
ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗುತ್ತೆ ಎಂದು ಬಿಜೆಪಿ ಕಾಯುತ್ತಿದೆ. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಸಿಎಂ ಆಗಲು ಪೈಪೋಟಿ ಮಾಡುತ್ತಿದ್ದಾರೆ ಎಂದು ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೆ ಕಾರಣಕ್ಕೆ ಸಿದ್ದರಾಮಯ್ಯಗೆ ಕಪ್ಪುಮಸಿ ಬಳಿಯಲು ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆ ನಿಲ್ಲಿಸಲ್ಲ, 2028ಕ್ಕೆ ಮತ್ತೆ ಅಧಿಕಾರಕ್ಕೆ ಬಂದು ಗ್ಯಾರೆಂಟಿ ಯೋಜನೆ ಮುಂದುವರಿಸುತ್ತೇವೆ ಎಂದು ಭರವಸೆಯ ಮಾತನ್ನಾಗಿದ್ದಾರೆ ಸಿಎಂ ಸಿದ್ದರಾಮಯ್ಯ.

ಇನ್ನು ಹಾವೇರಿಯ ಸವಣೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಸೂರ್ಯ ಚಂದ್ರ ಇರೋವರೆಗೂ ಗ್ಯಾರಂಟಿ ನಿಲ್ಲಿಸೋಕೆ ಆಗಲ್ಲ ಎಂದಿದ್ದಾರೆ. ಇಂದಿರಾ ಗಾಂಧಿ ಘೋಷಿಸಿದ ಯೋಜನೆ ಸೇರಿ ಹಲವಾರು ಯೋಜನೆಗಳು ಚಾಲ್ತಿಯಲ್ಲಿವೆ. ಉದ್ಯೋಗ ಖಾತ್ರಿ ಮುಂದುವರಿದಿಲ್ಲವೇ.. ಹಾಗೆ ನಮ್ಮ ಗ್ಯಾರಂಟಿಗಳು ಮುಂದುವರಿಯುತ್ತವೆ. ನಾವು ಯಾರನ್ನು ಟಿಕೀಸಲು ಬಂದಿಲ್ಲ. ಕೊಟ್ಟ ಮಾತು ಉಳಿಸಿಕೊಂಡು ಹೋಗ್ತೇವೆ ಎಂದಿದ್ದಾರೆ.
ಈ ರಾಜ್ಯದಲ್ಲಿ 2028 ರಲ್ಲೂ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಉಪ ಚುನಾವಣೆ ಫಲಿತಾಂಶದ ಮೂಲಕ 2028 ರ ಚುನಾವಣೆಗೆ ದಿಕ್ಸುಚಿ ಕೊಟ್ಟಿದ್ದೀರಿ. ಹಾವೇರಿ ಜಿಲ್ಲೆ ಬಿಜೆಪಿ ಮುಕ್ತವಾಗಿದೆ. ಇಡೀ ರಾಜ್ಯಕ್ಕೆ ಜನ ಇಲ್ಲಿಂದ ಸಂದೇಶ ಕಳಿಸಿದ್ದಾರೆ. ಇದು ಪಠಾಣ್ ಚುನಾವಣೆ ಅಲ್ಲ, ಪಠಾಣ್ ಗೆಲುವಲ್ಲ, ಈ ಕ್ಷೇತ್ರದ ಕಾರ್ಯಕರ್ತರ ಗೆಲುವು ಎಂದಿದ್ದಾರೆ. ಹಾವೇರಿ ಉತ್ತರ ಕರ್ನಾಟಕದ ಹೆಬ್ಬಾಗಿಲು, ಬಿಜೆಪಿ ಮುಕ್ತ ಜಿಲ್ಲೆನ್ನಾಗಿ ಮಾಡಿ, ಇಡಿ ರಾಜ್ಯಕ್ಕೆ ಸಂದೇಶ ಕಳಿಸಿದ್ದೀರಿ. ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ. ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆ ಅಜರಾಮರ ಎಂದು ಬಣ್ಣಿಸಿದ್ದಾರೆ.