• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನಗರದ ಮತ್ತೊಂದು ಫ್ಲೈ ಓವರ್‌ ಶಿಥಿಲ : MES ಮೇಲ್ಸೇತುವೆ ಬೇರಿಂಗ್‌ ಕ್ಷೀಣ!

ಕರ್ಣ by ಕರ್ಣ
February 19, 2022
in ಕರ್ನಾಟಕ
0
ನಗರದ ಮತ್ತೊಂದು ಫ್ಲೈ ಓವರ್‌ ಶಿಥಿಲ : MES ಮೇಲ್ಸೇತುವೆ ಬೇರಿಂಗ್‌ ಕ್ಷೀಣ!
Share on WhatsAppShare on FacebookShare on Telegram

ಪೀಣ್ಯ ಫ್ಲೈ (flyover) ಓವರ್ ಶಿಥಿಲಗೊಂಡ ಬೆನ್ನಲ್ಲೆ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (CM Basavaraj Bommai) ಅವರೇ ಪೀಣ್ಯ ಮೇಲ್ಸೇತುವೆ (peenya flyover) ಸಂಚಾರಕ್ಕೆ ಯೋಗ್ಯವಲ್ಲ ವೆಂದು ಹೇಳಿದ್ದರು. ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಫ್ಲೈ ಓವರ್‌ ನ ಪಿಲ್ಲರ್‌ ನಂಬರ್‌ 101ರಿಂದ 104ರವರೆಗೆ ಶಿಥಿಲಗೊಂಡು ಘನವಾಹನಗಳ ಓಡಾಟಕ್ಕೆ ಅಪಾಯಕಾರಿಯಾಗಿತ್ತು. ಅದಾಗಿ 52 ದಿನಗಳ ಮೇಲ್ಸೇತುವೆ ಬಂದ್‌ ಮಾಡಿ ದುರಸ್ತಿ ಕಾರ್ಯ ನಡೆಸಲಾಯ್ತು. ಸದ್ಯ ಮೇಲ್ಸೇತುವೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ತೆರಯಲಾಗಿದೆ. ಇದರ ನಡುವೆ ನಗರದ ಎಲ್ಲಾ ಫ್ಲೈ ಓವರ್‌ಗಳ ಗುಣಮಟ್ಟ ಮೌಲ್ಯ ಮಾಪನ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಇದೀಗ ನಗರದ ಮತ್ತೊಂದು ಮೇಲ್ಸೇತುವೆ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸ್ವತಃ ಬಿಬಿಎಂಪಿಯೇ (BBMP) ಅಭಿಪ್ರಾಯ ಪಟ್ಟಿದೆ.

ADVERTISEMENT

ಹೌದು, ಪೀಣ್ಯ ಆಯ್ತು.. ಇದೀಗ ನಗರದಲ್ಲಿ ಮತ್ತೊಂದು ಮೇಲ್ಸೇತುವೆ ಶಿಥಿಲವಾಸ್ಥೆಯಲ್ಲಿದೆ. ಅದ್ಯಾವಾಗ ಪೀಣ್ಯ ಮೇಲ್ಸೇತುವೆ ಕಳಪೆಕಾಮಗಾರಿ ಎಂದು ತಿಳಿಯಿತೋ, ಆಗಿಂದಲೇ ನಗರದ ಎಲ್ಲಾ ಫ್ಲೈ ಓವರ್ ಗಳ ಗುಣಮಟ್ಟ ಮೌಲ್ಯ ಮಾಪನಕ್ಕೆ ಆಗ್ರಹ ಹೆಚ್ಚಿತು. ಇದರ ಬೆನ್ನಲ್ಲೇ ಗೋರಗುಂಟೆಪಾಳ್ಯದ ಬಳಿಯ MES ಫ್ಲೈ ಓವರ್ ನ ಬೇರಿಂಗ್ ನಲ್ಲಿ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಸದಾ ವಾಹನಗಳಿಂದ ಗಿಜುಗುಡುವ ಈ ಫ್ಲೈ ಓವರ್ ನ ಬೇರಿಂಗ್ ವೀಕ್ ಆಗಿದೆ. ಯಾವಾಗ ಬೇಕಿದ್ದರೂ ಆಪಾಯಕ್ಕೆ ಮುನ್ನುಡಿ ಬರೆಯುವ ಹಂತದಲ್ಲಿದೆ ಈ MES ಮೇಲ್ಸೇತವೆ.

ಬಿಬಿಎಂಪಿ ವ್ಯಾಪ್ತಿಗೆ ಬರುವ MES ಮೇಲ್ಸೇತುವೆ ಸ್ಥಿತಿ ಚಿಂತಾಜನಕ!

ಈ ಬಗ್ಗೆ ಸ್ವತಃ ಬಿಬಿಎಂಪಿಯೇ ನಡೆಸಿದ ಗುಣಮಟ್ಟ ಮೌಲ್ಯಪಾನದಲ್ಲಿ ವಿಚಾರ ಬಹಿರಂಗವಾಗಿದೆ. 2017ರಲ್ಲಿ ರೈಲ್ವೇ ಇಲಾಖೆಯಿಂದ MES ಫ್ಲೈ ಓವರ್ ನಿರ್ಮಾಣಗೊಂಡಿದೆ. 2020ರಲ್ಲಿ ನಿರ್ವಹಣೆಗೆಂದು ಸೇತುವೆಯನ್ನು ರೈಲ್ವೇ ಇಲಾಖೆ ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಅದಾಗಿ 2021ರಲ್ಲಿ ಬೇರಿಂಗ್ ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಪಾಲಿಕೆ ಕ್ಯಾಪೆಸಾಟಿ ಟೆಸ್ಟಿಂಗ್‌ (Capacity Testing) ಮಾಡಿಸಿತ್ತು. ಬಿಬಿಎಂಪಿ ನಡೆಸಿದ ಗುಣಮಟ್ಟ ಮೌಲ್ಯಮಾಪನದಲ್ಲಿ ಘನವಾಹನಗಳ ಓಡಾಟಕ್ಕೆ ಯೋಗ್ಯವಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. ತಕ್ಷಣವೇ ವರದಿ ತಯಾರಿಸಿ ರೈಲ್ವೇ ಇಲಾಖೆಗೆ ದುರಸ್ತಿ ನಡೆಸುವಂತೆ ಬಿಬಿಎಂಪಿ 25/11/2021ರಂದು ಪತ್ರವನ್ನೂ ಬರೆದಿತ್ತು. (ಈ ಪತ್ರದ ಪ್ರತಿ ಪ್ರತಿಧ್ವನಿಗೆ ಲಭ್ಯವಾಗಿದೆ)

ದುರಂತ ನಡೆದರೆ ನಾವದಕ್ಕೆ ಹೊಣೆಯಲ್ಲ : ಪತ್ರದಲ್ಲಿ ಬಿಬಿಎಂಪಿ ಉಲ್ಲೇಖ!

ಇನ್ನು ಪತ್ರದಲ್ಲಿ ಬಿಬಿಎಂಪಿ, ಬಿರುಕಿನ ತೀವ್ರತೆ ಪರಿಗಣಿಸಿ ತಕ್ಷಣವೇ ದುರಸ್ಥಿಕಾರ್ಯ ಕೈಗೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿತ್ತು. ಅದಾಗಿಯೂ ಇದರಿಂದೇನಾದರೂ ದುರಂತ ನಡೆದರೆ ಅದಕ್ಕೆ ಹೊಣೆ ಬಿಬಿಎಂಪಿ ಅಲ್ಲ ಕೂಡ ಪಾಲಿಕೆ ಸ್ಪಷ್ಟ ಪಡಿಸಿತ್ತು. ಪತ್ರ ಬರೆದು ಎರಡು ತಿಂಗಳಾದರೂ MES ಮೇಲ್ಸೇತುವೆ ದುರಸ್ಥಿ ಕಾರ್ಯ ನಡೆದಿಲ್ಲ. ಪ್ರತಿ ದಿನ ಸಾವಿರಾರು ವಾಹನಗಳು ಈ ಫ್ಲೈ ಓವರ್ ಮೇಲೆ ಓಡಾಟ ನಡೆಸುತ್ತಿದೆ. ಕೆಳಗಡೆ ರೈಲ್ವೇ ಟ್ರ್ಯಾಕ್ (Railway Track) ಹಾದು ಹೋಗುತ್ತಿರುವ ಹಿನ್ನೆಲೆ ಎರಡು ಪ್ರಮುಖ ಪಾಯಿಂಟ್ ಕನೆಕ್ಟ್ ಮಾಡುವ ಪ್ರಮುಖ ಫ್ಲೈ ಓವರ್ ಇದು. ಬಳ್ಳಾರಿ (Bellary Road) ರಸ್ತೆಯಿಂದ ಬಂದು ತುಮಕೂರು (Tumkur road) ರಸ್ತೆ ಕನೆಕ್ಟ್ ಮಾಡುವ ರಿಂಗ್ ರಸ್ತೆಯ ಪ್ರಮುಖ ಮೇಲ್ಸೇತುವೆ ಇದು. ಈ ಫ್ಲೈ ಓವರ್ ಇಲ್ಲದಿದ್ದರೆ ಸುತ್ತಿ ಬಳಸಿಕೊಂಡು ತುಮಕೂರು ರಸ್ತೆ ಅಥವಾ ಬಳ್ಳಾರಿ ರಸ್ತೆಗೆ ಬರಬೇಕಾದ ಅನಿರ್ವಾಯತೆ ಇದೆ.

ನಗರದಲ್ಲಿ ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 66 ಮೇಲ್ಸೆತುವೆಗಳಿವೆ. ಸದ್ಯ ಬಿಬಿಎಂಪಿ ಉಸ್ತುವರಿಯಲ್ಲಿರುವ MES ಮೇಲ್ಸೇತುವೆಯ ಬೇರಿಂಗ್‌ ಕ್ಷೀಣಗೊಂಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಪತ್ರ ಬರೆದಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಬಿಬಿಎಂಪಿ ಹಾಗೂ ಇತರೆ ಇಲಾಖೆಗಳ ಮೇಲೆ ನಂಬಿಕೆ ಇಟ್ಟಿರುವ ಸಾರ್ವಜನಿಕರು ಹಾಯಾಗಿ ಓಡಾಡುತ್ತಿದ್ದಾರೆ. ಏನಾದರೊಂದು ದುರಂತ ನಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

new-doc-2022-02-18-14.42.54_compressedDownload

Tags: BBMPBJPcm basavaraj bommaiCongress PartyCovid 19FlyoverMES ಮೇಲ್ಸೇತುವೆpeenya flyoverಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಬಿಬಿಎಂಪಿಸಿದ್ದರಾಮಯ್ಯ
Previous Post

ಸಂಸತ್ತಿನಲ್ಲಿ ನೆಹರೂರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ

Next Post

ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada