ನೂತನ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವನೆಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ದ ದಾಖಲಾಗಿರುವ FIR Sಶುದ್ದ ಸುಳ್ಳು ಹಾಗೂ ಸಂಪೂರ್ಣ ನಕಲಿ ಎಂದು ಆರೋಪಿಸಿದ್ದಾರೆ.
ಶುಕ್ರವಾರ ನಡೆದ ವಿಶೇಷ ವಿಧಾನಮಂಡಲ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತರರು ಮಾಡುವ ಒಳ್ಳೆಯ ಕೆಲಸವನ್ನ ನೋಡಿದ ಮೇಲೆ ಅವರಿಗೆ ಮುಜುಗರವಾಗುತ್ತದೆ ಮತ್ತು ಅಭದ್ರತೆಯ ಭಯ ಅವರನ್ನು ತುಂಬಾ ಕಾಡುತ್ತದೆ. ನಾನು ಈ ರೀತಿಯ ವ್ಯಕ್ತಿಯನ್ನು ಎಂದಿಗೂ ನೋಡಿಲ್ಲ ಎಂದಿದ್ದಾರೆ.
ಒಂದು ವೇಳೆ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಸ್ಥಾನದಲ್ಲಿದಿದ್ದರೆ ನಾನು ಬೇರೆ ಪಕ್ಷದಿಂದ ಸಚಿವನಾಗಿದ್ದರೆ ಅವರು ಈ ರೀತಿ ಮಾಡುತ್ತಿರಲಿಲ್ಲ ಪ್ರಧಾನಿ ಮೋದಿ ಮಾಡಿದ ಎಲ್ಲಾ ಕೆಲಸಗಳಿಗೆ ಅರವಿಂದ್ ಕೇಜ್ರಿವಾಲ್ ಬೆಂಬಲಿಸಿದ್ದಾರೆ ಆಧರೆ ಪ್ರಧಾನಿ ಸದಾ ಅವರನ್ನು ದ್ವೇಷಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ನನ್ನ ವಿರುದ್ದ ದಾಖಲಾಗಿರುವ FIR ಸಂಪೂರ್ಣ ಸುಳ್ಳು ನಾನು ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ ಎಂದಿದ್ದಾರೆ. ಬಿಜೆಪಿಯವರು ಒಳ್ಳೆ ಸರಣಿ ಹಂತಕರ ರೀತಿ ವರ್ತಿಸುತ್ತಿದ್ದಾರೆ ಅವರು ಸಂವಿಧಾನ ಬದ್ದವಾಗಿ ರಚನೆಯಾದ ಸರ್ಕಾರಗಳ ಕೊಲೆ ಮಾಡಲು ಅವರು ಮಾಡುತ್ತಿರುವ ಪ್ರಯತ್ನ ಅಷ್ಟಿಷ್ಟಲಲ್ಲ ಎಂದು ಕಿಡಿಕಾರಿದ್ದಾರೆ.
ನಾವು ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿ ಯಾವುದೇ ಲೋಪಗಳಿರಲಿಲ್ಲ. ಇದರಿಂದ ಜನರಿಗೆ ಯಾವುದೇ ಹೊರೆಯಾಗುತ್ತಿರಲಿಲ್ಲ ಹಾಗೂ ಸರ್ಕಾರದ ಆದಾಯವು ಹೆಚ್ಚುತಿತ್ತು. ಆದರೆ, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ ಎಂದು ಹರಿಹಾಯ್ದಿದ್ದಾರೆ.