, ಅಜ್ಞಾನಿಗಳು, ಬಂಧಿತರು, ಅಂಗವಿಕಲರು, ಕುಷ್ಠರೋಗಿಗಳು, ಮದ್ಯವ್ಯಸನಿಗಳು, ಸಾಯುತ್ತಿರುವವರು ಮತ್ತು ಅನಾರೋಗ್ಯ ಪೀಡಿತರು, ಪರಿತ್ಯಕ್ತರು, ಬಹಿಷ್ಕೃತರು, ಮಾನವ ಸಮಾಜಕ್ಕೆ ಹೊರೆಯಾಗಿರುವ ಎಲ್ಲರೂ, ಜೀವನದಲ್ಲಿ ಎಲ್ಲಾ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಂಡಿದ್ದಾಗ ಅವರ ಬದುಕಿನಲ್ಲಿ ದೇವತೆಯಂತೆ ಅವತರಿಸಿದವರು ಥೆರೆಸಾ. ಕಲ್ಕತ್ತಾದ ಬೀದಿ ಬೀದಿಗಳಿಗೂ ಅವರ ಸೇವೆಯ ಕಥೆ ಗೊತ್ತು.

ಕಲ್ಕತ್ತಾ ಮಾತ್ರವಲ್ಲದೆ ಭಾರತದಾದ್ಯಂತ, MoC ಅನಾಥರು, ನಿರ್ಗತಿಕರು ಮತ್ತು ಏಡ್ಸ್ ರೋಗಿಗಳಿಗೆ 240 ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಈ ಮನೆಗಳನ್ನು ನಡೆಸುತ್ತಿರುವ ಸಿಸ್ಟರ್ಗಳ ಆಸ್ತಿಗಳೆಂದರೆ: ಮೂರು ಸೀರೆಗಳು, ಒಂದು ಕವಚ, ಒಂದು ಜೋಡಿ ಚಪ್ಪಲಿಗಳು, ಒಂದು ಶಿಲುಬೆ, ಜಪಮಾಲೆ, ಕೆಲವು ಚಾಕುಕತ್ತರಿಗಳು, ಬಟ್ಟೆ ಕರವಸ್ತ್ರ, ಕ್ಯಾನ್ವಾಸ್ ಚೀಲ ಮತ್ತು ಪ್ರಾರ್ಥನೆಯ ಪುಸ್ತಕ. ಈ ಸಿಸ್ಟರ್ಗಳು ಬಡವರಿಗೆ ಪೂರ್ಣ ಹೃದಯದಿಂದ ಉಚಿತ ಸೇವೆಯನ್ನು ನೀಡುವ ಪ್ರತಿಜ್ಞೆಗೆ ಬದ್ಧರಾಗಿರಬೇಕು.

ಮೋದಿ ಸರ್ಕಾರವು ನವೀಕರಿಸಲು ನಿರಾಕರಿಸಿರುಬ MoC ನ ನೋಂದಣಿಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ ಮತ್ತು ಅದರ ನಂತರ FCRA ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲಾಗುವುದಿಲ್ಲ. ಡಿಸೆಂಬರ್31ರ ನಂತರ MoCಯು ಹಣವನ್ನು ಬಳಸಿಕೊಳ್ಳುವುದನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಅದರ ಎಲ್ಲಾ ಸೇವೆಗಳನ್ನು ಮತ್ತು ಚಟುವಟಿಕೆಗಳನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗುತ್ತದೆ. ಸರ್ಕಾರವು ಗಮನಿಸಿದೆ ಎಂದು ಹೇಳಿಕೊಳ್ಳುವ ‘ವ್ಯತಿರಿಕ್ತ ಮಾಹಿತಿ’ ಏನೆಂಬುದರ ಬಗ್ಗೆ ಇದುವರೆಗೂ ಸರ್ಕಾರದ ಕಡೆಯಿಂದ ಯಾವ ಸ್ಪಷ್ಟತೆಯೂ ಬಂದಿಲ್ಲ.

ಆದರೆ ಅಸಹ್ಯದ ಬೆಳವಣಿಗೆಯೆಂಬಂತೆ ದೇಶಾದ್ಯಂತ ಕ್ರಿಸ್ಮಸ್ ಸಮಯದಲ್ಲೇ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. ಹರಿಯಾಣದ ಗುರುಗ್ರಾಮ ಮತ್ತು ಕರ್ನಾಟಕದ ಪಾಂಡವಪುರದಲ್ಲಿ ಕ್ರೈಸ್ತರು ನಡೆಸುವ ಎರಡು ಶಾಲೆಗಳಲ್ಲಿ ಹಿಂದುತ್ವದ ಉಗ್ರಗಾಮಿಗಳು ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಅದಾಗಿ ಒಂದೇ ದಿನದಲ್ಲಿ ಹರಿಯಾಣದ ಅಂಬಾಲಾದ ಹೋಲಿ ರಿಡೀಮರ್ ಚರ್ಚ್ನಲ್ಲಿದ್ದ ಯೇಸುಕ್ರಿಸ್ತನ ಪ್ರತಿಮೆಯನ್ನು ಹಿಂದುತ್ವದ ಗುಂಪುಗಳು ಧ್ವಂಸಗೊಳಿಸಿದೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಜಿ20 ಸಮ್ಮೇಳನದಲ್ಲಿ ಭಾಗವಹಿಸಲು ರೋಮ್ಗೆ ತೆರಳಿದ್ದಾಗ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದ್ದರು. ಪೋಪ್ ಅವರನ್ನು ಪ್ರಧಾನಿ ತಬ್ಬಿಕೊಂಡಿರುವ ಫೊಟೋ ಇಂಟರ್ನೆಟ್ನಾದ್ಯಂತ ಸಂಚಲನ ಸೃಷ್ಟಿಸಿತ್ತು. ಭಾರತದೊಳಗೆ ಕ್ರಿಶ್ಚಿಯನ್ನರ ಮೇಲಿನ ದಬ್ಬಾಳಿಕೆ, ಆಕ್ರಮಣಗಳು ಈ ಮೂಲಕವಾದರೂ ನಿಲ್ಲಬಹುದು ಎಂದು ಪ್ರಜ್ಞಾವಂತರು ಆಶಾಭಾವ ವ್ಯಕ್ತಪಡಿಸಿದ್ದರು. ಆದರೆ ಈಗ ಸೇವೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡಿರುವ ಮಿಷನರೀಸ್ ನೋಂದಣಿಯ ನವೀಕರಣವನ್ನೇ ನಿರಾಕರಿಸುವ ಮೂಲಕ ಭೇಟಿ, ಆಹ್ವಾನ ಎರಡೂ ಕೇವಲ ಅಂತರರಾಷ್ಟ್ರೀಯವಾಗಿ ಗಮನ ಸೆಳೆಯಲು ಮಾಡಿರುವ ಸ್ಟಂಟ್ ಎಂಬಂತೆ ಭಾಸವಾಗುತ್ತದೆ.

Tags: BJPCongress PartyCovid 19ಅಂಗವಿಕಲರುಅಜ್ಞಾನಿಗಳುಆರ್‌ಎಸ್‌ಎಸ್‌ಉತ್ತರ ಪ್ರದೇಶಕರೋನಾಕುಷ್ಠರೋಗಿಗಳುಕೋಮು ಧ್ರುವೀಕರಣಜನಾಂಗಥೆರಸಾ ಜಾತಿ ಧರ್ಮಥೆರೇಸಾ ಭಾರತನರೇಂದ್ರ ಮೋದಿನಿರಾಶ್ರಿತರುಬಡವರುಬಂಧಿತರುಬಾಯಾರಿದವರುಬಿಜೆಪಿಬೆತ್ತಲೆಗಳುಮದರ್ ಥೆರೆಸಾಮದ್ಯವ್ಯಸನಿಗಳುಮಿಷನರೀಸ್ ಆಫ್ ಚಾರಿಟಿಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಾಷ್ಟ್ರೀಯತೆವೈದ್ಯಕೀಯ ನೆರವುಹಸಿದವರು
Previous Post

ಮಕ್ಕಳ ಪಾಲಿಗೆ ಬೆಂಗಳೂರು ಸೇರಿ ಕರ್ನಾಟಕ ಸುರಕ್ಷಿತವಲ್ಲ : ಆತಂಕ ಮೂಡಿಸಿದ NCRB ವರದಿ

Next Post

ಚುನಾವಣೆ ಫಲಿತಾಂಶ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂಬುದು ಸ್ಪಷ್ಟವಾಗಿದೆ : ಸಿದ್ದರಾಮಯ್ಯ

Related Posts

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?
ರಾಜಕೀಯ

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

by ಪ್ರತಿಧ್ವನಿ
May 21, 2026
0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “Cockroach Janata Party” ಎಂಬ ಪದ ಭಾರೀ ವೈರಲ್ ಆಗುತ್ತಿದೆ. ಮೊದಲ ನೋಟಕ್ಕೆ ಇದು ಹಾಸ್ಯ, ಮೀಮ್ ಅಥವಾ ಟ್ರೋಲ್ ರಾಜಕೀಯದ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
Next Post
ಚುನಾವಣೆ ಫಲಿತಾಂಶ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂಬುದು ಸ್ಪಷ್ಟವಾಗಿದೆ : ಸಿದ್ದರಾಮಯ್ಯ

ಚುನಾವಣೆ ಫಲಿತಾಂಶ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂಬುದು ಸ್ಪಷ್ಟವಾಗಿದೆ : ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada