• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

2021ರ ಅಂತ್ಯದ ವೇಳೆಗೆ ಇರಾಕಿನಿಂದ ಅಮೆರಿಕ ತನ್ನ ಸೈನ್ಯ ಹಿಂತೆಗೆದುಕೊಳ್ಳಲಿದೆ: ಜೊ ಬೈಡೆನ್

ಫಾತಿಮಾ by ಫಾತಿಮಾ
July 29, 2021
in ದೇಶ, ವಿದೇಶ
0
2021ರ ಅಂತ್ಯದ ವೇಳೆಗೆ ಇರಾಕಿನಿಂದ ಅಮೆರಿಕ ತನ್ನ ಸೈನ್ಯ ಹಿಂತೆಗೆದುಕೊಳ್ಳಲಿದೆ: ಜೊ ಬೈಡೆನ್
Share on WhatsAppShare on FacebookShare on Telegram

ಆಗಸ್ಟ್ ಅಂತ್ಯದ ವೇಳೆಗೆ ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂದೆಗೆಯುವ ನಿರ್ಧಾರ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇರಾಕಿನ ಪ್ರಧಾನಿ ಮುಸ್ತಫಾ ಅಲ್-ಖಾದಿಮಿ ಸೋಮವಾರ ಒಪ್ಪಂದವೊಂದಕ್ಕೆ ಸಹಿ ಹಾಕಿ ಇರಾಕ್ನಲ್ಲಿ ಯುಎಸ್‌ನ ಯುದ್ಧ ಮಿಷನ್ 2021 ರ ಅಂತ್ಯದ ವೇಳೆಗೆ ಔಪಚಾರಿಕವಾಗಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಆದರೆ, ಯುಎಸ್ ಪಡೆಗಳು ಸಲಹಾ ಪಾತ್ರದಲ್ಲಿ ಕಾರ್ಯ ನಿರ್ವಹಿಸಲಿದೆ. 

ADVERTISEMENT

ಇರಾಕಿನ ಪ್ರಧಾನಿ ಅಲ್-ಖಾದಿಮಿ ಅವರು ಇರಾನ್‌ನಿಂದ ಪ್ರೇರಿತವಾಗಿರುವ ಬಂಡಾಯ ಗುಂಪುಗಳು ಮತ್ತು ಕೆಲ ವಿರೋಧ ಪಕ್ಷಗಳು ಹಾಗೂ ಅರೆಸೈನಿಕ ಗುಂಪುಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿದ್ದು ಅವರು ದೇಶದಲ್ಲಿ ಯುಎಸ್ ಮಿಲಿಟರಿ ಉಪಸ್ಥಿತಿಯನ್ನು ವಿರೋಧಿಸುತ್ತಾರೆ.  “ಇರಾಕ್ ಸೈನ್ಯಕ್ಕೆ ತರಬೇತಿ ನೀಡುವುದು, ಸಹಾಯ ಮಾಡುವುದು ಮತ್ತು ಐಸಿಸ್ ಉದ್ಭವಿಸಿದಂತೆ ವ್ಯವಹರಿಸುವುದರಲ್ಲಿ ನಮ್ಮ ಸೈನ್ಯ ಸಹಕಾರ ನೀಡಲಿದೆ ಆದರೆ ಈ ವರ್ಷದ ಅಂತ್ಯದ ವೇಳೆಗೆ ಒಂದು ತಂಡವಾಗಿ ಇರಾಕ್‌ನಲ್ಲಿ ಇರುವುದಿಲ್ಲ” ಎಂದು  ಓವಲ್ ಕಚೇರಿಯಲ್ಲಿನ ಖಾದಿಮಿಯೊಂದಿಗಿನ ಭೇಟಿಯ ನಂತರ ಬೈಡೆನ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಇರಾಕ್ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂಬ ಆರೋಪದ ಮೇಲೆ ಯುಎಸ್ ಸೈನ್ಯವು 2003 ರಲ್ಲಿ ಇರಾಕ್‌ ಮೇಲೆ ದಾಳಿ ಮಾಡಿತ್ತು. ಆ ನಂತರ‌‌ಇರಾಕ್ ನಾಯಕ ಸದ್ದಾಂ ಹುಸೇನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಆದರೆ  ಅಲ್ಲಿ ಅಂತಹ ಯಾವುದೇ ಶಸ್ತ್ರಾಸ್ತ್ರಗಳು ಕಂಡುಬಂದಿರಲಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು 2011 ರಲ್ಲಿ ಇರಾಕ್‌ನಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡರು ಆದರೆ ಇಸ್ಲಾಮಿಕ್ ಸ್ಟೇಟ್ ಪಶ್ಚಿಮ ಮತ್ತು ಉತ್ತರ ಇರಾಕ್‌ನ ದೊಡ್ಡ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ನಂತರ 2014 ರಲ್ಲಿ ಸೈನ್ಯವನ್ನು ಮತ್ತೆ ನಿಯೋಜಿಸಲಾಯಿತು.

ಪ್ರಸ್ತುತ, ಇರಾಕ್‌ನಲ್ಲಿ 2,500 ಯುಎಸ್ ಸೈನಿಕರು ಇದ್ದಾರೆ. ಐಎಸ್ಎಸ್‌ನ್ನು  ಸಂಪೂರ್ಣವಾಗಿ ಮಟ್ಟ ಹಾಕಲು ಇರಾಕಿ ಸೈನಿಕರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಲಾಗಿದೆ. ಯುಎಸ್ ಪಡೆಗಳು ಈಗ ಇರಾಕಿ ಮಿಲಿಟರಿಗೆ ತರಬೇತಿ ಮತ್ತು ಸಲಹೆ ನೀಡುವತ್ತ ಗಮನ ಹರಿಸಲಿವೆ.

ಈ ಮಧ್ಯೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಹೋರಾಡಲು ತಮ್ಮ ದೇಶಕ್ಕೆ ಅಮೆರಿಕದ ಯುದ್ಧ ಪಡೆಗಳ ಅಗತ್ಯವಿಲ್ಲ ಎಂದು ಇರಾಕ್ ಪ್ರಧಾನಿ ಮುಸ್ತಫಾ ಎ-ಖಾದಿಮಿ ಭಾನುವಾರ ಹೇಳಿದ್ದಾರೆ. ಯುಎಸ್ ಸೈನ್ಯದ ನಿರ್ಗಮನದ ಗಡುವನ್ನು ಘೋಷಿಸಿದ ನಂತರ ಅಲ್ಲಿನ ಪ್ರಧಾನಿ ಇರಾಕಿ ನೆಲದಲ್ಲಿ ಯಾವುದೇ ವಿದೇಶಿ ಯುದ್ಧ ಪಡೆಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.  ಇರಾಕ್‌ನ ಭದ್ರತಾ ಪಡೆಗಳು ಮತ್ತು ಸೈನ್ಯವು ಯುಎಸ್ ನೇತೃತ್ವದ ಸಮ್ಮಿಶ್ರ ಪಡೆಗಳಿಲ್ಲದೆ ದೇಶವನ್ನು ರಕ್ಷಿಸಲು ಸಮರ್ಥವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಯಾವುದೇ ವಾಪಸಾತಿ ವೇಳಾಪಟ್ಟಿ ಇರಾಕಿ ಪಡೆಗಳ ಅಗತ್ಯಗಳನ್ನು ಆಧರಿಸಿರುತ್ತದೆ ಎಂದು ಅಲ್-ಖಾದಿಮಿ ಹೇಳಿದ್ದಾರೆ.

ವಾಸ್ತವವಾಗಿ, ಐಎಸ್ ಭಯೋತ್ಪಾದಕ ಸಂಘಟನೆಯು ಅದರ ಹಿಂದಿನ ಸಂಘಟನೆಯ ಭಾಗವೇ ಆಗಿದ್ದು 2017 ರಲ್ಲಿ ಅಮೆರಿಕನ್ ಸೇನೆಯು ಬಹುತೇಕ ಐಎಸ್ ಭಯೋತ್ಪಾದಕರನ್ನು ಮಟ್ಟ ಹಾಕಿತ್ತು. ಆದರೂ‌‌ ಆ ಸಂಘಟನೆ  ಕಳೆದ ವಾರ ಜನನಿಬಿಡ ನಗರ ಬಾಗ್ದಾದ್‌ನ ಮಾರುಕಟ್ಟೆಯಲ್ಲಿ  ಬಾಂಬ್ ಸ್ಪೋಟ ನಡೆಸಿ ಕನಿಷ್ಠ 30 ಜನರು ಸಾವಿಗೆ ಕಾರಣವಾಗಿದೆ. ಮಾತ್ರವಲ್ಲದೆ ಸ್ಫೋಟದ ಜವಾಬ್ದಾರಿಯನ್ನೂ ವಹಿಸಿಕೊಂಡಿದೆ. ಈ ಮೂಲಕ ತಾನು ದಾಳಿಯನ್ನು ನಡೆಸಬಲ್ಲಷ್ಟು ಬಲಿಷ್ಠ ಎಂದು ತೋರಿಸಿದೆ.  

ಇರಾಕ್ ಒಳಗೆ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಸೇನಾಪಡೆಗಳು ಇತ್ತೀಚಿನ ತಿಂಗಳುಗಳಲ್ಲಿ ಯುಎಸ್ ಪಡೆಗಳ ವಿರುದ್ಧ ದಾಳಿಯನ್ನು ಹೆಚ್ಚಿಸಿವೆ. ಅಲ್ಲದೆ ನೂರಾರು ಜನರನ್ನು ಸಾಯಿಸಿದ ಆಸ್ಪತ್ರೆಗಳಲ್ಲಿ ನಡೆದ ಸರಣಿ ಬೆಂಕಿ ಅಪಘಾತ  ಮತ್ತು ಹೆಚ್ಚುತ್ತಿರುವ ಕರೋನವೈರಸ್ ಸೋಂಕು ಅಲ್-ಖಾದಿಮಿ ಅವರಿಗೆ ಸವಾಲೆಸೆಯುತ್ತಿವೆ.

ಅಕ್ಟೋಬರ್ 10 ರಂದು ನಡೆಯಲಿರುವ ಸಂಸತ್ತಿನ ಚುನಾವಣೆಗೆ ಮೂರು ತಿಂಗಳಿಗಿಂತ ಕಡಿಮೆ ಅವಧಿ‌ ಇರುವುದರಿಂದ ಯುಎಸ್ ಸೈನ್ಯವನ್ನು ವಾಪಾಸು ಕಳುಹಿಸುವ ಬಗ್ಗೆ ಈಗಲೇ‌ ಪ್ರಕಟಿಸಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯೂ ಖಾದಿಮಿ ಅವರಿಗೆ ಇದೆ. ಅಲ್ಲದೆ ಖಾದಿಮಿ ಬೆನ್ನಿಗೆ ನಿಂತಿರುವ ಬೈಡೆನ್ ಮಧ್ಯ ಏಷ್ಯಾದಲ್ಲಿ ಇರಾಕ್‌ನ ನಿಲುವನ್ನು ಸುಧಾರಿಸಿದ ಶ್ರೇಯಸ್ಸಿಗೆ ಅಲ್-ಖಾದಿಮಿ ಕೂಡ ಅರ್ಹರು ಎಂದಿದ್ದಾರೆ.

ಆದರೆ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇರಾನನ್ನು ಬಗಲಲ್ಲಿಟ್ಟುಕೊಂಡು ಅಮೆರಿಕ‌ ಮಿತ್ರ ಸೈನ್ಯಗಳು ಹಾಗೂ ಇರಾಕ್ ಸರ್ಕಾರ ಹೇಳುವುದನ್ನು ಕಣ್ಣು ಮುಚ್ಚಿ ನಂಬಲು ಜಗತ್ತು ತಯಾರಿಲ್ಲ. ಅಮೆರಿಕ ಸೇನೆಯ ವಾಪಾಸಾತಿ ಪೂರ್ಣವಾಗುವುದಕ್ಕಿಂತ ಮುನ್ನ ಅಫ್ಘಾನಿಸ್ತಾನದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿರುವಾಗ ಇರಾನ್‌ನಂತಹ ಬಲಿಷ್ಠ ರಾಷ್ಟ್ರದ ಬೆಂಬಲ ಇರುವ ಇರಾಕಿನ ಬಂಡಾಯಗಾರರು ಶರಣಾಗುತ್ತಾರೆ ಎಂದು ಭಾವಿಸುವುದು ತಪ್ಪಾಗುತ್ತದೆ. 2020 ರ ಜನವರಿಯಲ್ಲಿ ಪಶ್ಚಿಮ ಇರಾಕ್‌ನ ಅಲ್-ಅಸಾದ್ ವಾಯುನೆಲೆಯ ಮೇಲೆ ಇರಾನ್ ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಿದಾಗ  ಯುಎಸ್ ಸೈನ್ಯದ ದುರ್ಬಲತೆಯು ಅತ್ಯಂತ ನಾಟಕೀಯವಾಗಿ ಜಗತ್ತಿನ ಮುಂದೆ ಪ್ರದರ್ಶನವಾಗಿತ್ತು.  ಈ ದಾಳಿಯಲ್ಲಿ ಯಾವುದೇ ಅಮೆರಿಕನ್ನರು ಕೊಲ್ಲಲ್ಪಟ್ಟಿರಲಿಲ್ಲ ಆದರೆ ಸ್ಫೋಟಗಳಿಂದ ಡಜನ್ಗಟ್ಟಲೆ ಜನರು ಆಘಾತಕಾರಿ ಮಿದುಳಿನ ಗಾಯವನ್ನು ಅನುಭವಿಸಿದ್ದರು.  ಯುಎಸ್ ಡ್ರೋಣ್ ದಾಳಿಯು ಇರಾನ್ ಮಿಲಿಟರಿ ಕಮಾಂಡರ್ ಕಾಸಿಮ್ ಸೊಲೈಮಾನಿ ಮತ್ತು ಹಿರಿಯ ಇರಾಕಿನ ಮಿಲಿಟಿಯ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಅವರನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಂದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿತ್ತು.

Tags: IraqJoe Bidenಮುಸ್ತಫಾ ಅಲ್-ಖಾದಿಮಿ
Previous Post

ಪೆಗಾಸಸ್ ವಿವಾದ: ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಬಿಜೆಪಿ ಪಟ್ಟು

Next Post

ಕೇರಳದಲ್ಲಿ ಶೇ 44%, ಮಧ್ಯಪ್ರದೇಶದಲ್ಲಿ ಶೇ 79% ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ: ಸೆರೋಸರ್ವೇ ವರದಿ

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
Next Post
ಕೇರಳದಲ್ಲಿ ಶೇ 44%, ಮಧ್ಯಪ್ರದೇಶದಲ್ಲಿ ಶೇ 79% ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ: ಸೆರೋಸರ್ವೇ ವರದಿ

ಕೇರಳದಲ್ಲಿ ಶೇ 44%, ಮಧ್ಯಪ್ರದೇಶದಲ್ಲಿ ಶೇ 79% ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ: ಸೆರೋಸರ್ವೇ ವರದಿ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada