ರಾಜ್ಯದಲ್ಲಿ ಇದೀಗ ಧರ್ಮ ದಂಗಲ್ಗೆ ಹೊಸ ವಿಚಾರ ಸೇರ್ಪಡೆಯಾಗಿದೆ. ಗಣೇಶ ಹೆಸರಿನಲ್ಲಿ ಶಿಕ್ಷಣ ಇಲಾಖೆ ಹೊಸ ಕಾಂಟ್ರವರ್ಸಿ ಹುಟ್ಟಿ ಹಾಕಿದೆ. ಶಿಕ್ಷಣ ಸಚಿವರ ಆ ಒಂದು ಹೇಳಿಕೆಗೆ ಪರೋಕ್ಷವಾಗಿ ವಕ್ಫ್ ಬೋರ್ಡ್ ಟಾಂಗ್ ನೀಡಿದ್ದು, ಹಲವು ಬೇಡಿಕೆ ಶಿಕ್ಷಣ ಸಚಿವರ ಮುಂದೆ ಇಟ್ಟಿದೆ.
ಹೊಸ ವಿವಾದಕ್ಕೆ ಮುನ್ನುಡಿ ಬರೆದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಹಿಜಾಬ್, ಪಠ್ಯ ಪರಿಷ್ಕರಣೆ , ಭಗವದ್ಗೀತೆ ಕಾಂಟ್ರವರ್ಸಿ ಆದ್ಮೇಲೆ ಇದೀಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದ ಮುನ್ನೆಲೆಗೆ ಬಂದಿದ್ದು, ಮತ್ತೆ ಶಾಲೆ- ಕಾಲೇಜುಗಳಲ್ಲಿ ಧರ್ಮ ದಂಗಲ್ ಶುರುವಾಗಿದೆ. ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣಪತಿ ಕೂರಿಸಲು ಅವಕಾಶ ನೀಡುತ್ತೇವೆ ಎಂಬ ಹೇಳಿಕೆಗೆ ವಾಕ್ ವಕ್ಫ್ ಬೋರ್ಡ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹೌದು, ಶಿಕ್ಷಣ ಸಚಿವ ಬಿಸಿ ನಾಗೇಶ್ ಎಲ್ಲಾ ಶಾಲೆಗಳಲ್ಲಿ ಗಣೇಶನ ಮೂರ್ತಿ ಕೂರಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿರೋದು ಈಗ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ.
ಗಣೇಶೋತ್ಸವಕ್ಕೆ ಅವಕಾಶ ಕೊಟ್ರೆ, ಮುಸ್ಲಿಮರ ಹಬ್ಬಕ್ಕೂ ಅವಕಾಶಕ್ಕೆ ನೀಡುವಂತೆ ಆಗ್ರಹ
ಇದಕ್ಕೆ ಪ್ರತಿಯಾಗಿ ಟಾಂಗ್ ಕೊಟ್ಟಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಶಿಕ್ಷಣ ಸಚಿವರ ಈ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ ಮುಸ್ಲಿಮರ ಧಾರ್ಮಿಕ ಹಬ್ಬಗಳಿಗೂ ಶಿಕ್ಷಣ ಸಚಿವರು ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಇದರ ಜೊತೆಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.
ಶಿಕ್ಷಣ ಸಚಿವರಿಗೆ ಪರೋಕ್ಷವಾಗಿ ಕಾಲೆಳದ ಅಧ್ಯಕ್ಷ ಶಾಫಿ ಸಅದಿ :
ಮುಸ್ಲಿಮರ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು. ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು. ಗಣೇಶನ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು. ನಮಾಜ್ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು. ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು. ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು. ಮುಸ್ಲಿಮರ ಆಚರಣೆಗೂ ಕೂಡಾ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿಜಾಬ್ ವಿವಾದ ಆದಾಗಲೂ ನಾವು ಒಂದು ವಿಷಯ ಸ್ಪಷ್ಟ ಪಡಿಸಿದ್ದೇವೆ. ಧಾರ್ಮಿಕ ವಿಚಾರಗಳನ್ನು ತಿಳಸೋ ಮೂಲಕ ಅಪನಂಬಿಕೆ ಹೋಗಲಾಡಿಸಬೇಕು.ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಅವಕಾಶ ಮಾಡಿಕೊಡಬೇಕು. ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ರೀತಿಯಲ್ಲೇ ಮುಸ್ಲಿಮರ ಹಬ್ಬಕ್ಕೂ ಅವಕಾಶ ಮಾಡಿಕೊಡಬೇಕು ಎಂಬುವುದು ವಕ್ಫ್ ಬೋರ್ಡ್ ಅಧ್ಯಕ್ಷರ ವಾದ. ಒಟ್ಟಾರೆ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣೇಶ ಹಬ್ಬ ಆಚರಣೆಗೆ ಹೇಳಿಕೆಗೆ ಪರ, ವಿರೋಧ ಚರ್ಚೆ ಆಗ್ತಿದ್ದು, ಮತ್ತೆ ಇದು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.