• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಗರದ ಮತ್ತೊಂದು ಫ್ಲೈ ಓವರ್‌ ಶಿಥಿಲ : MES ಮೇಲ್ಸೇತುವೆ ಬೇರಿಂಗ್‌ ಕ್ಷೀಣ!

ಕರ್ಣ by ಕರ್ಣ
February 19, 2022
in ಕರ್ನಾಟಕ
0
ನಗರದ ಮತ್ತೊಂದು ಫ್ಲೈ ಓವರ್‌ ಶಿಥಿಲ : MES ಮೇಲ್ಸೇತುವೆ ಬೇರಿಂಗ್‌ ಕ್ಷೀಣ!
Share on WhatsAppShare on FacebookShare on Telegram

ಪೀಣ್ಯ ಫ್ಲೈ (flyover) ಓವರ್ ಶಿಥಿಲಗೊಂಡ ಬೆನ್ನಲ್ಲೆ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (CM Basavaraj Bommai) ಅವರೇ ಪೀಣ್ಯ ಮೇಲ್ಸೇತುವೆ (peenya flyover) ಸಂಚಾರಕ್ಕೆ ಯೋಗ್ಯವಲ್ಲ ವೆಂದು ಹೇಳಿದ್ದರು. ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಫ್ಲೈ ಓವರ್‌ ನ ಪಿಲ್ಲರ್‌ ನಂಬರ್‌ 101ರಿಂದ 104ರವರೆಗೆ ಶಿಥಿಲಗೊಂಡು ಘನವಾಹನಗಳ ಓಡಾಟಕ್ಕೆ ಅಪಾಯಕಾರಿಯಾಗಿತ್ತು. ಅದಾಗಿ 52 ದಿನಗಳ ಮೇಲ್ಸೇತುವೆ ಬಂದ್‌ ಮಾಡಿ ದುರಸ್ತಿ ಕಾರ್ಯ ನಡೆಸಲಾಯ್ತು. ಸದ್ಯ ಮೇಲ್ಸೇತುವೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ತೆರಯಲಾಗಿದೆ. ಇದರ ನಡುವೆ ನಗರದ ಎಲ್ಲಾ ಫ್ಲೈ ಓವರ್‌ಗಳ ಗುಣಮಟ್ಟ ಮೌಲ್ಯ ಮಾಪನ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಇದೀಗ ನಗರದ ಮತ್ತೊಂದು ಮೇಲ್ಸೇತುವೆ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸ್ವತಃ ಬಿಬಿಎಂಪಿಯೇ (BBMP) ಅಭಿಪ್ರಾಯ ಪಟ್ಟಿದೆ.

ADVERTISEMENT

ಹೌದು, ಪೀಣ್ಯ ಆಯ್ತು.. ಇದೀಗ ನಗರದಲ್ಲಿ ಮತ್ತೊಂದು ಮೇಲ್ಸೇತುವೆ ಶಿಥಿಲವಾಸ್ಥೆಯಲ್ಲಿದೆ. ಅದ್ಯಾವಾಗ ಪೀಣ್ಯ ಮೇಲ್ಸೇತುವೆ ಕಳಪೆಕಾಮಗಾರಿ ಎಂದು ತಿಳಿಯಿತೋ, ಆಗಿಂದಲೇ ನಗರದ ಎಲ್ಲಾ ಫ್ಲೈ ಓವರ್ ಗಳ ಗುಣಮಟ್ಟ ಮೌಲ್ಯ ಮಾಪನಕ್ಕೆ ಆಗ್ರಹ ಹೆಚ್ಚಿತು. ಇದರ ಬೆನ್ನಲ್ಲೇ ಗೋರಗುಂಟೆಪಾಳ್ಯದ ಬಳಿಯ MES ಫ್ಲೈ ಓವರ್ ನ ಬೇರಿಂಗ್ ನಲ್ಲಿ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಸದಾ ವಾಹನಗಳಿಂದ ಗಿಜುಗುಡುವ ಈ ಫ್ಲೈ ಓವರ್ ನ ಬೇರಿಂಗ್ ವೀಕ್ ಆಗಿದೆ. ಯಾವಾಗ ಬೇಕಿದ್ದರೂ ಆಪಾಯಕ್ಕೆ ಮುನ್ನುಡಿ ಬರೆಯುವ ಹಂತದಲ್ಲಿದೆ ಈ MES ಮೇಲ್ಸೇತವೆ.

ಬಿಬಿಎಂಪಿ ವ್ಯಾಪ್ತಿಗೆ ಬರುವ MES ಮೇಲ್ಸೇತುವೆ ಸ್ಥಿತಿ ಚಿಂತಾಜನಕ!

ಈ ಬಗ್ಗೆ ಸ್ವತಃ ಬಿಬಿಎಂಪಿಯೇ ನಡೆಸಿದ ಗುಣಮಟ್ಟ ಮೌಲ್ಯಪಾನದಲ್ಲಿ ವಿಚಾರ ಬಹಿರಂಗವಾಗಿದೆ. 2017ರಲ್ಲಿ ರೈಲ್ವೇ ಇಲಾಖೆಯಿಂದ MES ಫ್ಲೈ ಓವರ್ ನಿರ್ಮಾಣಗೊಂಡಿದೆ. 2020ರಲ್ಲಿ ನಿರ್ವಹಣೆಗೆಂದು ಸೇತುವೆಯನ್ನು ರೈಲ್ವೇ ಇಲಾಖೆ ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಅದಾಗಿ 2021ರಲ್ಲಿ ಬೇರಿಂಗ್ ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಪಾಲಿಕೆ ಕ್ಯಾಪೆಸಾಟಿ ಟೆಸ್ಟಿಂಗ್‌ (Capacity Testing) ಮಾಡಿಸಿತ್ತು. ಬಿಬಿಎಂಪಿ ನಡೆಸಿದ ಗುಣಮಟ್ಟ ಮೌಲ್ಯಮಾಪನದಲ್ಲಿ ಘನವಾಹನಗಳ ಓಡಾಟಕ್ಕೆ ಯೋಗ್ಯವಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. ತಕ್ಷಣವೇ ವರದಿ ತಯಾರಿಸಿ ರೈಲ್ವೇ ಇಲಾಖೆಗೆ ದುರಸ್ತಿ ನಡೆಸುವಂತೆ ಬಿಬಿಎಂಪಿ 25/11/2021ರಂದು ಪತ್ರವನ್ನೂ ಬರೆದಿತ್ತು. (ಈ ಪತ್ರದ ಪ್ರತಿ ಪ್ರತಿಧ್ವನಿಗೆ ಲಭ್ಯವಾಗಿದೆ)

ದುರಂತ ನಡೆದರೆ ನಾವದಕ್ಕೆ ಹೊಣೆಯಲ್ಲ : ಪತ್ರದಲ್ಲಿ ಬಿಬಿಎಂಪಿ ಉಲ್ಲೇಖ!

ಇನ್ನು ಪತ್ರದಲ್ಲಿ ಬಿಬಿಎಂಪಿ, ಬಿರುಕಿನ ತೀವ್ರತೆ ಪರಿಗಣಿಸಿ ತಕ್ಷಣವೇ ದುರಸ್ಥಿಕಾರ್ಯ ಕೈಗೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿತ್ತು. ಅದಾಗಿಯೂ ಇದರಿಂದೇನಾದರೂ ದುರಂತ ನಡೆದರೆ ಅದಕ್ಕೆ ಹೊಣೆ ಬಿಬಿಎಂಪಿ ಅಲ್ಲ ಕೂಡ ಪಾಲಿಕೆ ಸ್ಪಷ್ಟ ಪಡಿಸಿತ್ತು. ಪತ್ರ ಬರೆದು ಎರಡು ತಿಂಗಳಾದರೂ MES ಮೇಲ್ಸೇತುವೆ ದುರಸ್ಥಿ ಕಾರ್ಯ ನಡೆದಿಲ್ಲ. ಪ್ರತಿ ದಿನ ಸಾವಿರಾರು ವಾಹನಗಳು ಈ ಫ್ಲೈ ಓವರ್ ಮೇಲೆ ಓಡಾಟ ನಡೆಸುತ್ತಿದೆ. ಕೆಳಗಡೆ ರೈಲ್ವೇ ಟ್ರ್ಯಾಕ್ (Railway Track) ಹಾದು ಹೋಗುತ್ತಿರುವ ಹಿನ್ನೆಲೆ ಎರಡು ಪ್ರಮುಖ ಪಾಯಿಂಟ್ ಕನೆಕ್ಟ್ ಮಾಡುವ ಪ್ರಮುಖ ಫ್ಲೈ ಓವರ್ ಇದು. ಬಳ್ಳಾರಿ (Bellary Road) ರಸ್ತೆಯಿಂದ ಬಂದು ತುಮಕೂರು (Tumkur road) ರಸ್ತೆ ಕನೆಕ್ಟ್ ಮಾಡುವ ರಿಂಗ್ ರಸ್ತೆಯ ಪ್ರಮುಖ ಮೇಲ್ಸೇತುವೆ ಇದು. ಈ ಫ್ಲೈ ಓವರ್ ಇಲ್ಲದಿದ್ದರೆ ಸುತ್ತಿ ಬಳಸಿಕೊಂಡು ತುಮಕೂರು ರಸ್ತೆ ಅಥವಾ ಬಳ್ಳಾರಿ ರಸ್ತೆಗೆ ಬರಬೇಕಾದ ಅನಿರ್ವಾಯತೆ ಇದೆ.

ನಗರದಲ್ಲಿ ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 66 ಮೇಲ್ಸೆತುವೆಗಳಿವೆ. ಸದ್ಯ ಬಿಬಿಎಂಪಿ ಉಸ್ತುವರಿಯಲ್ಲಿರುವ MES ಮೇಲ್ಸೇತುವೆಯ ಬೇರಿಂಗ್‌ ಕ್ಷೀಣಗೊಂಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಪತ್ರ ಬರೆದಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಬಿಬಿಎಂಪಿ ಹಾಗೂ ಇತರೆ ಇಲಾಖೆಗಳ ಮೇಲೆ ನಂಬಿಕೆ ಇಟ್ಟಿರುವ ಸಾರ್ವಜನಿಕರು ಹಾಯಾಗಿ ಓಡಾಡುತ್ತಿದ್ದಾರೆ. ಏನಾದರೊಂದು ದುರಂತ ನಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

new-doc-2022-02-18-14.42.54_compressedDownload

Tags: BBMPBJPcm basavaraj bommaiCongress PartyCovid 19FlyoverMES ಮೇಲ್ಸೇತುವೆpeenya flyoverಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಬಿಬಿಎಂಪಿಸಿದ್ದರಾಮಯ್ಯ
Previous Post

ಸಂಸತ್ತಿನಲ್ಲಿ ನೆಹರೂರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ

Next Post

ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada