ರಾಜ್ಯ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ (Contract reservation) ಮುಸ್ಲಿಮರಿಗೆ 4% ಮೀಸಲಾತಿ (Muslim reservation) ಖಂಡಿಸಿ ಬಿಜೆಪಿ ಪ್ರತಿಭಟನೆ ಮತ್ತು ಕಾನೂನು ಹೋರಾಟಕ್ಕೆ ಮುಂದಾಗಿದ್ದು ಈಗ ಕೇಸರಿ ಪಡೆಯ ಈ ಹೋರಾಟಕ್ಕೆ ದಳಪತಿ ಸಾಥ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹೌದು ಈಗಾಗಲೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನ ವಿರೋಧಿಸಿ ಬಿಜೆಪಿ ಹೋರಾಟಕ್ಕೆ ದಳಪತಿಗಳು ಬೆಂಬಲ ಸೂಚಿಸಿದ್ದಾರೆ.ಈ ಬಿಜೆಪಿ ಹೋರಾಟಕ್ಕೆ ಬೆಂಬಲ ನೀಡೋದಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹಾಗೂ ನಿಖಿಲ್ ಘೋಷಣೆ ಮಾಡಿದ್ದಾರೆ.

ಇದೀಗ ದಳಪತಿಗಳ ಈ ನಿರ್ಧಾರದಿಂದ ಜೆಡಿಎಸ್ ನಾಯಕರಿಗೆ ಟೆನ್ಮನ್ ಶುರುವಾಗಿದೆ. ಈ ರೀತಿ ಬಿಜೆಪಿ ಹೋರಾಟಕ್ಕೆ ಸಾಥ್ ನೀಡೋದ್ರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ನಷ್ಟವಾಗುತ್ತೆ.ಹೀಗಾಗಿ ಮೀಸಲಾತಿ ವಿರೋಧಿಸಬೇಕಾ ಅಥವಾ ಬೇಡವಾ ಎಂದು ಜೆಡಿಎಸ್ ಶಾಸಕರು ಗೊಂದಲದಲ್ಲಿದ್ದಾರೆ.