ಮಹಾರಾಷ್ಟ್ರ : ಕೊಲ್ಹಾಪುರದ ಜನತೆ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ನನಗನಿಸುತ್ತಿಲ್ಲೆಂದು ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಕೊಲ್ಹಾಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತಂತೆ ಪ್ರತಿಕ್ರಿಯಿಸಿದ ಅವರು ಪರಿಸ್ಥಿತಿಯನ್ನು ಕದಡಲು ಹೊರಗಿನಿಂದ ಜನರನ್ನು ಕೊಲ್ಹಾಪುರಕ್ಕೆ ಕರೆಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
![](https://pratidhvani.com/wp-content/uploads/2023/06/Sanjay-Raut-.jpg)
ಯಾಕೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ..? ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ನೀವು ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಯಾರೋ ಒಬ್ಬರು ಫೋಟೋ ಹಾಕಿದ ಮಾತ್ರಕ್ಕೆ ಬೆದರಿಕೆ ಹಾಕುವಷ್ಟವರ ಮಟ್ಟಿಗೆ ನಿಮ್ಮ ಹಿಂದುತ್ವವು ದುರ್ಬಲವಾಗಿದೆಯೇ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲೋಕೆ ನಿಮಗೆ ಔರಂಗಜೇಬ ನೇಕೇ..? ಕರ್ನಾಟಕದಲ್ಲಿ ಬಜರಂಗಬಲಿ ನಿಮಗೆ ಸಹಾಯ ಮಾಡಲಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ಈಗ ಔರಂಗಜೇಬನನ್ನು ಬಳಸಿಕೊಳ್ತಿದ್ದೀರಿ ಎಂದು ಕಿಡಿಕಾರಿದ್ರು.