ಮಂಡ್ಯ ಸಂಸದೆ ಸುಮಲತಾರವರ (sumalatha) ನಡೆ ಏನು ಎಂಬ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ . ಇಂದು ಮಂಡ್ಯದಲ್ಲಿ ಸಭೆ ನಡೆಸಿದ ಸಂಸದೆ ಸುಮಲತಾ ತಾವು ಬಿಜೆಪಿಗೆ ಬೆಂಬಲ ಘೋಷಿಸೋದಾಗಿ ಅಧಿಕೃತವಾಗಿ ಹೇಳಿದ್ದಾರೆ . ಆ ಮೂಕಲ ಸುಮಲತಾ ಮನವೊಲಿಸುವಲ್ಲಿ ಬಿಜೆಪಿ ಮತ್ತು ಜೆಡಿಎಸ್(BJP & JDS) ನಾಯಕರು ಯಶಸ್ವಿಯಾಗಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ (Kumarswamy) ಗೆಲುವು ಇನ್ನಷ್ಟು ಸುಲಭವಾಗಲಿದೆ.
ಮಂಡ್ಯದ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಎಂದು ಘೋಷಣೆಯಾದ ಬೆನ್ನಲ್ಲೇ ಸುಮಲತಾ ಅಂಬರೀಶ್ ಸೈಲೆಂಟ್ ಪಾಲಿಟಿಕ್ಸ್ ಶುರು ಮಾಡಿದ್ದರು. ದೆಹಲಿಗೆ (Delhi) ಹೋಗಿ ಬಂದ ನಂತರ ಸಂಪೂರ್ಣ ಮೌನವಾಗಿದ್ದ ಸುಮಲತಾರ ನಡೆ ನಿಗೂಢವಾಗಿತ್ತು .ಹಿತೈಷಿಗಳು ಹಾಗೂ ಅತ್ಯಾಪ್ತರಿಂದ ಅಭಿಪ್ರಾಯ ಸಂಗ್ರಹ ಮಾಡಲು ಸುಮಲಾತ ಸಭೆ ಕೂಡ ನಡೆಸಿದ್ದರು. ಏಪ್ರಿಲ್ ೩ ರಂದು ತಮ್ಮ ರಾಜಕೀಯದ ಮುಂದಿನ ನಡೆ ಬಗ್ಗೆ ಘೋಷಿಸೋದಾಗಿ ಹೇಳಿದ್ದರು.
ಸುಮಲತಾ ಸೈಲೆಂಟ್ ಪಾಲಿಟಿಕ್ಸ್ (silent politics) ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, (BY Vijayendra) ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ವಿಜಯೇಂದ್ರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಹಿತೈಷಿಗಳ ಜೊತೆ ಸಭೆ ನಡೆಸಿ, ಮಂಡ್ಯದಲ್ಲೇ ತಮ್ಮ ನಿರ್ಧಾರ ತಿಳಿಸೋದಾಗಿ ಹೇಳಿದ್ದರು.ಇತ್ತ ವಿಜಯೇಂದ್ರ ಮಾತ್ರ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದು, ಸುಮಲತಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದ್ದರು. ಅದರಂತೆಯೇ ಇದೀಗ ಸುಮಲತಾ ಬಿಜೆಪಿ ಸೇರ್ಪಡೆಯಾಗಿ ಕಣದಿಂದ ಹಿಂದೆ ಸರಿಯೋದಾಗಿ ಹೇಳಿದ್ದಾರೆ.