• Home
  • About Us
  • ಕರ್ನಾಟಕ
Thursday, January 29, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ವಕ್ಫ್​ ವಿರೋಧಿ ಹೋರಾಟ.. ಮೋದಿ ನಿಮಗೆ ಆಗದಿದ್ರೆ ಹೇಳಿ ಪಾಕ್​ಗೆ ಬುದ್ಧಿ ಕಲಿಸ್ತೇವೆ..

ಕೃಷ್ಣ ಮಣಿ by ಕೃಷ್ಣ ಮಣಿ
May 3, 2025
in Top Story, ಕರ್ನಾಟಕ, ದೇಶ
0
ವಕ್ಫ್​ ವಿರೋಧಿ ಹೋರಾಟ.. ಮೋದಿ ನಿಮಗೆ ಆಗದಿದ್ರೆ ಹೇಳಿ ಪಾಕ್​ಗೆ ಬುದ್ಧಿ ಕಲಿಸ್ತೇವೆ..
Share on WhatsAppShare on FacebookShare on Telegram

ವಿಜಯಪುರ: ವಕ್ಪ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಮರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ದಾರೆ. ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ಮಾಡಲಾಗಿದೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಸಮಾವೇಶ ಮಾಡಲಾಗಿದ್ದು, ಸಮಾವೇಶದಲ್ಲಿ ಜಿಲ್ಲೆಯ ಮೌಲ್ವಿಗಳು, ಮುತುವಲ್ಲಿಗಳು, ದರ್ಗಾ ಕಮಿಟಿಯವರು, ಖಬರ್ ಸ್ಥಾನ್ ಕಮಿಟಿ ಮುಖಂಡರು ಭಾಗಿಯಾಗಿದ್ದಾರೆ.

ADVERTISEMENT

ವಿಜಯಪುರದ ಸಮಾವೇಶದಲ್ಲಿ ಮೌಲಾನಾ ಮಹಮ್ಮದ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮೋದಿ ನಿಮಗೆ ಪಾಠ ಕಲಿಸುತ್ತೇವೆ. 2014 ರಿಂದ ನಿಮ್ಮ ಎಲ್ಲ ರೆಕಾರ್ಡ್ ನಮ್ಮ ಬಳಿ ಇದೆ. ಸಿಎಎ ಕೂಡ ಪಾಸ್ ಮಾಡಲು ನಾವು ಬಿಡಲಿಲ್ಲ. ರೈತರ ಹೋರಾಟಕ್ಕೆ ಮುಸ್ಲಿಂಮರು ಬೆಂಬಲ ನೀಡಿದರು. ನೀವು ಮಾಡಿರೋ ಆ್ಯಕ್ಟ್ ವಾಪಸ್ ಪಡೆಯೋಕೆ ನಾವು ಹೋರಾಟ ಮಾಡುತ್ತೇವೆ. ವಕ್ಫ್​ ಕಾಯ್ದೆ ನೀವು ವಾಪಸ್ ತಗೊಳ್ಳಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.

ಒಂದು ವೇಳೆ ವಕ್ಫ್​ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯದಿದ್ದರೆ ದೇಶದಲ್ಲಿ ಮುಸ್ಲಿಮರು ಹೋರಾಟ ಮಾಡಲಿದ್ದಾರೆ. ಧರ್ಮಕ್ಕಾಗಿ ನಾವು ಯಾವ ಹೋರಾಟಕ್ಕೂ ಸಿದ್ದವಾಗಿದ್ದೇವೆ. ದೇಶದ ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ಪಾರ್ಲಿಮೆಂಟ್ ಪಾಸ್ ಮಾಡುವ ಕಾಯ್ದೆ ಒಪ್ಪಬೇಕು ಎಂದು ಅಮಿತ್ ಶಾ ಹೇಳ್ತಾರೆ. ಆದರೆ ನಾವು ಇದನ್ನು ಒಪ್ಪಲ್ಲ. ನೀವು ಮತ್ತೆ ಇದನ್ನ ಪಾರ್ಲಿಮೆಂಟ್​ನಲ್ಲಿ ತರಬೇಕು. ಮೋದಿ ಅವಧಿಯಲ್ಲಿ ಒಂದೇ ಒಂದು ಮುಸ್ಲಿಂ ಪರವಾದ ಕಾನೂನು ಮಾಡಿಲ್ಲ. ವಕ್ಫ್​ ಬಿಲ್ ತರುವ ಮೊದಲು ಯಾವತ್ತಾದರೂ ಮುಸ್ಲಿಮರನ್ನ ಕೇಳಿದ್ದಿರಾ..? ಜೆಪಿಸಿ ಕಮಿಟಿ ಸದಸ್ಯರನ್ನ ಮಾತನ್ನು ಮಾತ್ರ ಕೇಳಿದ್ದೀರಿ ಎಂದು ಟೀಕಿಸಿದ್ದಾರೆ.

ಈ ಕಾಯ್ದೆ ಮಾಡಬೇಡಿ ಎಂದು ಶೇಕಡ 99 ರಷ್ಟು ಜನ ಬೇಡ ಅಂದ್ರು. ಆದರೂ ಯಾಕೆ ತಿದ್ದುಪಡಿ ಮಾಡಿದ್ದಿರಾ..? ಜೆಪಿಸಿ ಸಹ ಮುಸ್ಲಿಮರನ್ನ ಭೇಟಿ ಮಾಡದೆ ವರದಿ ನೀಡಿದೆ. ನೀವು ಈ ಕಾನೂನು ವಾಪಸ್ ಪಡೆಯಲೇಬೇಕು. ನಾವು ಯಾವುದೇ ತ್ಯಾಗಕ್ಕೂ ಸಿದ್ದವಾಗಿದ್ದೇವೆ. ಈ ಸರ್ಕಾರದಲ್ಲಿರುವರಿಗೆ ಬುದ್ದಿಮಟ್ಟ ಕಡಿಮೆ ಇದೆ. ಕರ್ನಾಟಕದಲ್ಲಿ ಮುಸ್ಲಿಂ ಅಲ್ಲದವರು ಕೂಡಾ ಈ ಕಾಯ್ದೆ ವಿರೋಧಿಸಿದ್ದಾರೆ. ದೇಶದ ಗಲ್ಲಿ ಗಲ್ಲಿಯಲ್ಲಿ ಮುಸ್ಲಿಂಮರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಮುಸ್ಲಿಮರು ಅಲ್ಲದವರನ್ನೂ ನಾವು ನಮ್ಮ ಜೊತೆಗೆ ಕರೆದುಕೊಂಡು ಹೋಗಬೇಕಿದೆ ಎಂದು ಕರೆ ನೀಡಿದ್ದಾರೆ.

ಹಿಂದುತ್ವಕ್ಕೆ ಬೀದಿ ಹೆಣ ಉಚಿತ ಪ್ರತೀಕಾರಕ್ಕೆ ಮುಸ್ಲಿಂ ಹೆಣ ಖಚಿತ. ಹೊಣೆ ರಾಜಕಾರಣಿಗಳೋ ಅಧಿಕಾರಿಗಳೋ ?#pratidhvani

ದೆಹಲಿ ಮುಸ್ಲಿಂ ಮುಖಂಡ ಮೌಲಾನಾ ಅಬು ತಾಲಿಬ್ ರೆಹಮಾನಿ ಮಾತನಾಡಿ, ದೇಶದಲ್ಲಿ ಅಲ್ಲಾನನ್ನು ನಂಬುವ ಎಲ್ಲರನ್ನೂ ನಾವು ಮುಸ್ಲಿಂ ಎನ್ನುತ್ತೇವೆ. ಅವರು ಯಾವುದೇ ಧರ್ಮದವರು ಇರಲಿ. ಅಲ್ಲಾ ನಂಬಿದರವರು ಎಲ್ಲರು ಮುಸ್ಲಿಮರು. ದೇಶದಲ್ಲಿ ಹೆಸರು ಬದಲಾವಣೆ ಜೋರಾಗಿ ನಡೆಯುತ್ತಿದೆ. ನಮಗೆ ಅದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಮುಸ್ಲಿಮರು ಈ ದೇಶವನ್ನು ಆಳಿದರು ಸಹ ಎಂದಿಗೂ ದೇಶದ ಹೆಸರು ಬದಲಾವಣೆ ಮಾಡಿಲ್ಲ. ಹಜರತ್ ನರೇಂದ್ರ ಮೋದಿ ಸಾಬ್ ಎಂದು ವ್ಯಂಗ್ಯವಾಡಿದ ತಾಲಿಬ್ ರೆಹಮಾನಿ. 2014 ರಿಂದ ದೇಶದಲ್ಲಿ ಹೃದಯಗಳನ್ನ ಒಡೆದು ಹಾಕಲಾಗುತ್ತಿದೆ ಎಂದಿದ್ದಾರೆ.

ಪಹಲ್ಗಾಮ್​ ದಾಳಿಗೆ ಉತ್ತರ ನೀಡಲು ಆಗದಿದ್ದರೆ ನಮಗೆ ಹೇಳಿ, ನಾವು ಉತ್ತರ ನೀಡುತ್ತೇವೆ ಎಂದಿರುವ ತಾಲಿಬ್ ರೆಹಮಾನಿ, ಒಂದು ಸಲ ನಮಗೆ ಅವಕಾಶ ಕೊಟ್ಟು ನೋಡಿ ಪಾಕಿಸ್ತಾನಕ್ಕೆ ಪಾಠ ಕಲಿಸುತ್ತೇವೆ. ಇಸ್ಲಾಂನಲ್ಲಿ ದೇಶವನ್ನ ಪ್ರತಿನಿಧಿಸುವುದನ್ನ ಕಲಿತಿದ್ದೇವೆ. ಇಂದು ದೇಶದಲ್ಲಿ ದೇಶಭಕ್ತಿಯ ಹೆಸರಿನಲ್ಲಿ ವಸ್ತುಗಳನ್ನ ಮಾರಾಟ ಮಾಡಲಾಗ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಂ ಒಂದಾಗಿರಿ. ಹೆಂಡತಿ, ಮಕ್ಕಳಿಲ್ಲದ ಕೆಲವರಿಗೆ ಪ್ರೀತಿ ಅಂದರೇನು ಗೊತ್ತಿಲ್ಲ. ದೇಶದಲ್ಲಿ ಮೊದಲ ಮಸ್ಜಿದ್ ಕಟ್ಟಿದ್ದು ಒಬ್ಬ ಹಿಂದೂ‌ ರಾಜ. ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಾರೆ ಅಖಂಡ ಭಾರತ ಕಟ್ಟೋಣ ಅಂತಾ. ಆದರೆ ಶರಬತ್ ಮಾರಾಟ ಮಾಡುವವರಿಗೆ ದೇಶದ ಅಖಂಡತೆ ಬಗ್ಗೆ ಏನು ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

Tags: dawoodi bohra on waqfdawoodi bohra waqf billModimodi govt table waqf billmodi livemodi newsmodi on waqf billmodi on waqf lawmodi vs congress on waqf boardmodi vs waqfNarendra ModiPM Modipm modi on waqfpm modi waqfwaqfwaqf actwaqf amendment billWaqf Billwaqf bill in lok sabhawaqf bill in parliamentWaqf Boardwaqf board amendment billwaqf board billwaqf board bill in parliamentwaqf news
Previous Post

ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 

Next Post

BREAKING NEWS : ಗೋವಾ ಶ್ರೀ ಲೈರಾಯಿ ಜಾತ್ರೆಯಲ್ಲಿ ಘೋರ ದುರಂತ – ಕಾಲ್ತುಳಿತದಲ್ಲಿ 7 ಸಾವು..70ಕ್ಕೂ ಹೆಚ್ಚು ಮಂದಿಗೆ ಗಾಯ

Related Posts

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ
ಇದೀಗ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

by ಪ್ರತಿಧ್ವನಿ
January 28, 2026
0

ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ ವಿಜಯನಗರದ ತಮ್ಮ ಮನೆಯಿಂದ ಹೊರಗಡೆ ಬಂದಿದ್ದ ಸುಬ್ಬರಾವ್ ಗೆ ಹೃದಯಾಘಾತವಾಗಿದ್ದು,...

Read moreDetails
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

January 28, 2026
ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
Next Post
BREAKING NEWS : ಗೋವಾ ಶ್ರೀ ಲೈರಾಯಿ ಜಾತ್ರೆಯಲ್ಲಿ ಘೋರ ದುರಂತ – ಕಾಲ್ತುಳಿತದಲ್ಲಿ 7 ಸಾವು..70ಕ್ಕೂ ಹೆಚ್ಚು ಮಂದಿಗೆ ಗಾಯ

BREAKING NEWS : ಗೋವಾ ಶ್ರೀ ಲೈರಾಯಿ ಜಾತ್ರೆಯಲ್ಲಿ ಘೋರ ದುರಂತ - ಕಾಲ್ತುಳಿತದಲ್ಲಿ 7 ಸಾವು..70ಕ್ಕೂ ಹೆಚ್ಚು ಮಂದಿಗೆ ಗಾಯ

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

January 28, 2026
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada