• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಬಿಜೆಪಿ ಕಾರ್ಯಕರ್ತರಿಗೆ ಲಸಿಕೆ ಶಿಬಿರ: ಶಾಸಕ ರಘು ವಿರುದ್ಧ ಗಂಭೀರ ಆರೋಪ

Any Mind by Any Mind
June 1, 2021
in ರಾಜಕೀಯ
0
ಬಿಜೆಪಿ ಕಾರ್ಯಕರ್ತರಿಗೆ ಲಸಿಕೆ ಶಿಬಿರ: ಶಾಸಕ ರಘು ವಿರುದ್ಧ ಗಂಭೀರ ಆರೋಪ
Share on WhatsAppShare on FacebookShare on Telegram

ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆಡ್‌ ಬ್ಲಾಕಿಂಗ್‌, ವ್ಯಾಕ್ಸಿನ್‌ ಬ್ಲಾಕಿಂಗ್‌ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದಿರುವ ಹೊತ್ತಿನಲ್ಲೇ ಮತ್ತೋರ್ವ ಬಿಜೆಪಿ ಶಾಸಕ ಸರ್ಕಾರದ ವತಿಯಿಂದ ಉಚಿತವಾಗಿ ವಿತರಿಸಬೇಕಾಗಿದ್ದ ಕೋವಿಡ್‌ ನಿರೋಧಕ ಲಸಿಕೆಗಳಿಗೆ ತನ್ನ ಚಿತ್ರ ಲಗತ್ತಿಸಿ, ಕಾರ್ಯಕರ್ತರಿಗೆ ವಿತರಿಸಿರುವುದಾಗಿ ವರದಿಯಾಗಿದೆ.

ADVERTISEMENT

ಸಿವಿ ರಾಮನ್‌ ನಗರ್‌ ಕ್ಷೇತ್ರದ ಶಾಸಕ ಎಸ್‌ ರಘು ಅವರ ನಿರ್ದೇಶನದ ಮೇರೆಗೆ ಮೇ 31ರಂದು ಭುವನೇಶ್ವರಿ ನಗರ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ನಡೆಯಬೇಕಿದ್ದ ವ್ಯಾಕ್ಸಿನೇಷನ್‌ ಪ್ರಕ್ರಿಯೆ ರದ್ದುಗೊಳಿಸಲಾಗಿದ್ದು, ಶಾಸಕ ರಘು ವತಿಯಿಂದ ಉಚಿತ ವ್ಯಾಕ್ಸಿನೇಷನ್‌ ಶಿಬಿರ ಎಂಬ ಬ್ಯಾನರ್‌ನೊಂದಿಗೆ ಸ್ಥಳೀಯ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಲಸಿಕೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ. ಅದಾಗ್ಯೂ, ಲಸಿಕೆಗಳು ಸ್ಥಳೀಯರಿಗೆ ಲಭ್ಯವಾಗದೆ, ಶಾಸಕರ ಕುಟುಂಬಸ್ಥರಿಗೂ, ಅವರ ಬೆಂಬಲಿಗರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಾಕಕಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬಿಜೆಪಿಯ ಇನ್ನೋರ್ವ ಶಾಸಕ ರವಿ ಸುಬ್ರಹ್ಮಣ್ಯ ಅವರು ಇಂತದ್ದೇ ಹಗರಣದಲ್ಲಿ ಭಾಗಿಯಾದ ಕುರಿತು ಆರೋಪಗಳು ಎದ್ದ ಬೆನ್ನಲ್ಲೇ ಶಾಸಕ ರಘು ಅವರ ಅಧಿಕಾರ ದುರ್ಬಳಕೆಯೂ ಬೆಳಕಿಗೆ ಬಂದಿದ್ದು, ಬಿಜೆಪಿಯು ಕರೋನಾ ಕಾಲದಲ್ಲೂ ತಮ್ಮ ಪ್ರಚಾರಕ್ಕಾಗಿ ಯಾವ ಹೇಸಿಗೆಗೂ ಇಳಿಯುತ್ತದೆ ಎಂಬ ಆರೋಪವನ್ನು ಸಾಬೀತು ಪಡಿಸಿದೆ.

ವ್ಯಾಕ್ಸಿನ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ದ ದೂರು ದಾಖಲು

ಈ ಕುರಿತು ನ್ಯೂಸ್‌ ಮಿನಿಟ್‌ ಜೊತೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಮಂಜು, ತನ್ನ ವೃದ್ಧ ಪೋಷಕರಿಗೆ ಲಸಿಕೆ ಹಾಕಿಸಲು ನೋಂದಣಿ ಮಾಡಿದ್ದೆ. ಬೆಳಗ್ಗೆ 7 ರಿಂದ ಆಸ್ಪತ್ರೆಯಲ್ಲಿ ಕಾದಿದ್ದೇವೆ. 9:45 ರ ಹೊತ್ತಿಗೆ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕಲ್ಯಾಣ ಮಂಟಪಕ್ಕೆ ತೆರಳುವಂತೆ ಸೂಚಿಸಲಾಯಿತು. ಮಧುಮೇಹದ ರೋಗಿಗಳಾಗಿರುವ ನನ್ನ ಪೋಷಕರನ್ನು ಇನ್ನಷ್ಟು ಕಾಯಿಸುವುದು ನನಗೆ ಇಷ್ಟವಿರಲಿಲ್ಲ, ಅಲ್ಲದೆ ಅಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿರಲಿಲ್ಲ. ನನ್ನ ಪೋಷಕರನ್ನು ನಾನು ಇದುವರೆಗೆ ಎಲ್ಲಿಯೂ ಹೊರಕ್ಕೆ ಬಿಟ್ಟಿರಲಿಲ್ಲ. ಇಷ್ಟೊಂದು ಅಸುರಕ್ಷಿತ ಪ್ರದೇಶದಲ್ಲಿ ಅವರನ್ನು ಇರಿಸುವುದು ನನಗೆ ಸೂಕ್ತವೆನಿಸಿಲ್ಲ ಎಂದು ತಮಗೆದುರಾದ ಅನಾನುಕೂಲವನ್ನು ತೋಡಿಕೊಂಡಿದ್ದಾರೆ.

ಜನರು ಇಷ್ಟೆಲ್ಲಾ ಕಷ್ಟದಲ್ಲಿರುವಾಗಲೂ ಸರ್ಕಾರ ಏನೋ ಮಾಡುತ್ತಿದೆ. ಸಚಿವರು ಏನೋ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಮುಖ್ಯಮಂತ್ರಿಯನ್ನು ಇಳಿಸಲು ಇತರೆ ನಾಯಕರು ಶ್ರಮಿಸುತ್ತಿದ್ದಾರೆ. ರವಿ ಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ರಘು ಮೊದಲಾದವರು ಕರೋನಾದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಾಗರಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Previous Post

ಅನಾರೋಗ್ಯದಿಂದ ಸಿದ್ದರಾಮಯ್ಯ ಮಣಿಪಾಲ್‌ ಆಸ್ಪತ್ರೆಗೆ ದಾಖಲು

Next Post

ಬ್ಲ್ಯಾಕ್ ಫಂಗಸ್: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿಯಿಂದ ತ್ರಿವಳಿ ಪ್ರಶ್ನೆ

Related Posts

ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ?-ಹೆಚ್.ಡಿ ಕುಮಾರಸ್ವಾಮಿ
Top Story

ಖಾತೆ ಹಂಚಿಕೆ ವಿಳಂಬ ಕಾಂಗ್ರೆಸ್ ದಿವಾಳಿತನ ತೋರುತ್ತದೆ: ಹೆಚ್.ಡಿ ಕುಮಾರಸ್ವಾಮಿ

by ಪ್ರತಿಧ್ವನಿ
August 8, 2026
0

ಬೆಂಗಳೂರು: ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಡದಿ ಬೃಹತ್ ಪಾದಯಾತ್ರೆಗೆ ಮಿತ್ರಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ ಎಂದು ಕೇಂದ್ರ...

Read moreDetails
SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3

SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3

August 8, 2026
ನಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಕ್ಕೇ ಸಿಗಲಿದೆ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಕ್ಕೇ ಸಿಗಲಿದೆ: ಸಿಎಂ ಡಿ.ಕೆ ಶಿವಕುಮಾರ್

August 8, 2026
ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ: ಮೃ**ರ ಖಾತೆಗೆ ₹86 ಲಕ್ಷ ಜಮೆ..!

ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ: ಮೃ**ರ ಖಾತೆಗೆ ₹86 ಲಕ್ಷ ಜಮೆ..!

August 8, 2026
ಬಿಜೆಪಿಯಲ್ಲಿನ ನನ್ನ ಮೆಚ್ಚಿನ ನಾಯಕ…’ ಎಂದ ರಾಹುಲ್ ಗಾಂಧಿ; ಯಾರ ಹೆಸರು ಗೊತ್ತೇ?

ಬಿಜೆಪಿಯಲ್ಲಿನ ನನ್ನ ಮೆಚ್ಚಿನ ನಾಯಕ…’ ಎಂದ ರಾಹುಲ್ ಗಾಂಧಿ; ಯಾರ ಹೆಸರು ಗೊತ್ತೇ?

August 7, 2026
Next Post
ಬ್ಲ್ಯಾಕ್ ಫಂಗಸ್: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿಯಿಂದ ತ್ರಿವಳಿ ಪ್ರಶ್ನೆ

ಬ್ಲ್ಯಾಕ್ ಫಂಗಸ್: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿಯಿಂದ ತ್ರಿವಳಿ ಪ್ರಶ್ನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada