Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹಂಚಿಕೆಯಾಗಿದ್ದ ದೋಷಪೂರಿತ ರಾಷ್ಟ್ರ ಧ್ವಜ ವಾಪಸ್ ಪಡೆದ ಬಿಬಿಎಂಪಿ!

ಪ್ರತಿಧ್ವನಿ

ಪ್ರತಿಧ್ವನಿ

August 6, 2022
Share on FacebookShare on Twitter

ಅವೈಜ್ಞಾನಿಕವಾಗಿರುವ ತ್ರಿವರ್ಣ ಧ್ವಜ ನೀಡಿದ ಬಿಬಿಎಂಪಿ ಇದಿಗ ಕೆಟ್ಟಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನಂತೆ ಎಚ್ಚೆತ್ತುಕೊಂಡಿದೆ. ಈಗ ಡಿಫೆಕ್ಟ್ ಧ್ವಜಗಳನ್ನು ವಾಪಾಸ್ ಪಡೆದು ಹೊಸ ಬಾವುಟವನ್ನು ಕೊಡಲು ಮುಂದಾಗಿದೆ. ಅಲ್ಲದೆ ಜಂಟಿ ಆಯುಕ್ತರಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನೆ ಕೊಡಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರಿನಾದ್ಯಂತ ‘ಕಾವೇರಿ’ ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ಕಾವೇರಿ ವಾಗ್ವಾದ : ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ

ಅವೈಜ್ಞಾನಿಕ ತ್ರಿವರ್ಣ ಧ್ವಜ ಕೊಟ್ಟಿದ್ದ ಬಿಬಿಎಂಪಿ

ಕೇಂದ್ರ ಸರ್ಕಾರ ಸ್ವಾತಂತ್ರ್ಯ ಸಿಕ್ಕಿ ದೇಶಕ್ಕೆ 75 ವರ್ಷ ತುಂಬುವ ಗಳಿಗೆಯನ್ನು ಬಹಳ ಅದ್ದೂರಿಯಾಗಿ ಆಚರಿಸುವ ಪಣ ತೊಟ್ಟಿದೆ. ಇದರ ಅಂಗವಾಗಿ ಹರ್ ಘರ್ ತಿರಂಗ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ಮನೆಗಳ ಮೇಲೆ ರಾಷ್ಟ್ರೀಯ ಬಾವುಟ ಹಾರಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಜನರಿಗೆ ತ್ರಿವರ್ಣ ಧ್ವಜ ಹಂಚುವ ಜವಾಬ್ದಾರಿಯನ್ನು ಬಿಬಿಎಂಪಿಗೆ ಕೊಡಲಾಗಿದೆ. ಆದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಬಿಬಿಎಂಪಿ ಎಡವಿದೆ‌. ಜನರಿಗೆ ಬಿಬಿಎಂಪಿ ಕೊಡಮಾಡುವ ತ್ರಿವರ್ಣ ಧ್ವಜಗಳು ಎಲ್ಲವೂ ಅವೈಜ್ಞಾನಿಕ ತಯಾರಾಗಿದೆ. ದೇಶದ ತ್ರಿವರ್ಣ ಧ್ವಜಕ್ಕೆ ಒಂದು ಸಂಹಿತೆಯಿದೆ. ಕೇಸರಿ, ಬಿಳಿ, ಹಸಿರು. ಈ ಮೂರು ಬಣ್ಣಗಳ ಅಳತೆಗೂ ಒಂದು ಸೂಕ್ತ ಶಿಸ್ತಿದೆ. ಮಧ್ಯ ಭಾಗದಲ್ಲಿರುವ ಅಶೋಕ ಚಕ್ರಕ್ಕೂ ಇಂತಿಷ್ಟೇ ಎಂಬ ಅಳತೆಗೋಲಿದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿ, ಅಡ್ಡಾದಿಡ್ಡಿ ಬಾವುಟ ರಚಿಸಿ ಜನರಿಗೆ ಕೊಡಲಾಗುತ್ತಿದೆ.

ದೋಷಪೂರಿತ ಧ್ವಜ ವಾಪಸಾತಿಗೆ ಮುಂದಾಗಿರುವ ಸಿಬ್ಬಂದಿ

ಕೇಂದ್ರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಒಟ್ಟು 10 ಲಕ್ಷ ಧ್ವಜವನ್ನು ಹಂಚುವ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಹಂಚಿರುವ ಬಾವುಟಗಳಲ್ಲಿ ಅನೇಕ ಅವೈಜ್ಞಾನಿಕವಾಗಿದೆ. ಹೀಗಾಗಿ ಅವುಗಳನ್ನು ವಾಪಾಸ್ ಪಡೆದು ಹೊಸ ತ್ರಿವರ್ಣ ಧ್ವಜ ನೀಡಲು ಬಿಬಿಎಂಪಿ ಮುಂದಾಗಿದೆ. ತ್ರಿವರ್ಣ ಧ್ವಜದಲ್ಲಿನ ಎಡವಟ್ಟು ವರದಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು, ತ್ರಿವರ್ಣ ಧ್ವಜ ಪ್ರಿಂಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಕಡೆಯಿಂದ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೆವೆ. ಡಿಫೆಕ್ಟ್ ಇರುವ ಬಾವುಟವನ್ನು ವಿತರಣೆ ಮಾಡದಂತೆ ಸೂಚನೆ ಕೊಡಲಾಗಿದೆ. ಯಾವುದಾದ್ರೂ ಬಾವುಟ ಡಿಫೆಕ್ಟ್ ಇದ್ದರೆ ವಾಪಾಸ್ ಕೊಟ್ಟು ಬೇರೆ ತೆಗೆದುಕೊಂಡು ಹೋಗಲು ಸಾರ್ವಜನರಿಕಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಬಿಬಿಎಂಪಿ ಎಡವಟ್ಟುಗಳ ಮೇಲೊಂದು ಎಡವಟ್ಟನ್ನು ಮಾಡಿಕೊಳ್ಳುತ್ತಿದ್ದು, ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇದೀಗ ಅತ್ಯುನ್ನತ ತ್ರಿವರ್ಣ ಧ್ವಜದ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದು, ದೇಶದ ರಾಷ್ಟ್ರೀಯ ಬಾವುಟಕ್ಕೇ ಅಪಮಾನ ಮಾಡಿದೆ. ಇದೀಗ ಅದಕ್ಕೂ ತೇಪೆ ಹಚ್ಚುವ ನಾಟಕವಾಡಿ, ಸಮಸ್ಯೆ ಬಗೆಹರಿದಿದೆ ಎಂದಿದೆ.

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ಜಿಲ್ಲೆಯಲ್ಲಿಹೆಚ್ಚಾಗುತ್ತಿರುವ  ಡೆಂಗ್ಯೂ ಪ್ರಕರಣ: ಕಳೆದ 9 ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢ!
Top Story

ಜಿಲ್ಲೆಯಲ್ಲಿಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣ: ಕಳೆದ 9 ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢ!

by ಪ್ರತಿಧ್ವನಿ
September 21, 2023
ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ
Top Story

ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ

by ಪ್ರತಿಧ್ವನಿ
September 23, 2023
ಕಾವೇರಿ ನೀರು ಹಂಚಿಕೆಗೆ ಮುಂದುವರೆದ ಹೋರಾಟ: ಇಂದು ಮಂಡ್ಯ ಬಂದ್
Top Story

ಕಾವೇರಿ ನೀರು ಹಂಚಿಕೆಗೆ ಮುಂದುವರೆದ ಹೋರಾಟ: ಇಂದು ಮಂಡ್ಯ ಬಂದ್

by ಪ್ರತಿಧ್ವನಿ
September 23, 2023
ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ
Top Story

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
September 26, 2023
ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್
Top Story

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

by ಪ್ರತಿಧ್ವನಿ
September 26, 2023
Next Post
ಮೆಟ್ರೋ ಸಂಚಾರದಲ್ಲಿ ಭಾರೀ ಬದಲಾವಣೆ: 15 ನಿಮಷಕ್ಕೊಂದು ರೈಲು!

ಮೆಟ್ರೋ ಸಂಚಾರದಲ್ಲಿ ಭಾರೀ ಬದಲಾವಣೆ: 15 ನಿಮಷಕ್ಕೊಂದು ರೈಲು!

ಸರ್ಕಾರ ಬಿದ್ದರೂ ಪರ್ವಾಗಿಲ್ಲ, ದಾಖಲೆ ಕೊಡಿ ಕ್ರಮ ಜರುಗಿಸುತ್ತೇವೆ : HDKಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು

ಆರಗ ಜ್ಞಾನೇಂದ್ರ ತಲೆದಂಡ? ಆರ್ ಅಶೋಕ್ ಮುಂದಿನ ಗೃಹ ಮಂತ್ರಿ?

ಕಾಮನ್‌ವೆಲ್ತ್ :  ಪಾಕಿಸ್ತಾನದ ತಾಹಿರ್ ವಿರುದ್ಧ ಸೆಣೆಸಾಡಿ ಚಿನ್ನ ಗೆದ್ದ ನವೀನ!

ಕಾಮನ್‌ವೆಲ್ತ್ : ಪಾಕಿಸ್ತಾನದ ತಾಹಿರ್ ವಿರುದ್ಧ ಸೆಣೆಸಾಡಿ ಚಿನ್ನ ಗೆದ್ದ ನವೀನ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist