Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಚನ ಚಳುವಳಿಯ ಮೂಲ ಉದ್ದೇಶಗಳು : Basic Objectives of Vachana Movement

ಡಾ | ಜೆ.ಎಸ್ ಪಾಟೀಲ

ಡಾ | ಜೆ.ಎಸ್ ಪಾಟೀಲ

March 19, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

~ಡಾ. ಜೆ ಎಸ್ ಪಾಟೀಲ.

ಬೆಂಗಳೂರು: ಮಾ.19: ಈ ಉಪಖಂಡದಲ್ಲಿ ಅನೇಕ ವಾಗ್ವಾದ ಚಳುವಳಿಗಳು ನಡೆದುಹೋಗಿವೆ. ಲೋಕಾಯತದಿಂದ ಲಿಂಗಾಯತದ ವರೆಗೆ ಘಟಿಸಿದ ಈ ಬಂಡಾಯಗಳು ಜೀವನ್ಮುಖಿ ಚಿಂತನೆಯ ತಳಹದಿಯಲ್ಲಿ ನಡೆದಿವೆ. ಹನ್ನೆರಡನೇ ಶತಮಾನದಲ್ಲಿ ಕನ್ನಡದ ಮಣ್ಣಿನಲ್ಲಿ ನಡೆದುಹೋದ ವಚನ ಚಳುವಳಿ ಒಂದು ವಿಶಿಷ್ಟ ಹಾಗು ವಿನೂತನ ಸಾಮೂಹಿಕ ಬಂಡಾಯದ ಜನಾಂದೋಲನ. ಈ ನೆಲದ ಬಹುಜನರು ಒಂದಾಗಿ ಸಮಾಜವನ್ನು ಕಾಡುತ್ತಿದ್ದ ಬಹುಜನ ವಿರೋಧಿ ಸಿದ್ಧಾಂತದ ವಿರುದ್ಧ ಘಟಿಸಿದ ಒಂದು ಬಹುದ್ದೇಶಪೂರಿತ ಅಪರೂಪದ ಆಂದೋಲನ.

ವೈದಿಕರು ನೆಲೆಗೊಳಿಸಿದ್ದ ಶ್ರೇಣೀಕೃತ ವರ್ಣ ವ್ಯವಸ್ಥೆಯು ಈ ನೆಲಮೂಲದ ಜನರನ್ನು ಸಾಮಾಜಿಕˌ ಶೈಕ್ಷಣಿಕˌ ಆರ್ಥಿಕˌ ಧಾರ್ಮಿಕ ಮುಂತಾದ ಮೂಲಭೂತ ಹಕ್ಕುಗಳಿಂದ ವಂಚಿಸಿ ಅಟ್ಟಹಾಸದಿಂದ ಮೆರೆಯುತ್ತಿದ್ದ ಕಾಲಘಟ್ಟದಲ್ಲಿ ಶರಣರು ಸಾಮೂಹಿಕವಾಗಿ ಈ ವಿಕೃತ ವೈದಿಕ ವ್ಯವಸ್ಥೆಯ ವಿರುದ್ಧ ಬಂಡೆದ್ದರು. ಆಚಾರ ಪ್ರಧಾನ ಸಮಾಜವನ್ನು ನಗಣ್ಯಗೊಳಿಸಿದ ಶರಣರು ಜೀವಂತ ಮಾನವನಿಗಿಂತ ಕಲ್ಪನೆಯ ದೇವರಿಗೆ ಪ್ರಾಧಾನ್ಯತೆ ನೀಡುತ್ತ ಶೋಷಿತರಿಗೆ ಅವರ ಮೂಲಭೂತ ಹಕ್ಕುಗಳಿಂದ ವಂಚಿಸುತ್ತಿದ್ದ ಸಮಯದಲ್ಲಿ ಬಸವಾದಿ ಶರಣರು ವೈಚಾರಿಕ ಆಂದೋಲನವನ್ನು ಆರಂಭಿಸಿದರು.

ಹೊಸ ವಿಚಾರಧಾರೆಯ ನೆಲೆಗಟ್ಟಿನಲ್ಲಿ ವರ್ಗ-ವರ್ಣ-ಲಿಂಗಭೇದ ರಹಿತ ಸಮಾಜ ನಿರ್ಮಾಣದ ಗುರಿಯೊಂದಿಗೆ ಜನಾಂದೋಲನವೊಂದನ್ನು ರೂಪಿಸಿದರು.
ಶರಣರು ಸರ್ವಾಂಗೀಣ ಸನಾಮತೆಯನ್ನು ನೆಲೆಗೊಳಿಸಲು “ಅನುಭವ ಮಂಟಪ”ವೆಂಬ ಪ್ರಜಾಸಂಸತ್ತು ಮಾದರಿಯ ವ್ಯವಸ್ಥೆವೊಂದನ್ನು ರೂಪಿಸಿದರು. ಆ ಮೂಲಕ ಮಾನವ ಹಕ್ಕುಗಳು ಮತ್ತು ಮಾನವ ಘನತೆಯ ಸ್ಥಾಪನೆಗೆ ವಚನ ಚಳುವಳಿ ಎಂಬ ವಿನೂತನ ಅಕ್ಷರ ಸ್ವಾತಂತ್ರದ ಮಾದ್ಯಮವನ್ನು ಪ್ರಾಯೋಗಿಕ ಅಸ್ತ್ರವಾಗಿ ಶೋಧಿಸಿಕೊಂಡರು. ಶಿಕ್ಷಣದಿಂದ ವಂಚಿತರಾಗಿದ್ದ ಕೃಷಿಕಾಯಕದ ಜನರನ್ನು ಅಕ್ಷರಸ್ಥರನ್ನಾಗಿಸುವ ಮುಖೇನ ಮಾನವ ಹಕ್ಕುಗಳು ಮತ್ತು ಘನತೆಯನ್ನು ಪ್ರತಿಪಾದಿಸಿದರು.

ಶರಣರ ಈ ಆಂದೋಲನವು ಮಾನವರೆಲ್ಲರಿಗೂ ಸ್ವತಾಂತ್ರ್ಯ ˌ ಸಮಾನತೆˌ ಸಹೋದರತೆಯನ್ನು ಭೋದಿಸಿದರು. ಸಮಾಜದ ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯುವ ಕಾಯಕ ಮಾಡಬೇಕು ಹಾಗು ಅದಿಂದ ಬಂದ ಆದಾಯದಲ್ಲಿ ತಮಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದದ್ದು ಸಮಾಜಕ್ಕೆ ದಾಸೋಹ ಮಾಡಬೇಕು ಎನ್ನುವ ಹೊಸ ಆರ್ಥಿಕ ಸೂತ್ರವನ್ನು ಮುಂದಿಟ್ಟರು. ಆ ಆರ್ಥಿಕ ಸೂತ್ರದ ಪರಿಣಾಮಕಾರಿ ಅನುಷ್ಟಾನವು ಕಲ್ಯಾಣವನ್ನು ಒಂದು ಸಮೃದ್ಧ ನಾಡಾಗಿಸಿತು.

ಮೇಲ್ಕಾಣಿಸಿದ ಸಿದ್ಧಾಂತಗಳ ಮುಖೇನ ಶರಣರು ಸಮಸ್ತ ಮಾನವರ ಮೂಲಭೂತ ಹಕ್ಕುಗಳ ಪ್ರತಿಷ್ಠಾಪನೆಗೆ ಅನುಭವ ಮಂಟಪವೆಂಬ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಈ ಅನುಭವ ಮಂಟಪದ ಮೂಲ ಉದ್ದೇಶಗಳೇನೆಂದರೆ ಅಕ್ಷರ ವಂಚಿತ ಜನರಿಗೆ ಅಕ್ಷರಭ್ಯಾಸˌ ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿಯ ಅಸ್ಥಿತ್ವದ ನಿರಾಕರಣೆˌ ವೈದಿಕ ಮೂಲದ ಸಂಸ್ಕ್ರತವನ್ನು ದಿಕ್ಕರಿಸಿ ನೆಲಮೂಲದ ಜನಸಾಮಾನ್ಯರು ಆಡುವ ಕನ್ನಡ ಭಾಷೆಯಲ್ಲಿ ವಚನಗಳ ರಚನೆ.

ಅನುಭವ ಮಂಟಪದಲ್ಲಿ ಹೊಸ ವಿಚಾರಧಾರೆಯ ಕುರಿತು ಪೂರ್ವಾಪರ ಚಿಂತನೆˌ ಮಂಥನˌ ಪರಾಮರ್ಶೆ ಹಾಗು ಚರ್ಚೆಗಳು ನಡೆದು ಆ ವಿಚಾರಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಮೂಲಕ ಶೋಷಿತ ಜನಾಂಗದಲ್ಲಿ ಜಾಗೃತಿ ಮೂಡಿಸುವುದು. ಅನುಭವ ಮಂಟಪದ ಕಾರ್ಯ ಕಲಾಪಗಳಲ್ಲಿ ಸ್ತ್ರೀಯರಿಗೆ ಮತ್ತು ಸಮಾಜದ ನಿಮ್ನ ವರ್ಗದ ಜನರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು.

ಹಾಗಾಗಿ ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಜನತಂತ್ರದ ಪರಿಕಲ್ಪನೆˌ ಸಂಸದೀಯ ವ್ಯವಸ್ಥೆ ಮತ್ತು ಅಧುನಿಕ ಸಂವಿಧಾನದ ಪರಿಕಲ್ಪನೆಯನ್ನು ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಲಾಯಿತು. ಆ ಮೂಲಕ ಈ ಸರ್ವಾಂಗೀಣ ವಚನಾಂದೋಲನ ಮಾನವ ಹಕ್ಕು ಮತ್ತು ಘನತೆಯ ಬೇಡಿಕೆಯ ಪರವಾಗಿ ಧ್ವನಿ ಎತ್ತಿತು. ಆದ್ದರಿಂದ ಕಲ್ಯಾಣದಲ್ಲಿ ಶರಣರು ಹಮ್ಮಿಕೊಂಡ ಈ ವಚನ ಚಳುವಳಿಯು ಅನೇಕ ವಿಷಯಗಳಲ್ಲಿ ವಿಶಿಷ್ಟ ಮತ್ತು ವಿಶೇಷವಾಗಿ ಜಗತ್ತಿನ ಗಮನ ಸೆಳೆದದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

~ ಡಾ. ಜೆ.ಎಸ್. ಪಾಟೀಲ

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS
ಇದೀಗ

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS

by ಪ್ರತಿಧ್ವನಿ
March 26, 2023
MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI
ಇದೀಗ

MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI

by ಪ್ರತಿಧ್ವನಿ
March 20, 2023
ಮತದಾರರ ಮನವೊಲಿಕೆಗೆ ಕಾಂಗ್ರೆಸ್  ಭರ್ಜರಿ ಸರ್ಕಸ್..!
Top Story

ಮತದಾರರ ಮನವೊಲಿಕೆಗೆ ಕಾಂಗ್ರೆಸ್ ಭರ್ಜರಿ ಸರ್ಕಸ್..!

by ಪ್ರತಿಧ್ವನಿ
March 25, 2023
ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ
Top Story

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

by ಮಂಜುನಾಥ ಬಿ
March 21, 2023
VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI
ಇದೀಗ

VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI

by ಪ್ರತಿಧ್ವನಿ
March 20, 2023
Next Post
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah

ದಿನಸಿ ಕಿಟ್​, ಉಡುಗೊರೆ ಸೀಜ್​.. ಕಾನೂನು ಮಾನ್ಯತೆ ಇದೆಯಾ..?

ದಿನಸಿ ಕಿಟ್​, ಉಡುಗೊರೆ ಸೀಜ್​.. ಕಾನೂನು ಮಾನ್ಯತೆ ಇದೆಯಾ..?

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಮುಸ್ಲಿಂ ಯುವಕ : Shimoga District Collector’s Office

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಮುಸ್ಲಿಂ ಯುವಕ : Shimoga District Collector's Office

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist