IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾಗಿ ಬಂದಾಗ 40 ದಿನಗಳ ಕಾಲ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ಉಳಿದು ಕೊಂಡಿದ್ರು. ಬಳಿಕ ಡಿಸಿ ನಿವಾಸಕ್ಕೆ ರೋಹಿಣಿ ಸಿಂಧೂರಿ ಶಿಫ್ಟ್ ಆಗುವಾಗ ಆಡಳಿತ ತರಬೇತಿ ಕೇಂದ್ರ ಅತಿಥಿ ಗೃಹದಿಂದ 12 ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಸಾಮಾಗ್ರಿಗಳ ವಾಪಸ್ಗೆ 2020ರಿಂದ ATI ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಡಿಸಿಗೆ ATI ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ಟೆಲಿಫೋನ್ ಟೇಬಲ್, ಬೆತ್ತದ ಚೇರ್ ಸೇರಿ 12 ಸಾಮಾಗ್ರಿ DC ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಪತ್ರ ಬರೆದಿದ್ದಾರೆ.
ATI ಬರೆದಿರೋ ಪತ್ರದಲ್ಲಿ ಏನಿದೆ..?
ಮೈಸೂರು ಡಿಸಿ ಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾದಾಗ ATI ಸಂಸ್ಥೆಯ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿದ್ರು. ಇಲ್ಲಿಂದ ಅಧಿಕೃತ ನಿವಾಸಕ್ಕೆ ಶಿಫ್ಟ್ ಆಗಬೇಕಾದ್ರೆ ಕೆಲವೊಂದು ವಸ್ತುಗಳನ್ನ ತೆಗೆದುಕೊಂಡು ಹೋಗಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಟೆಲಿಫೋನ್ ಟೇಬಲ್, ಬೆತ್ತದ ಚೇರ್ , ಮೈಕ್ರೋ ವೆವನ್, ಮಂಚ, ಹಾಸಿಗೆ, ಯೋಗಾ ಮ್ಯಾಟ್ ಒಳಗೊಂಡಿದೆ. ಒಟ್ಟು 12 ಸಾಮಾಗ್ರಿಗಳನ್ನ ಪಡೆದಿರುತ್ತಾರೆ. ಇವೆಲ್ಲವೂ DC ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಕೇಳಿದ್ದಾರೆ.

ಸಾಮಾಗ್ರಿಗಳ ವಾಪಸ್ಗೆ 2020ರಿಂದ ATI ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಡಿಸಿಗೆ ATI ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ನೂತನ ಡಿಸಿ ಕೆ.ವಿ. ರಾಜೇಂದ್ರ ಉತ್ತರ ಕೊಡಬೇಕಾಗಿದೆ. ರೋಹಿಣಿ ಸಿಂಧೂರಿ ಮೈಸೂರಲ್ಲಿ ಇದ್ದಷ್ಟು ದಿನ ಎಲ್ಲಾ ವಸ್ತುಗಳನ್ನ ಉಪಯೋಗಿಸಿದ್ದು , ಈಗ ಆರೋಪ ಬಂದರೂ ಯಾವುದೇ ಪ್ರತಿಕ್ರಿಯೆ ನೀಡದಿರೋದು ಎಲ್ಲರನ್ನ ಆಶ್ಚರ್ಯಗೊಳಿಸಿದೆ.
ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗೃಹ ಉಪಯೋಗಿ ವಸ್ತುಗಳ ಬಳಕೆ ವಿಚಾರದಲ್ಲೂ ವಿವಾದ ಸೃಷ್ಟಿಕೊಂಡಿರುವುದು ವಿಪರ್ಯಾಸವಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್ನಲ್ಲಿ ಮೈಸೂರಿಗೆ ಆಗಮಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಭೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಬಟ್ಟೆ ಬ್ಯಾಗ್ ಖರೀದಿ ಹಗರಣದಲ್ಲಿ ಶಾಸಕ ಸಾ.ರಾ ಮಹೇಶ್ ವಿರುದ್ಧ ಸಿಡಿದು ಬಾರಿ ಸದ್ದು ಮಾಡಿದ್ದ ರೋಹಿಣಿ ಸಿಂಧೂರಿ ಕಣ್ಣೀರಿಟ್ಟು ಮೈಸೂರಿನಿಂದ ಹೊರಟಿದ್ರು.
ಕರೋನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಇದೀಗ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನ ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.






