• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶತಕೋಟಿ ಲಸಿಕೆ ನೀಡಿಕೆ; ಹಲವು ಸವಾಲುಗಳನ್ನ ಮೆಟ್ಟಿ ನಿಂತ ಭಾರತ ಎಂದ ಮೋದಿ

ನಚಿಕೇತು by ನಚಿಕೇತು
October 24, 2021
in ದೇಶ
0
NEP: ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಈಗ 11 ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಲಾಗುವುದು: ಪ್ರಧಾನಿ ಮೋದಿ
Share on WhatsAppShare on FacebookShare on Telegram


ಭಾರತ ಕೋವಿಡ್ ಲಸಿಕೆ ಅಭಿಯಾನದಲ್ಲಿ ನೂರು ಕೋಟಿ ಲಸಿಕೆ ನೀಡೋ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಿಳಿಸಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಸಾರ್ಥಕ ಭಾವದಿಂದಲೇ ದೇಶದ ನಿವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT


ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಶತಕೋಟಿ ಸಾಧನೆಗೆ ಸಾಕ್ಷಿಯಾಗಿದೆ. ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದ ಪ್ರತಿಯೊಬ್ಬ ಭಾರತೀಯನಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಈ ಸಾಧನೆ ಪ್ರತಿ ಭಾರತೀಯನ ಸಫಲತೆ ಮತ್ತು ಇತಿಹಾಸದ ಹೊಸ ಅಧ್ಯಾಯ ರಚನೆಯಾಗಿದೆ ಎಂದು ಬಣ್ಣಿಸಿದ್ದಾರೆ.
ನೂರು ಕೋಟಿ ಲಸಿಕೆ ಡೋಸ್‌ ಇದು ಕೇವಲ ಒಂದು ಆಕೃತಿಯಲ್ಲ. ಇದು ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ. ಹೊಸ ಭಾರತದ ಚಿತ್ರಣವಾಗಿದೆ ಎಂದಿದ್ದಾರೆ ಮೋದಿ.


ಭಾರತ ಹಲವು ಸವಾಲುಗಳನ್ನ ಮೆಟ್ಟಿ ನಿಂತು, ಅತಿ ಕಡಿಮೆ ಅವಧಿಯಲ್ಲೇ ಶತಕೋಟಿ ಲಸಿಕೆ ನೀಡಿದೆ. ಆದ್ರೆ, ಹಿಂದೊಂದು ದಿನ ಭಾರತದ ಲಸಿಕಾ ಅಭಿಯಾನದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ರು, ಅಂತವರಿಗೆಲ್ಲ ಈಗ ಉತ್ತರ ದೊರಕಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.


ನೂರು ವರ್ಷಗಳಲ್ಲಿಯೇ ದೊಡ್ಡ ಮಹಾಮಾರಿ ಎದುರಾಗಿತ್ತು. ಆಗ ಭಾರತದಲ್ಲಿ ಸವಾಲುಗಳು ಉದ್ಭವಿಸಿದ್ವು, ಭಾರತ ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳುತ್ತಾ? ಭಾರತಕ್ಕೆ ಬೇರೆ ದೇಶಗಳಿಂದ ಇಷ್ಟೊಂದು ಲಸಿಕೆಗಳನ್ನು ಖರೀದಿಸುವ ದುಡ್ಡು ಎಲ್ಲಿಂದ ಬರುತ್ತೆ? ಭಾರತಕ್ಕೆ ಲಸಿಕೆ ಯಾವಾಗ ಸಿಗುತ್ತೆ? ಭಾರತದ ಜನತೆಗೆ ಲಸಿಕೆ ಸಿಗುತ್ತೋ, ಸಿಗಲ್ವೊ? ಭಾರತಕ್ಕ ಇಷ್ಟೊಂದು ಜನರನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಇದೆಯಾ? ಮೊದಲೇ ಮಹಾಮರಿಗೆ ಕಂಗೆಟ್ಟಿದೆ ಎಂದು ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ವು, ಆದ್ರೆ, ಇದೀಗ ಶತಕೋಟಿ ಲಸಿಕೆ ನೀಡುವ ಮೂಲಕ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ತಿಳಿಸಿದರು ಮೋದಿ.


ವಿಶ್ವದಲ್ಲಿ ಭಾರತ 100 ಕೋಟಿ ಲಸಿಕೆ ನೀಡಿಕೆಯ ಕುರಿತು ಚರ್ಚೆ ಆಗುತ್ತಿದೆ. ಕೊರೊನಾ ಸಂದರ್ಭ ಲಸಿಕೆ ವಿಚಾರದಲ್ಲಿ ಭಾರತ ಬೇರೆ ದೇಶದ ಮೇಲೆ ಡಿಪೆಂಡ್ ಆಗುತ್ತೆ ಅಂತ ಭಾವಿಸಿದ್ರು. ಭಾರತದಲ್ಲಿ ಮಹಾಮಾರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಾ ಅಂತಿದ್ರು. ಹೀಗೆ ಅದೆಷ್ಟೋ ಪ್ರಶ್ನೆಗಳನ್ನ ಹಲವರು ಮಾಡಿರೋದು ಇದೆ. ಈಗ ಅದಕ್ಕೆಲ್ಲಾ ಉತ್ತರವಾಗಿ 100 ಕೋಟಿ ಲಸಿಕೆ ನೀಡಿದ್ದೇವೆ. ಅದೂ ಸಹ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನ ನೀಡಿದ್ದೇವೆ. ಇಂದು ಭಾರತ ಕೊರೊನಾದಿಂದ ಹೆಚ್ಚು ಸುರಕ್ಷಿತ ಅಂತ ಜಗತ್ತು ಒಪ್ಪಿದೆ. ಭಾರತದ ಈ ತಾಕತ್ತನ್ನ ಇವತ್ತು ಇಡೀ ಜಗತ್ತು ನೋಡುತ್ತಿದೆ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್‌ಗೆ ಭಾರತ ಇವತ್ತು ಅತೀ ದೊಡ್ಡ ಉದಾಹರಣೆಯಾಗಿದೆ ಎಂದರು.


ಇನ್ನು ಕೊರೊನಾ ಬಂದಾಗಿನಿಂದ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಸ್ಕ್ ಧರಿಸಿದ್ದ ಫೋಟೋವೊಂದನ್ನ ಫ್ರೊಫೈಲ್ ಫೋಟೋವಾಗಿ ಹಾಕಿಕೊಂಡಿದ್ರು. ಆದ್ರೆ ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಪ್ರೊಫೈಲ್ ಫೋಟೋವನ್ನ ಬದಲಿಸಿದ್ದಾರೆ. 100 ಕೋಟಿ ಡೋಸ್ ಲಸಿಕೆ  ನೀಡಿದ್ದಕ್ಕೆ ಅಭಿನಂದನೆಗಳು ಭಾರತ ಎಂದು ಹೇಳುವ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ.
ಇನ್ನು ಈ ಸಾಧನೆಯನ್ನ ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. ದೇಶದ 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣದ ದೀಪಾಲಂಕಾರ ಮಾಡಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಗೌರವ ಸೂಚಿಸಿದೆ. ಒಟ್ಟಾರೆ ಭಾರತ ಈ ಶತಕೋಟಿ ಸಾಧನೆಯನ್ನ ಸಾರ್ತಕತೆಯ ಭಾವದಿಂದ ಸಂಭ್ರಮಿಸುತ್ತಿದೆ. 

Tags: Covid 19ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಕಡತಗಳ ವಿಲೇವಾರಿಗೆ 300 ಕೋಟಿ ರೂ. ಹಫ್ತಾ; ಇದೇನಾ RSS ಸಿದ್ದಾಂತ: ಹೆಚ್‌.ಡಿ.ಕುಮಾರಸ್ವಾಮಿ

Next Post

ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ

ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada