ಬೆಳಗಾವಿಯಲ್ಲಿ ರೈತರ ಆಕ್ರೋಶದ ಕಟ್ಟೆ ಒಡೆದಿದೆ. ಈಗಾಗಲೇ ರಾಜ್ಯದ ರೈತರು ಬರದಿಂದ ತತ್ತರಿಸಿಹೋಗಿದ್ದು ,ಜನ ಜಾನುವಾರು ಸಂಕಷ್ಟದಲ್ಲಿದೆ. ಬರದ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ ತೋರಿದ್ದು , ಬರದ ಬೇಗೆಯಲ್ಲಿ ರೈತರು ಬೇಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೃಹತ್ ಪ್ರತಿಭಟನೆಗೆ ಇಂದು ಅನ್ನದಾತರು ಮುಂದಾಗಿದ್ದರು.
![](https://pratidhvani.com/wp-content/uploads/2024/04/IMG_6530.jpeg)
ಬೆಳಗಾವಿಯ ಡಿಸಿ ಕಛೇರಿ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಾಲ ಪಡೆದು ಕೃಷಿ ಮಾಡಿ ಮಳೆ ಕೈಕೊಟ್ಟು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಸಹಾಯಕ್ಕೆ ಧಾವಿಸದೇ ಕಣ್ಣಾಮುಚ್ಚಾಲೆ ಆಡುತ್ತಿರುವುದು ಸರಿ ಇಲ್ಲ. ಈ ಕೂಡಲೇ ರೈತರ ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂದು ಪ್ರತಿಭಟಿಸಿದರು. ಈ ನಡುವೆ ರೈತರು ಹಾಗೂ ಪೊಲೀಸರ ನಡುವೆ ನೂಕಟ ತಳ್ಳಾಟ ಕೂಡ ನಡೆಯಿತು.
![](https://pratidhvani.com/wp-content/uploads/2024/04/IMG_6529.jpeg)
ರಾಜ್ಯ ಸರ್ಕಾರ ಈ ಕೂಡಲೇ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕು ಅಂತ ಆಗ್ರಹಿಸಿ ರೈತರು ಡಿಸಿ ಕಚೇರಿ ಮುಂಭಾಗ ಪ್ರತಿಭಟಿಸಿ ಡಿಸಿ ಕಛೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆಗ ರೈತರನ್ನ ಪೊಲೀಸರು ತಡೆದಿದ್ದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಟ್ನಲ್ಲಿ ಲೋಕಸಭಾ ಚುನಾವಣೆ ಸಂದರ್ಬದಲ್ಲಿ ರೈತರ ಕಿಚ್ಚು ಕಾಂಗ್ರೆಸ್ ಗೆ ತಟ್ಟುವ ಭೀತಿ ಎದುರಾಗಿದೆ.